ಅಕ್ಷಯ್ ಕುಮಾರ್ 
ಬಾಲಿವುಡ್

ಚೆನ್ನೈ ಸಂತ್ರಸ್ತರಿಗೆ 1 ಕೋಟಿ ನೀಡಿದ ಅಕ್ಷಯ್

ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಯ ರೈತರ ಸಹಾಯಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ 90 ಲಕ್ಷ ರುಪಾಯಿ ನೀಡಿದ್ದರು. ಇದೀಗ ಮಹಾಮಳೆಗೆ ನಲುಗಿರುವ...

ಚೆನ್ನೈ: ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಯ ರೈತರ ಸಹಾಯಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ 90 ಲಕ್ಷ ರುಪಾಯಿ ನೀಡಿದ್ದರು. ಇದೀಗ ಮಹಾಮಳೆಗೆ ನಲುಗಿರುವ ಚೆನ್ನೈನ ಪುನರ್ವಸತಿಗಾಗಿ 1 ಕೋಟಿ ರುಪಾಯಿಯನ್ನು ನೀಡಿದ್ದಾರೆ.
ಕುಂಭದ್ರೋಣ ಮಳೆಯಿಂದಾಗಿ ತತ್ತರಿಸಿರುವ ಮಹಾನಗರದ ಭೀಕರ ಚಿತ್ರಗಳನ್ನು ವೀಕ್ಷಿಸಿದ ಬಳಿಕ ಅಕ್ಷಯ್ ಕುಮಾರ್ ನಿರ್ದೇಶಕ ಪ್ರಿಯದರ್ಶನ್ ಅವರನ್ನು ಸಂಪರ್ಕಿಸಿ ಧನಸಹಾಯ ಮಾಡಲು ನಿರ್ಧರಿಸಿದ್ದಾರೆ. 
ಮಹಾಮಳೆಯಿಂದಾಗಿ ಚೆನ್ನೈ ತೆರೆದು ನಟ ಅಂಬರೀಷ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದ ಸುಹಾಸಿನಿ ಮಣಿರತ್ನಂ ಅವರ ಸಲಹೆ ಮೇರೆಗೆ ಭೂಮಿಕ ಟ್ರಸ್ಟ್ ಗೆ 1 ಕೋಟಿ ರುಪಾಯಿ ಚೆಕ್ ನೀಡಿದ್ದಾರೆ. 
ಚೆನ್ನೈನಲ್ಲಿ ಜಲಪ್ರವಾಹ ಸಂಭವಿಸಿದ ದಿನದಿಂದ ಸಂತ್ರಸ್ತರಿಗೆ ಭೂಮಿಕ ಟ್ರಸ್ಟ್ ಆಹಾರ ಹಾಗೂ ಬಟ್ಟೆಬರೆಗಳನ್ನು ನೀಡುತ್ತಾ ಬಂದಿರುವುದರಿಂದ ಈ ಟ್ರಸ್ಟ್ ಗೆ ದೇಣಿಗೆ ನೀಡುವಂತೆ ಸುಹಾಸಿನಿ ಸೂಚಿಸಿದ್ದರು. 
ಇತ್ತೀಚೆಗಷ್ಟೇ ಶಾರೂಕ್ ಖಾನ್ ಅಭಿನಯದ ದಿಲ್ವಾಲೆ ಚಿತ್ರ ತಂಡ 1 ಕೋಟಿ ರುಪಾಯಿ ಪರಿಹಾರ ನೀಡಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT