ನಟ ನಿರ್ಮಾಪಕ ಅಮೀರ್ ಖಾನ್ 
ಬಾಲಿವುಡ್

ನಟರು ಬೇಕೆಂದು ಅಮೀರ್ ಟ್ವೀಟ್; ಭರಪೂರ ಪ್ರತಿಕ್ರಿಯೆಗಳಿಗೆ ಸರ್ವರ್ ಕ್ರ್ಯಾಶ್

ನಟ ನಿರ್ಮಾಪಕ ಅಮೀರ್ ಖಾನ್ ತಮ್ಮ ಮುಂದಿನ ನಿರ್ಮಾಣದ ಸಿನೆಮಾ ಯೋಜನೆಗೆ ನಟಿ ಬೇಕೆಂದು ಟ್ವೀಟ್ ಮಾಡಿದ್ದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂದದ್ದರಿಂದ...

ಮುಂಬೈ: ನಟ ನಿರ್ಮಾಪಕ ಅಮೀರ್ ಖಾನ್ ತಮ್ಮ ಮುಂದಿನ ನಿರ್ಮಾಣದ ಸಿನೆಮಾ ಯೋಜನೆಗೆ ನಟಿ ಬೇಕೆಂದು ಟ್ವೀಟ್ ಮಾಡಿದ್ದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂದದ್ದರಿಂದ ಅವರ ಕಚೇರಿ ಸರ್ವರ್ ಕೆಲಸ ಮಾಡದೆ ನಿಂತುಹೋಯಿತಂತೆ! ಈ ಸಿನೆಮಾದ ನಿರ್ದೇಶಕ ಅದ್ವೈತ್ ಚಂದನ್ "ಇದು ಬಹಳ ಉತ್ತೇಜನಕಾರಿ ಪ್ರತಿಕ್ರಿಯೆ" ಎಂದಿದ್ದಾರೆ.

ತಮ್ಮ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನೆಮಾಗೆ, ನಟಿಸಬಲ್ಲ ಮತ್ತು ಹಾಡಬಲ್ಲ ಹೊಸ ನಟಿಯ ಅವಶ್ಯಕತೆ ಇದೆ ಎಂದು ಅಮೀರ್ ಕಳೆದ ವಾರ ಟ್ವಿಟ್ ಮಾಡಿದ್ದರು.

ಅಮೀರ್ ಟ್ವೀಟ್ ಮಾಡಿದ ಅರ್ಧ ಗಂಟೆಯಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ೩೦೦೦ಕ್ಕೂ ಹೆಚ್ಚು ಅರ್ಜಿಗಳು ಬಂದವಂತೆ. ಎಲ್ಲ ಅರ್ಜಿಗಲಲ್ಲೂ ವಿಡಿಯೋ ಸೇರಿದ್ದರಿಂದ, ಟ್ರಾಫಿಕ್ ಭಾರ ತಾಳಲಾರದೆ ಅವರ ಕಚೇರಿಯ ಸರ್ವರ್ ಕೆಲಸ ಮಾಡುವುದನ್ನೇ ನಿಲ್ಲಿಸಿ ಕ್ರ್ಯಾಶ್ ಆಯಿತು ಎಂದು ತಿಳಿದುಬಂದಿದೆ.

ಚೊಚ್ಚಲ ಚಿತ್ರವನ್ನು ನಿರ್ದೇಶಿಸಲಿರುವ ಚಂದನ್ ನೀಡಿರುವ ಹೇಳಿಕೆಯಲ್ಲಿ "ಇಡೀ ರಾತ್ರಿ ಎದ್ದು ಕೂತು ಅರ್ಜಿಗಳನ್ನು ಡೌನ್ ಲೋಡ್ ಮಾಡುತ್ತಿದ್ದೆವು ಮತ್ತು ಇನ್ಬಾಕ್ಸ್ ಖಾಲಿ ಮಾಡಲು ಅವುಗಳನ್ನು ಮತ್ತೊಂದೆಡೆ ಶೇಖರಿಸುತ್ತಿದ್ದೆವು. ಇನ್ನೂ ಎಲ್ಲ ಅರ್ಜಿಗಳನ್ನು ನೋಡಲಾಗಿಲ್ಲ. ಇದಕ್ಕಾಗಿ ದಿನಪೂರ್ತಿ ಕೆಲಸ ಮಾಡುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT