ಬಜರಂಗಿ ಭಾಯಿಜಾನ್ 
ಬಾಲಿವುಡ್

ಬಜರಂಗಿ ಭಾಯಿಜಾನ್ ಲಾಭದ ದುಡ್ಡು ರೈತರಿಗೆ

ಬಜರಂಗಿ ಭಾಯಿಜಾನ್ ಸಿನಿಮಾಕ್ಕೆ ಲಭಿಸಿದ ಲಾಭದ ದುಡ್ಡನ್ನು ರೈತರಿಗೆ ನೀಡಲು ಚಿತ್ರದ ನಿರ್ಮಾಪಕರು ತೀರ್ಮಾನಿಸಿದ್ದಾರೆ...

ಮುಂಬೈ: ಬಜರಂಗಿ ಭಾಯಿಜಾನ್ ಸಿನಿಮಾಕ್ಕೆ ಲಭಿಸಿದ ಲಾಭದ ದುಡ್ಡನ್ನು ರೈತರಿಗೆ ನೀಡಲು ಚಿತ್ರದ ನಿರ್ಮಾಪಕರು ತೀರ್ಮಾನಿಸಿದ್ದಾರೆ.

ಸಿನಿಮಾದ ನಿರ್ದೇಶಕ ಕಬೀರ್ ಖಾನ್, ಸಲ್ಮಾನ್ ಖಾನ್‌ರ ಸಹೋದರಿ ಅಲ್ವಿರಾ ಖಾನ್- ಅಗ್ನಿಹೋತ್ರಿ ಮತ್ತು ಬಿಜೆಪಿ ನಾಯಕ ಶೈನಾ ಎನ್‌ಸಿ ಅವರು ಮಂಗಳವಾರ ಮಹರಾಷ್ಟ್ರದ ಕಂದಾಯ ಸಚಿವ ಏಕ್‌ನಾಥ್ ಖಾಡ್ಸೆ ಅವರನ್ನು ಭೇಟಿ ಮಾಡಿ ಬಜರಂಗಿ ಸಿನಿಮಾ ನೋಡುವಂತೆ ಆಮಂತ್ರಿಸಿದ್ದಾರೆ.

ಕೋಮು ಗಲಭೆಗಳನ್ನು ನಿಲ್ಲಿಸಬೇಕು ಎಂಬ ಸಂದೇಶ ಸಾರುವ ಸಿನಿಮಾ ಬಜರಂಗಿ ಭಾಯಿಜಾನ್. ಪ್ರಸ್ತುತ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ಮುರಿದು ಮುನ್ನುಗ್ಗುತ್ತಿದ್ದು , ಸಿನಿಮಾಕ್ಕೆ ಲಭಿಸಿದ ಲಾಭದ ದುಡ್ಡನ್ನು ರೈತರಿಗೆ ನೀಡಲಾಗುವುದು ಎಂದು ಖಾಡ್ಸೆ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಶೈನಾ ಅವರು ಹೇಳಿದ್ದಾರೆ.

ಇತ್ತ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ರಾಜ್ಯದಲ್ಲಿ  ಬಜರಂಗಿ ಭಾಯಿಜಾನ್ ಸಿನಿಮಾಗೆ ತೆರಿಗೆ ರಹಿತ ಪ್ರದರ್ಶನ ನೀಡಲು ಸಮ್ಮತಿ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT