ಕಾಮಿಡಿ ನೈಟ್ಸ್ ವಿತ್ ಕಪಿಲ್ ತಂಡ (ಸಂಗ್ರಹ ಚಿತ್ರ) 
ಬಾಲಿವುಡ್

ಸುನಿಲ್ ಗ್ರೋವರ್, ಅಲಿ ಅಸ್ಗರ್ ಗೆ ಕಲರ್ಸ್ ನೋಟಿಸ್?

ಖ್ಯಾತ ಕಿರುತೆರೆ ಹಾಸ್ಯ ಕಾರ್ಯಕ್ರಮ ಕಾಮಿಡಿ ನೈಟ್ಸ್ ವಿತ್ ಕಪಿಲ್ ನ ನಟರಾದ ಗುತ್ತಿ ಖ್ಯಾತಿಯ ಸುನಿಲ್ ಗ್ರೋವರ್, ಮತ್ತು ದಾದಿ ಖ್ಯಾತಿ ಅಲಿ ಅಸ್ಗರ್ ವಿರುದ್ಧ ಕಲರ್ಸ್ ವಾಹಿನಿ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ...

ಮುಂಬೈ: ಖ್ಯಾತ ಕಿರುತೆರೆ ಹಾಸ್ಯ ಕಾರ್ಯಕ್ರಮ ಕಾಮಿಡಿ ನೈಟ್ಸ್ ವಿತ್ ಕಪಿಲ್  ನ ನಟರಾದ ಗುತ್ತಿ ಖ್ಯಾತಿಯ ಸುನಿಲ್ ಗ್ರೋವರ್, ಮತ್ತು ದಾದಿ ಖ್ಯಾತಿ ಅಲಿ ಅಸ್ಗರ್ ವಿರುದ್ಧ ಕಲರ್ಸ್ ವಾಹಿನಿ  ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಕಲರ್ಸ್ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕಾಮಿಡಿ ನೈಟ್ಸ್ ವಿತ್ ಕಪಿಲ್ ನ ಪ್ರಮುಖ ಪಾತ್ರಗಳಾದ ಗುತ್ತಿ ಮತ್ತು ದಾದಿ ಪಾತ್ರಗಳನ್ನು ಈ ಇಬ್ಬರು ನಟರು ಖಾಸಗಿ  ಕಾರ್ಯಕ್ರಮದಲ್ಲಿ ಬಳಕೆ ಮಾಡಿಕೊಂಡಿದ್ದರು. ಇದರಿಂದ ಕಲರ್ಸ್ ಆಡಳಿತ ಮಂಡಳಿ ಸಿಟ್ಟಿಗೆದಿದ್ದು, ಈ ಇಬ್ಬರೂ ನಟರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.  ಕಾರಣಾಂತರಗಳಿಂದ ಹಾಸ್ಯನಟ ಮತ್ತು ನಿರೂಪಕ ಕಪಿಲ್ ಶರ್ಮಾ ನಡೆಸಿಕೊಡುತ್ತಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಿರುತೆರೆ ಕಾರ್ಯಕ್ರಮ ಸ್ಥಗಿತಗೊಂಡಿತ್ತು.

ಆದರೆ ಕಾರ್ಯಕ್ರಮದ ಕಾಪಿರೈಟ್ಸ್ ತಮ್ಮ ಬಳಿ ಇದ್ದು, ಕಾರ್ಯಕ್ರಮದ ಯಾವುದೇ ಪಾತ್ರಧಾರಿಗಳನ್ನು ನಟರು ವಾಹಿನಿ ಅನುಮತಿ ಇಲ್ಲದೆ ಅನುಕರಿಸುವಂತಿಲ್ಲ ಎಂದು ಕಲರ್ಸ್ ಆಡಳಿತ  ಮಂಡಳಿ ಪರೋಕ್ಷವಾಗಿ ಸ್ಪಷ್ಟಪಡಿಸಿದೆ.

ಮುಂಬರುವ ಫೆಬ್ರವರಿ 19ರಂದು ನಡೆಯಲಿರುವ ದ-ಬಂಗ್ ಹೆಸರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ನಟ ಸುನಿಲ್ ಗ್ರೋವರ್, ಅಲಿ ಅಸ್ಗರ್ ಅವರು ಕಾಮಿಡಿ ನೈಟ್ಸ್ ವಿತ್ ಕಪಿಲ್  ಕಾರ್ಯಕ್ರಮದಲ್ಲಿ ತಾವು ನಿರ್ವಹಿಸಿದ್ದ ಪಾತ್ರವನ್ನು ಈ ಕಾರ್ಯಕ್ರಮದಲ್ಲಿ ನಿರ್ವಹಿಸಲಿದ್ದು, ಇದಕ್ಕಾಗಿ ಇದೇ ವೇಷಭೂಷಣೆ ತೊಟ್ಟು ಅಭ್ಯಾಸ ನಡೆಸಿದ್ದರು. ಕಾರ್ಯಕ್ರಮದಲ್ಲಿ ನಟಿ ಜಾಕ್ವೆಲಿನ್  ಫರ್ನಾಂಡಿಸ್, ಸಲ್ಮಾನ್ ಖಾನ್ ಅವರು ಸೇರಿದಂತೆ ಬಾಲಿವುಡ್ ನ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT