ಕಿರಣ್ ರಾವ್-ಅಮೀರ್ ಖಾನ್ 
ಬಾಲಿವುಡ್

ಅಮೀರ್ ವಿವಾಹ ವಾರ್ಷಿಕೋತ್ಸವ; ಕಿರಣ್ ಗೆ ಅಚ್ಚರಿ ಔತಣಕೂಟಕ್ಕಾಗಿ ಸಜ್ಜು!

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಡಿಸೆಂಬರ್ ೨೮ ರಂದು ಆಚರಿಸಿಕೊಳ್ಳಲಿದ್ದಾರೆ. ಈ ದಿನವನ್ನು ವಿಶೇಷವಾಗಿಸುವ ಸಲುವಾಗಿ

ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಡಿಸೆಂಬರ್ ೨೮ ರಂದು ಆಚರಿಸಿಕೊಳ್ಳಲಿದ್ದಾರೆ. ಈ ದಿನವನ್ನು ವಿಶೇಷವಾಗಿಸುವ ಸಲುವಾಗಿ ಅಮೀರ್, ತಮ್ಮ ಪಂಚ್ಗನಿ ಮನೆಯಲ್ಲಿ, ನಿಕಟ ಗೆಳೆಯರು ಮತ್ತು ಕುಟುಂಬದೊಂದಿಗೆ ನಾಲ್ಕು ದಿನಗಳ ವೈಭವಯುತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ೧೧ ವರ್ಶಗಳ ಹಿಂದೆ ಕಿರಣ್ ಅವರನ್ನು ಮದುವೆಯಾದ ಸ್ಥಳದಲ್ಲೇ ಔತಣಕೂಟ ಆಯೋಜಿಸಲಾಗಿದೆ. 
ಪಂಚ್ಗನಿ ಮನೆಯನ್ನು ಅಮೀರ್ ಅದೃಷ್ಟವೆಂದು ಪರಿಗಣಿಸುತ್ತಾರೆ. ಮುಂಬೈನ ಜೀವನದಿಂದ ವಿರಾಮ ಮತ್ತು ಶಾಂತಿ ಬಯಸಿದಾಗ, ಅವರಿಗೆ ಮತ್ತು ಕಿರಣ್ ಗೆ ಅದು ಅಡಗುತಾಣ ಕೂಡ. ಡಿಸೆಂಬರ್ ೨೮ ರಂದು ಅಮೀರ್ ಮತ್ತು ಕಿರಣ್ ತಮ್ಮಷ್ಟಕ್ಕೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದು, ೨೯ ರಿಂದ ಅತಿಥಿಗಳನ್ನು ಆಹ್ವಾನಿಸಲಾಗಿದೆ ಮತ್ತು ಇದು ಜನವರಿ ೧ ೨೦೧೭ ರವರೆಗೆ ಮುಂದುವರೆಯಲಿದೆ. ವಾರ್ಷಿಕೋತ್ಸವ ಮತ್ತು ಹೊಸ ವರ್ಷಾಚರಣೆ ಎರಡು ಒಟ್ಟಾಗಲಿದ್ದು, ಅಮೀರ್ ಅವರೇ ವೈಯಕ್ತಿಕವಾಗಿ ಸಿದ್ಧತೆಗಳ ನೇತೃತ್ವ ವಹಿಸಿದ್ದಾರೆ. ಮೂರು ದಿನಗಳ ಅದ್ದೂರಿ ಆಚರಣೆಯಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ಕೂಡ ನಡೆಯಲಿವೆ. 
ಆಮೀರ್ ಮನವಿಯನ್ನು ತಳ್ಳಿಹಾಕಿದ ತಲೈವ
ಈ ವರ್ಷದ ಅತಿ ಹೆಚ್ಚು ನಿರೀಕ್ಷಿತ ಬಾಲಿವುಡ್ ಚಿತ್ರ ಎಂದೇ ಬಿಂಬಿಸಲಾಗಿರುವ ಅಮೀರ್ ಖಾನ್ ನಟಿಸಿರುವ 'ದಂಗಾಲ್' ಶೀಘ್ರದಲ್ಲೇ ಬಿಡುಗಡೆಯಾಗಬೇಕಿದೆ. ಇದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು, ತಮಿಳು ಅವತರಿಣಿಕೆಗೆ ಅಮೀರ್ ಖಾನ್ ಭಾಗವನ್ನು ಡಬ್ ಮಾಡಲು ನಟ ರಜನಿಕಾಂತ್ ಅವರನ್ನು ವೈಯಕ್ತಿವಾಗಿ ಅಮೀರ್ ಕೋರಿದ್ದರಂತೆ. "ಈ ಸಿನೆಮಾ ನೋಡಿ ಬಹಳ ಸಂತಪಟ್ಟರು ಆದರೆ ರಜನಿ ಸರ್ ವಿನಯದಿಂದ ಇದನ್ನು ತಿರಸ್ಕರಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ತಿಳಿದಂತೆ, ಡಿಸೆಂಬರ್ ೨೩ ರಂದು ಮೂಲ ಹಿಂದಿ ಚಿತ್ರದೊಂದಿಗೆ ತಮಿಳು ಡಬ್ ಅವತರಿಣಿಕೆಯು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT