ಪ್ರವಾಹಪೀಡಿತ ಚೆನ್ನೈನಲ್ಲಿ ಗರ್ಭಿಣಿ ಮಹಿಳೆಯನ್ನು ರಕ್ಷಿಸಿದ ಸೇನೆಯ ಹೆಲಿಕ್ಯಾಪ್ಟರ್ 
ಬಾಲಿವುಡ್

ಸೇನೆಗೆ ಸೆಲ್ಯೂಟ್ ಹೊಡೆದ ಬಿಗ್ ಬಿ ಮತ್ತು ಅನುಷ್ಕ

ಪ್ರವಾಹಪೀಡಿತ ಚೆನ್ನೈ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಇದಕ್ಕೆ ಸಹಕರಿಸಿದ ಸೇನೆಯ ಯೋಧರಿಗೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ನಟಿ ಅನುಷ್ಕ ಶರ್ಮ

ಮುಂಬೈ: ಪ್ರವಾಹಪೀಡಿತ ಚೆನ್ನೈ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಇದಕ್ಕೆ ಸಹಕರಿಸಿದ ಸೇನೆಯ ಯೋಧರಿಗೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ನಟಿ ಅನುಷ್ಕ ಶರ್ಮ ನಮಿಸಿದ್ದಾರೆ. ಜನರನ್ನು ರಕ್ಷಿಸಿದ ಇವರು ನಿಜ ಜೀವನದ ಹಿರೋಗಳು ಎಂದಿದ್ದಾರೆ.

ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗೆ ಪ್ರಶಂಸೆ ತಿಳಿಸಲು ಸೋಮವಾರ ಬಿಗ್ ಬಿ ಮತ್ತು ಅನುಷ್ಕ ಶರ್ಮ ಟ್ವಿಟ್ಟರ್ ಮೊರೆ ಹೋಗಿದ್ದಾರೆ.

"ಚೆನ್ನೈಗಾಗಿ ಅವಿರತವಾಗಿ ಶ್ರಮಿಸಿದ ಸೇನೆ ಮತ್ತು ವಾಯುಪಡೆಯ ಹೀರೋಗಳನ್ನು ನಾವು ಮರೆಯದಿರೋಣ. ಸೆಲ್ಯೂಟ್" ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ.

ಸೇನೆಯ ಹೆಲಿಕ್ಯಾಪ್ಟರ್ ಒಂದರಲ್ಲಿ ಗರ್ಭಿಣಿ ಮಹಿಳೆಯನ್ನು ರಕ್ಷಿಸುತ್ತಿರುವ ಫೋಟೋ ಒಂದನ್ನು ಟ್ವೀಟ್ ಮಾಡಿರುವ ಅನುಷ್ಕ "#ಚೆನ್ನೈಪ್ರವಾಹ ಗರ್ಭಿಣಿ ಮಹಿಳೆಯನ್ನು ಹೆಲಿಕ್ಯಾಪ್ಟರ್ ಒಂದು ರಕ್ಷಿಸುತ್ತಿದೆ. ಇದಕ್ಕೆ ಒಳ್ಳೆಯ ಕೌಶಲ್ಯ ಬೇಕು" ಎಂದು ಬರೆದಿದ್ದಾರೆ.

"ದೇಶವನ್ನು ರಕ್ಷಿಸಲು ಯಾವುದೇ ಸ್ವಹಿತಾಸಕ್ತಿಯಿಲ್ಲದೆ ಸಹಾಯಕ್ಕೆ ಬರುವ ಸೇನೆಗೆ ನನ್ನ ನಮಸ್ಕಾರಗಳು. ಏನೇ ಪರಿಸ್ಥಿತಿ ಇದ್ದರು ಇದನ್ನು ಮರೆಯಬಾರದು" ಎಂದು ಕೂಡ ಅವರು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT