ಸಂಗ್ರಹ ಚಿತ್ರ 
ವಾಣಿಜ್ಯ

TRAI ಹೊಡೆತಕ್ಕೆ ತತ್ತರ: ಬರೀ Voice Call, SMS ಗಳ ನೂತನ ರೀಚಾರ್ಜ್ ಪ್ಲಾನ್​ ಘೋಷಿಸಿದ Airtel

ಏರ್‌ಟೆಲ್ ಈ ಯೋಜನೆಯನ್ನು 499 ರೂ.ಗೆ ಬಿಡುಗಡೆ ಮಾಡಿತ್ತು, ಈಗ ಅದನ್ನು 469 ರೂ.ಗೆ ಪರಿಷ್ಕರಿಸಲಾಗಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಸೂಚನೆ ನಂತರ, ಟೆಲಿಕಾಂ ಕಂಪನಿಗಳು ತಮ್ಮ Voice Call ಯೋಜನೆಗಳನ್ನು ಪ್ರಾರಂಭಿಸಲು ಮುಂದಾಗಿವೆ. ಕೆಲವು ದಿನಗಳ ಹಿಂದೆ, Jio ಮೊದಲು ಕೇವಲ Voice Call ಯೋಜನೆಗಳನ್ನು ಪ್ರಾರಂಭಿಸಿತು. ಇದರ ನಂತರ, Airtel ಮತ್ತು ವೊಡಾಫೋನ್-ಐಡಿಯಾ ಕೂಡ ತಮ್ಮ ಧ್ವನಿ ಮಾತ್ರ ಯೋಜನೆಗಳನ್ನು ಪರಿಚಯಿಸಿದವು. ಆದಾಗ್ಯೂ, ಟೆಲಿಕಾಂ ಕಂಪನಿಗಳು ಪ್ರಾರಂಭಿಸಿರುವ ವಾಯ್ಸ್ ಕಾಲ್ ಮಾತ್ರ ಯೋಜನೆಗಳನ್ನು 7 ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು TRAI ಸ್ಪಷ್ಟಪಡಿಸಿತ್ತು. ಈ ಆದೇಶದ ನಂತರ, ಏರ್‌ಟೆಲ್ ತನ್ನ ಎರಡೂ ಯೋಜನೆಗಳನ್ನು ಪರಿಷ್ಕರಿಸಿದ್ದು ಅವ ಅಗ್ಗವಾಗಿದೆ. ಈಗ ಬಳಕೆದಾರರು ಈ ಯೋಜನೆಗಳನ್ನು ಕಡಿಮೆ ಮೌತ್ತಕ್ಕೆ ಪಡೆಯುತ್ತಾರೆ.

ಏರ್‌ಟೆಲ್ ಈ ಯೋಜನೆಯನ್ನು 499 ರೂ.ಗೆ ಬಿಡುಗಡೆ ಮಾಡಿತ್ತು, ಈಗ ಅದನ್ನು 469 ರೂ.ಗೆ ಪರಿಷ್ಕರಿಸಲಾಗಿದೆ. ಕಂಪನಿಯು ಯೋಜನೆಯ ಬೆಲೆಯನ್ನು 30 ರೂ.ಗಳಷ್ಟು ಕಡಿಮೆ ಮಾಡಿದೆ. ಈ ಯೋಜನೆಯಲ್ಲಿ, ಬಳಕೆದಾರರು ಭಾರತದಾದ್ಯಂತ ಯಾವುದೇ ಸಂಖ್ಯೆಗೆ ಕರೆ ಮಾಡಲು ಅನಿಯಮಿತ ಧ್ವನಿ ಕರೆ ಮತ್ತು ಉಚಿತ ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ 900 ಉಚಿತ SMS ಗಳ ಪ್ರಯೋಜನವನ್ನು ನೀಡುತ್ತಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ಡೇಟಾವನ್ನು ನೀಡಲಾಗುವುದಿಲ್ಲ. ಇದರ ಪ್ರಯೋಜನಗಳು ವಿಶೇಷವಾಗಿ 2G ಫೀಚರ್ ಫೋನ್ ಬಳಕೆದಾರರಿಗೆ ಲಭ್ಯವಿರುತ್ತವೆ.

ಏರ್‌ಟೆಲ್ ಈ ಹಿಂದೆ ಈ ಯೋಜನೆಯನ್ನು 1959 ರೂ.ಗಳಿಗೆ ಬಿಡುಗಡೆ ಮಾಡಿತ್ತು. ಈಗ ಈ ಯೋಜನೆಯನ್ನು 1,849 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಕಂಪನಿಯು ಯೋಜನೆಯ ಬೆಲೆಯನ್ನು 110 ರೂ.ಗಳಷ್ಟು ಕಡಿಮೆ ಮಾಡಿದೆ. ಈ ಏರ್‌ಟೆಲ್ ಯೋಜನೆಯಲ್ಲಿ, ಬಳಕೆದಾರರು 365 ದಿನಗಳ ಪೂರ್ಣ ಮಾನ್ಯತೆಯನ್ನು ಪಡೆಯುತ್ತಾರೆ. ಇದರಲ್ಲಿ ಬಳಕೆದಾರರು ಅನಿಯಮಿತ ಕರೆ ಮತ್ತು ಉಚಿತ ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು ಒಟ್ಟು 3600 ಉಚಿತ SMS ಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ.

ಜಿಯೋದ ವಾಯ್ಸ್ ಕಾಲ್ ಮಾತ್ರ ಯೋಜನೆಗಳು

ರಿಲಯನ್ಸ್ ಜಿಯೋದ ವಾಯ್ಸ್ ಕಾಲ್ ಮಾತ್ರ ಯೋಜನೆಯ ಬಗ್ಗೆ ಹೇಳುವುದಾದರೆ, ಕಂಪನಿಯ 84 ದಿನಗಳ ಯೋಜನೆ 458 ರೂ.ಗಳಿಗೆ ಬರುತ್ತದೆ. ಈ ಯೋಜನೆಯಲ್ಲಿ, ಕಂಪನಿಯು ಭಾರತದಾದ್ಯಂತ ಅನಿಯಮಿತ ಧ್ವನಿ ಕರೆ ಜೊತೆಗೆ 1,000 ಉಚಿತ SMS ನೀಡುತ್ತದೆ. ಅದೇ ಸಮಯದಲ್ಲಿ, ಕಂಪನಿಯ 365 ದಿನಗಳ ಯೋಜನೆಯ ಬೆಲೆ 1,958 ರೂ. ಈ ಯೋಜನೆಯು ಅನಿಯಮಿತ ಕರೆ ಜೊತೆಗೆ 3,600 ಉಚಿತ SMS ಗಳ ಪ್ರಯೋಜನವನ್ನು ನೀಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT