ಬಿಗ್ ಬಿಲಿಯನ್ ಡೇ ಜಾಹೀರಾತು 
ವಾಣಿಜ್ಯ

iPhone 16, 16 Pro ಆರ್ಡರ್ Cancelled! ಏನಿದು 'ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ' ಶಾಕ್?

ಫ್ಲಿಪ್‌ಕಾರ್ಟ್ ಈಗ ದುಬಾರಿ ಬೆಲೆಗಳ ಹಿಂದೆ ಬಿದ್ದು ಜನರನ್ನು ವಂಚಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನವದೆಹಲಿ: ಸದ್ಯ ನಡೆಯುತ್ತಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟದಲ್ಲಿ iPhone 16 ಮತ್ತು iPhone 16 Pro ಮಾಡೆಲ್ ಗಳಿಗೆ ಕೆಲವೊಂದು ಭಾರಿ ರಿಯಾಯಿತಿ ಬೆಲೆಗಳನ್ನು ಪರಿಚಯಿಸಲಾಗಿತ್ತು. ಇದು ಪ್ರಪಂಚದಾದ್ಯಂತ ಸಾವಿರಾರು ಖರೀದಿದಾರರನ್ನು ಆಕರ್ಷಿಸಿತು. ಸೆಪ್ಟೆಂಬರ್ 22 ರಂದು Flipkart Black ಮತ್ತು ಸದಸ್ಯರಿಗೆ ನೇರವಾಗಿ ಮಾರಾಟ ಮಾಡಿತ್ತು. ಇಂದು ಕೂಡಾ ಎಲ್ಲಾ ಫ್ಲಿಪ್‌ಕಾರ್ಟ್ ಬಳಕೆದಾರರಿಗೆ ನೇರವಾಗಿ ಮಾರಾಟ ನಡೆಯುತ್ತಿದೆ.

ಆದಾಗ್ಯೂ, ಫ್ಲಿಪ್‌ಕಾರ್ಟ್ ಈಗ ದುಬಾರಿ ಬೆಲೆಗಳ ಹಿಂದೆ ಬಿದ್ದು ಜನರನ್ನು ವಂಚಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಏಕೆಂದರೆ ಆರ್ಡರ್ ಮಾಡಿದ ಕೆಲ ಗಂಟೆಗಳ ನಂತರ ತಮ್ಮ ಆರ್ಡರ್ ಅನ್ನು ಇ-ಕಾಮರ್ಸ್ ದೈತ್ಯ ರದ್ದುಗೊಳಿಸುತ್ತಿದೆ ಎಂದು ಖರೀದಿದಾರರು ವರದಿ ಮಾಡುತ್ತಿದ್ದಾರೆ.

ಇದು ಪಾರದರ್ಶಕತೆ, ಹೊಣೆಗಾರಿಕೆಯೇ ಅಥವಾ ಹೆಚ್ಚಿನ ಬೇಡಿಕೆ ಇರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುವ ತಂತ್ರವೇ? ಎಂಬ ಕಾರಣಗಳನ್ನು ಹುಟ್ಟುಹಾಕುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟದ ವಂಚನೆ ಕುರಿತು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಈ ವರ್ಷ, ಫ್ಲಿಪ್‌ಕಾರ್ಟ್ ಸ್ಟ್ಯಾಂಡರ್ಡ್ iPhone 16 ಮತ್ತು iPhone 16 Pro ಮಾಡೆಲ್ ಗಳ ಮೇಲೆ ಭಾರಿ ರಿಯಾಯಿತಿಗಳ ಜಾಹೀರಾತು ನೀಡಿತ್ತು. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಪೇಜ್ ಪ್ರಕಾರ, iPhone 16, 128GB storage variant ಬೆಲೆ ರೂ. 51,999 ಮತ್ತು iPhone 16 Pro’s 128GB storage variant ಬೆಲೆ ರೂ.69,999 ಎಂದು ಜಾಹೀರಾತು ನಲ್ಲಿ ಹೇಳಲಾಗಿತ್ತು.

ಆರಂಭದಲ್ಲಿ ಕೆಲ ಖರೀದಿದಾರರು ಈ ಡಿಸ್ಕೌಂಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಕುತೂಹಲ ಹೆಚ್ಚಿನ ಕಾಲ ಇರಲಿಲ್ಲ. ಖರೀದಿದಾರರು ಹಣ ಪಾವತಿಸಿ ಆರ್ಡರ್ ಮಾಡುತ್ತಿದ್ದಂತೆಯೇ ಅವುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಕೆಲ ಐಪೋನ್ ಖರೀದಿದಾರರು ಸಾಮಾಜಿಕ ಜಾಲತಾಣಗಳ ಮೂಲಕ 'ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್' ಒಂದು ವಂಚನೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

Pak ಸಚಿವನಿಗೆ ಮುಖಭಂಗ: ನೆತನ್ಯಾಹು ವಿರುದ್ಧ ಮಾತಾಡ್ತಿದ್ದಂತೆ ಶೋ ನಿಲ್ಲಿಸಿ ಆಸಿಫ್‌ನನ್ನು ಹೊರಕಹಿಸಿದ ಆ್ಯಂಕರ್, Video!

'ಅಪ್ಪ-ಅಮ್ಮನ ಪ್ರಜ್ಞೆ ತಪ್ಪಿಸಿ ಕಟ್ಟಿಹಾಕಿ ಕಳ್ಳತನ': ಮನೆಗೆಲಸದವರ ಮೇಲೆ ಮಾಜಿ ಐಎಎಸ್ ಅಧಿಕಾರಿ Puja Khedkar ಆರೋಪ!

1st ODI: ಮಿಚೆಲ್ ಸ್ಫೋಟಕ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್

ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಬೆದರಿಕೆ: SDPI, ಜಮಾತ್, ಸಂಘಟನೆಗಳ ಪಾತ್ರ ಪ್ರಶ್ನಿಸಿದ ಅಮಿತ್ ಶಾ!

SCROLL FOR NEXT