ಬಿಎಸ್ಎನ್ಎಲ್  online desk
ವಾಣಿಜ್ಯ

BSNL 'Reliance Jio ಎಡವಟ್ಟು': ಸರ್ಕಾರಕ್ಕೆ 1,757 ಕೋಟಿ ರೂ ನಷ್ಟ!

ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ(ಟಿಐಪಿ)ರಿಗೆ ಪಾವತಿಸಿದ ಆದಾಯ ಪಾಲಿನಲ್ಲಿ ಪರವಾನಿಗೆ ಶುಲ್ಕವನ್ನು ಕಡಿತಗೊಳಿಸಲು ವಿಫಲಗೊಂಡಿದ್ದರಿಂದ ಬಿಎಸ್‌ಎನ್‌ಎಲ್ 38.36 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ BSNL ಮಾಡಿದ ಮಹಾ ಎಡವಟ್ಟಿನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಬರೊಬ್ಬರಿ 1,757 ಕೋಟಿ ರೂ.ನಷ್ಟವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೇಖಪಾಲ (ಸಿಎಜಿ)ರ ವರದಿ ಹೇಳಿದೆ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ BSNL ಸ್ಥಿರ ಮೂಲಸೌಕರ್ಯಗಳ ಹಂಚಿಕೆಗಾಗಿ ತಮ್ಮ ನಡುವಿನ ಒಪ್ಪಂದದ ಪ್ರಕಾರ ಮೇ 2014ರಿಂದ ಹತ್ತು ವರ್ಷಗಳ ಕಾಲ ರಿಲಯನ್ಸ್ ಜಿಯೋ ಸಂಸ್ಥೆಗೆ ಶುಲ್ಕವನ್ನು ವಿಧಿಸುವಲ್ಲಿ ವಿಫಲಗೊಂಡಿದ್ದು, ಇದರಿಂದಾಗಿ ಸರ್ಕಾರವು 1,757.56 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೇಖಪಾಲ (ಸಿಎಜಿ)ರ ವರದಿ ಹೇಳಿದೆ.

ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ(ಟಿಐಪಿ)ರಿಗೆ ಪಾವತಿಸಿದ ಆದಾಯ ಪಾಲಿನಲ್ಲಿ ಪರವಾನಿಗೆ ಶುಲ್ಕವನ್ನು ಕಡಿತಗೊಳಿಸಲು ವಿಫಲಗೊಂಡಿದ್ದರಿಂದ ಬಿಎಸ್‌ಎನ್‌ಎಲ್ 38.36 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿ.(ಆರ್‌ಜೆಐಎಲ್) ಜೊತೆ ಮಾಸ್ಟರ್ ಸರ್ವಿಸ್ ಅಗ್ರಿಮೆಂಟ್(ಎಂಎಸ್‌ಎ)ನ್ನು ಜಾರಿಗೊಳಿಸುವಲ್ಲಿ ಬಿಎಸ್‌ಎನ್‌ಎಲ್ ವಿಫಲಗೊಂಡಿದ್ದು, ಮೇ 2014 ಮತ್ತು ಮೇ 2024ರ ನಡುವೆ ತನ್ನ ಸ್ಥಿರ ಮೂಲಸೌಕರ್ಯದಲ್ಲಿ ಬಳಸಿಕೊಂಡ ಹೆಚ್ಚುವರಿ ತಂತ್ರಜ್ಞಾನಕ್ಕೆ ಶುಲ್ಕವನ್ನು ವಿಧಿಸಿಲ್ಲ. ಇದು ಸರ್ಕಾರದ ಬೊಕ್ಕಸಕ್ಕೆ 1757.56 ಕೋಟಿ ರೂ. ಮತ್ತು ಅದರ ಮೇಲಿನ ದಂಡ ಬಡ್ಡಿಯ ನಷ್ಟಕ್ಕೆ ಕಾರಣವಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಸ್ಥಿರ ಮೂಲಸೌಕರ್ಯ ಹಂಚಿಕೆಯ ಮೇಲೆ ಬಿಎಸ್‌ಎನ್‌ಎಲ್ ಶಾರ್ಟ್ ಬಿಲ್ಲಿಂಗ್ ಮಾಡಿದೆ ಎನ್ನುವುದನ್ನೂ ಗಮನಿಸಿರುವ ಸಿಎಜಿ, 'ರಿಲಯನ್ಸ್ ಜಿಯೊ ಜೊತೆಗಿನ ಒಪ್ಪಂದದಲ್ಲಿ ನಿಗದಿ ಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಬಿಎಸ್‌ಎನ್‌ಎಲ್ ಪಾಲಿಸಿಲ್ಲ ಮತ್ತು ಹೆಚ್ಚಳ ನಿಬಂಧನೆಯನ್ನು ಅನ್ವಯಿಸಿಲ್ಲ,ಹೀಗಾಗಿ ಮೂಲಸೌಕರ್ಯ ಹಂಚಿಕೆ ಶುಲ್ಕಗಳಿಗೆ ಸಂಬಂಧಿಸಿದಂತೆ 29 ಕೋಟಿ ರೂ.(ಜಿಎಸ್‌ಟಿ) ಗಳ ಆದಾಯ ನಷ್ಟವಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.

4G ವಿಳಂಬದಿಂದ BSNL ಆದಾಯದ ಮೇಲೆ ಪರಿಣಾಮ

ಇತ್ತ ಟೆಲಿಕಾಂ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರ ಶೇಖರ್ ಇತ್ತೀಚೆಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡುತ್ತಾ, 'BSNL ಒಂದು ಲಕ್ಷ 4G ಸೈಟ್‌ಗಳಿಗೆ ಖರೀದಿ ಆದೇಶಗಳನ್ನು ನೀಡಿದೆ, ಅದರಲ್ಲಿ 83,993 ಸೈಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಮಾರ್ಚ್ 8 ರ ವೇಳೆಗೆ 74,521 ಸೈಟ್‌ಗಳು ಪ್ರಸಾರವಾಗುತ್ತಿವೆ ಎಂದು ಹೇಳಿದರು. ಅಂತೆಯೇ 4G ಸೇವೆಗಳ ಬಿಡುಗಡೆಯಲ್ಲಿ ವಿಳಂಬ ಮತ್ತು ಮೊಬೈಲ್ ವಿಭಾಗದಲ್ಲಿನ ತೀವ್ರ ಸ್ಪರ್ಧೆಯಿಂದಾಗಿ BSNL ಆದಾಯದ ಮೇಲೆ ಪರಿಣಾಮ ಬೀರಿದೆ" ಎಂದು ಸಚಿವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT