ಸಾಂದರ್ಭಿಕ ಚಿತ್ರ TNIE
ವಾಣಿಜ್ಯ

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಸಂಗ್ರಹ

2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ, ಸುಮಾರು 375 ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಸರಕುಗಳು ಅಗ್ಗವಾಗಿದ್ದವು.

ನವದೆಹಲಿ: ಕಳೆದ ಜನವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 6.2 ರಷ್ಟು ಏರಿಕೆಯಾಗಿದ್ದು, ಒಟ್ಟು 1.93 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಭಾನುವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ತಿಳಿಸಿವೆ.

ಒಟ್ಟು ಮರುಪಾವತಿ ಶೇ. 3.1 ರಷ್ಟು ಇಳಿಕೆಯಾಗಿ 22,665 ಕೋಟಿ ರೂ.ಗಳಿಗೆ ತಲುಪಿದೆ. ಆದಾಗ್ಯೂ, ನಿವ್ವಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಶೇ. 7.6 ರಷ್ಟು ಏರಿಕೆಯಾಗಿ, ಜನವರಿಯಲ್ಲಿ ಸುಮಾರು ರೂ. 1.71 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

ಜನವರಿ ತಿಂಗಳಲ್ಲಿ ತಂಬಾಕು ಉತ್ಪನ್ನಗಳಿಂದ ಸಂಗ್ರಹಿಸುವ ಸೆಸ್ ರೂ. 5,768 ಕೋಟಿಗಳಷ್ಟಿತ್ತು. ಕಳೆದ ವರ್ಷ ಜನವರಿಯಲ್ಲಿ ಕಾರುಗಳು ಮತ್ತು ತಂಬಾಕು ಉತ್ಪನ್ನಗಳಂತಹ ಐಷಾರಾಮಿ, ಮತ್ತು ದೋಷಯುಕ್ತ ಸರಕುಗಳ ಮೇಲೆ ಸೆಸ್ ವಿಧಿಸಲಾಗಿದ್ದಂತಹ ಸಂದರ್ಭದಲ್ಲಿ, ಆ ತಿಂಗಳಲ್ಲಿ ಅವುಗಳಿಂದ ರೂ. 13,009 ಕೋಟಿ ಸೆಸ್​ ಸಂಗ್ರಹವಾಗಿತ್ತು.

2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ, ಸುಮಾರು 375 ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಸರಕುಗಳು ಅಗ್ಗವಾಗಿದ್ದವು. ಉಳಿದಂತೆ, ಐಷಾರಾಮಿ, ಮತ್ತು ಹಾನಿಕರ ಸರಕುಗಳಿಗೆ ಬದಲಾಗಿ, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಮಾತ್ರ ಪರಿಹಾರ ಸೆಸ್ ಅನ್ನು ವಿಧಿಸಲಾಗಿತ್ತು. ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಿದ್ದು, ಆದಾಯ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದೆ.

ದೇಶೀಯ ವಹಿವಾಟುಗಳಿಂದ ಜನವರಿಯಲ್ಲಿ ಒಟ್ಟು ತೆರಿಗೆ ಸಂಗ್ರಹ ಶೇ. 4.8ರಷ್ಟು ಹೆಚ್ಚಾಗಿ 1.41 ಲಕ್ಷ ಕೋಟಿ ರೂ.ಗಳಿಗೆ ತಲುಪಿದ್ದರೆ, ಆಮದು ಆದಾಯ ಶೇ. 10.1 ರಷ್ಟು ಹೆಚ್ಚಾಗಿ 52,253 ಕೋಟಿ ರೂ.ಗಳಿಗೆ ತಲುಪಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳಲ್ಲಿ ಕಡಿತದ ಹೊರತಾಗಿಯೂ ಕಳೆದ ವರ್ಷ ಹಬ್ಬದ ಅವಧಿಯಲ್ಲಿ ಖರೀದಿ ಭರಾಟೆಯಿಂದಾಗಿ ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆಯಾಗಿತ್ತು. ಅಕ್ಟೋಬರ್‌ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ ಶೇ. 4.6 ರಷ್ಟು ಹೆಚ್ಚಾಗಿ ಸುಮಾರು 1.96 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಆಗಿತ್ತು. ಇದು ಹಬ್ಬದ ಋತುವಿನ ಮಾರಾಟದ ಪರಿಣಾಮ ಮತ್ತು ಹೆಚ್ಚಿನ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?