ಸೋನಮ್ ಕಪೂರ್ ಮಗುವಾಗಿದ್ದಾಗ ಎತ್ತಿ ಹಿಡಿದಿರುವ ಅನಿಲ್ ಕಪೂರ್ (ಕೃಪೆ: ಸೋನಮ್ ಕಪೂರ್ ಇನ್ಸ್ಟಾಗ್ರಾಮ್ ಖಾತೆ) 
ಬಾಲಿವುಡ್

ನಿಮ್ಮ ಮಗಳಾಗಿರುವುದಕ್ಕೆ ಹೆಮ್ಮೆಯಿದೆ: ಅನಿಲ್ ಕಪೂರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸೋನಮ್

ಅನಿಲ್ ಕಪೂರ್ ಅವರ ೬೦ ನೇ ಹುಟ್ಟುಹಬ್ಬಕ್ಕೆ ಎಲ್ಲ ಕಡೆಯಿಂದ ಶುಭಾಶಯಗಳ ಮಾಹಾಪೂರ ಹರಿದುಬರುತ್ತಿದೆ. ನಿಮ್ಮ ಮಗಳಾಗಿರುವುದಕ್ಕೆ ಹೆಮ್ಮೆಯಿದೆ ಎಂದು ಸೋನಮ್ ಕಪೂರ್ ಶನಿವಾರ

ಮುಂಬೈ: ಅನಿಲ್ ಕಪೂರ್ ಅವರ ೬೦ ನೇ ಹುಟ್ಟುಹಬ್ಬಕ್ಕೆ ಎಲ್ಲ ಕಡೆಯಿಂದ ಶುಭಾಶಯಗಳ ಮಾಹಾಪೂರ ಹರಿದುಬರುತ್ತಿದೆ. ನಿಮ್ಮ ಮಗಳಾಗಿರುವುದಕ್ಕೆ ಹೆಮ್ಮೆಯಿದೆ ಎಂದು ಸೋನಮ್ ಕಪೂರ್ ಶನಿವಾರ ಹೇಳಿದ್ದಾರೆ. 
ಅನಿಲ್ ಮಗುವನ್ನು ಕೈನಲ್ಲಿ ಹಿಡಿದಿರುವ ತಮ್ಮ ಬಾಲ್ಯದ ಫೋಟೋವನ್ನು ಸೋನಮ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. "ಯಾರೇ ಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಅದ್ಭುತ ಉಡುಗೊರೆಯನ್ನು ನನ್ನ ತಂದೆ ನನಗೆ ನೀಡಿದ್ದಾರೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದರು - ಜಿಮ್ ವಾಲ್ವನೋ. ಅಪ್ಪ ಹುಟ್ಟುಹಬ್ಬದ ಶುಭಾಶಗಳು! ನಿಮ್ಮ ಮಗಳಾಗಿರುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ. ನಿಮಗೆ ಪ್ರತಿದಿನ ಹೆಮ್ಮೆ ತಂದುಕೊಡುವುದಕ್ಕೆ ಪ್ರಯತ್ನಿಸುತ್ತೇನೆ. ಪ್ರೀತಿಯಿಂದ" ಎಂದು ಕೂಡ ಸೋನಮ್ ಬರೆದಿದ್ದಾರೆ. 
ಹಾಗೆಯೇ ಅನಿಲ್ ಕಪೂರ್ ಅವರೊಂದಿಗೆ ೩೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ನಟ ಅನುಪಮ್ ಖೇರ್ ಕೂಡ ಈ ಸಂದರ್ಭದಲ್ಲಿ ಶುಭಾಶಯ ಕೋರಿದ್ದಾರೆ. "ಆತ್ಮೀಯ ಅನಿಲ್ ಕಪೂರ್, ಸಂಪೂರ್ಣ ವ್ಯಕ್ತಿ ಯಾರಾದರೂ ಇದ್ದರೆ ನೀವು ಅದಕ್ಕೆ ಬಹಳ ಹತ್ತಿರವಿದ್ದೀರ. ಅದ್ಭುತ ನಟ, ಅತ್ಯುತ್ತಮ ಕೌಟುಂಬಿಕ ವ್ಯಕ್ತಿ ಮತ್ತು ಆತ್ಮೀಯ ಗೆಳೆಯ. ಹುಟ್ಟು ಹಬ್ಬದ ಶುಭಾಶಗಳು" ಎಂದು ಅನುಪಮ್ ಟ್ವೀಟ್ ಮಾಡಿದ್ದಾರೆ. 
'ಓಂ ಜೈ ಜಗದೀಶ್', 'ಹಮಾರಾ ದಿಲ್ ಆಪ್ಕೆ ಪಾಸ್ ಹೈ', 'ಹಮ್ ಆಪ್ಕೆ ದಿಲ್ ಮೇ ರೆಹ್ತೆ ಹೈ', 'ದಿವಾನ ಮಸ್ತಾನ', 'ಜೂಟ್ ಭೋಲೆ ಕವ್ವ ಕಾಟೆ', '೧೯೪೨-ಎ ಲವ್ ಸ್ಟೋರಿ', 'ರೂಪ್ ಕಿ ರಾಣಿ ಚೋರೊಂಕ ರಾಜ', 'ಬೇಟಾ', 'ರಾಮ್ ಲಖನ್', 'ತೇಜಾಬ್' ಮುಂತಾದ ಚಿತ್ರಗಳಲ್ಲಿ ಈ ಇಬ್ಬರೂ ನಟರು ಒಟ್ಟಿಗೆ ನಟಿಸಿದ್ದಾರೆ. 
ಅನಿಲ್ ಕಪೂರ್ ಅವರು ಮಣಿರತ್ನಂ ನಿರ್ದೇಶನದ ಕನ್ನಡ ಸಿನೆಮಾ 'ಪಲ್ಲವಿ ಅನುಪಲ್ಲವಿ' ಸಿನೆಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು ಎಂಬುದು ವಿಶೇಷ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT