ನಯಾರ ಎನರ್ಜಿ 
ವಾಣಿಜ್ಯ

ನಯಾರಾ ಪೆಟ್ರೋಲ್ ಪಂಪ್ ಗಳಲ್ಲಿ ರಿಯಾಯಿತಿ ದರದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ!

ಉಳಿದ ಪೆಟ್ರೋಲ್ ಪಂಪ್ ಗಳಿಗೆ ಹೋಲಿಕೆ ಮಾಡಿದರೆ ನಯಾರಾ ಪೆಟ್ರೋಲ್ ಪಂಪ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ 1 ರೂಪಾಯಿ ಕಡಿಮೆ ಇರುವುದು ವಿಶೇಷವಾಗಿದೆ.

ರಿಲಾಯನ್ಸ್ ಸಂಸ್ಥೆ ಹಾಗೂ ಅದರ ಬ್ರಿಟನ್ ಪಾಲುದಾರ ಸಂಸ್ಥೆ ಬಿಪಿ ಪಿಎಲ್ ಸಿ ಪೆಟ್ರೋಲ್, ಡೀಸೆಲ್ ಮಾರಾಟ ಕ್ಷೇತ್ರಕ್ಕೆ ಪ್ರವೇಶಿಸಿದ ಬೆನ್ನಲ್ಲೆ ಈಗ ಮತ್ತೊಂದು ಖಾಸಗಿ ಸಂಸ್ಥೆಯಾಗಿರುವ ನಯಾರಾ ಎನರ್ಜಿ ಪೆಟ್ರೋಲ್, ಡೀಸೆಲ್ ಮಾರಾಟದ ಔಟ್ ಲೆಟ್ ಗಳನ್ನು ವಿಸ್ತರಿಸುತ್ತಿದೆ. 

ಉಳಿದ ಪೆಟ್ರೋಲ್ ಪಂಪ್ ಗಳಿಗೆ ಹೋಲಿಕೆ ಮಾಡಿದರೆ ನಯಾರಾ ಪೆಟ್ರೋಲ್ ಪಂಪ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ 1 ರೂಪಾಯಿ ಕಡಿಮೆ ಇರುವುದು ವಿಶೇಷವಾಗಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಅಂತರರಾಷ್ಟ್ರೀಯ ದರಗಳಲ್ಲಿ ಇಳಿಕೆಯ ಹೊರತಾಗಿಯೂ ಬೆಲೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿದರೆ, ಇಂಧನ ಮಾರಾಟ ಕ್ಷೇತ್ರದಲ್ಲಿರುವ ಖಾಸಗಿ ಸಂಸ್ಥೆಗಳು ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭವನ್ನು ರವಾನಿಸಲು ಪ್ರಾರಂಭಿಸಿವೆ.

"ದೇಶೀಯ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ಮತ್ತು ಸ್ಥಳೀಯ ಗ್ರಾಹಕರಿಗೆ ಉತ್ತಮವಾಗಿ ಪೂರೈಸಲು, ನಾವು ಜೂನ್ 2023 ರ ಅಂತ್ಯದವರೆಗೆ ನಮ್ಮ ಮಳಿಗೆಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಗೆ  1 ರೂಪಾಯಿ ರಿಯಾಯಿತಿಯನ್ನು ಪರಿಚಯಿಸಿದ್ದೇವೆ" ಎಂದು ನಯಾರಾ ಎನರ್ಜಿಯ ವಕ್ತಾರರು ತಿಳಿಸಿದ್ದಾರೆ.

ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ 10 ರಾಜ್ಯಗಳಲ್ಲಿ ನಯಾರಾ ಎನರ್ಜಿ ರಿಯಾಯಿತಿ ದರದಲ್ಲಿ ಪೆಟ್ರೋಲ್ ಮಾರಾಟ ಮಾಡುತ್ತಿದೆ. ಭಾರತದ 86,925 ಪೆಟ್ರೋಲ್ ಪಂಪ್ ಗಳ ಪೈಕಿ ನಯಾರಾ ಎನರ್ಜಿ ಶೇ.7 ರಷ್ಟನ್ನು ಹೊಂದಿದೆ. 

ಈ ತಿಂಗಳ ಆರಂಭದಲ್ಲಿ, ರಿಲಯನ್ಸ್ ಮತ್ತು ಬಿಪಿಯ ಇಂಧನ ಜಂಟಿ ಉದ್ಯಮವಾದ ಜಿಯೋ-ಬಿಪಿ, ಸರ್ಕಾರಿ ಸ್ವಾಮ್ಯದ ಕಂಪನಿಗಳು ಮಾರಾಟ ಮಾಡುವ ಸಾಮಾನ್ಯ ದರ್ಜೆಯ ಡೀಸೆಲ್‌ ಗಿಂತ ಉತ್ತಮ ದರ್ಜೆಯ ಡೀಸೆಲ್ ನ್ನು ಪ್ರತಿ ಲೀಟರ್‌ಗೆ 1 ರೂಪಾಯಿಗೆ ಅಗ್ಗದ ದರಲ್ಲಿ ಮಾರಾಟ ಮಾಡಲು ಪ್ರಾರಂಭಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT