ಸಂಜಯ್ ದತ್ ಮತ್ತು ವಿಧು ವಿನೋದ್ ಚೋಪ್ರಾ 
ಬಾಲಿವುಡ್

ಸಂಜಯ್ ದತ್ ಗಾಗಿ ಹಲವಾರು ಸ್ಕ್ರಿಪ್ಟ್ ಗಳಿವೆ: ವಿಧು ವಿನೋದ್ ಚೋಪ್ರಾ

'ಮುನ್ನಾಭಾಯಿ' ಸಿನೆಮಾಗಳ ನಟ ಮತ್ತು ಗೆಳೆಯ ಸಂಜಯ್ ದತ್ ಸೆರೆಮನೆಯಿಂದ ಬಿಡುಗಡೆಗೆಯಾಗಲಿರುವ ಸುದ್ದಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ವಿಧು ವಿನೋದ್ ಚೋಪ್ರಾ,

ಮುಂಬೈ: 'ಮುನ್ನಾಭಾಯಿ' ಸಿನೆಮಾಗಳ ನಟ ಮತ್ತು ಗೆಳೆಯ ಸಂಜಯ್ ದತ್ ಸೆರೆಮನೆಯಿಂದ ಬಿಡುಗಡೆಗೆಯಾಗಲಿರುವ ಸುದ್ದಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಅವರಿಗಾಗಿ ಹಲವಾರು ಸ್ಕ್ರಿಪ್ಟ್ ಗಳನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದ್ದಾರೆ.

೧೯೯೩ರ ಮುಂಬೈ ಸರಣಿ ಸ್ಫೋಟದ ಸಮಯದಲ್ಲಿ ಅನಧಿಕೃತವಾಗಿ ಎ ಕೆ-೪೭ ಹೊಂದಿದ್ದಕ್ಕೆ ೫೬ ವರ್ಷದ ನಟನಿಗೆ ಜೈಲು ಶಿಕ್ಷೆ ನೀಡಲಾಗಿತ್ತು.

ಫೆಬ್ರವರಿ ೨೭ ರಂದು ಸಂಜಯ್ ಜೈಲಿನಿಂದ ಹೊರಬರಲಿದ್ದಾರೆ ಎಂದು ಅವರ ವಕೀಲ ಹಿತೇಶ್ ಜೈನ್ ತಿಳಿಸಿದ್ದರು, "ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಮಹಾರಾಷ್ಟ್ರದ ರಾಜ್ಯ ಗೃಹ ಸಚಿವ ಹೇಳಿದ್ದಾರೆ.

"ಅವರು ಸೆರೆಮನೆಯಿಂದ ಹಿಂದಿರುಗುವುದಕ್ಕೆ ನಮಗೆ ಸಂತಸವಾಗಿದೆ. ಅವರು ತಪ್ಪು ಮಾಡಿ ಶಿಕ್ಷೆ ಅನುಭವಿಸಿದ್ದಾರೆ. ಇದು ಅವರಿಗೆ ಹೊಸಹುಟ್ಟು" ಎಂದು 'ವಾಜಿರ್' ಸಿನೆಮಾದ ವಿಶೇಷ ಪ್ರದರ್ಶನದ ವೇಳೆ ವಿಧು ವಿನೋದ್ ಚೋಪ್ರಾ ಹೇಳಿದ್ದಾರೆ.

"ಕಳೆದ ೨ ವರ್ಷಗಳಿಂದ ಅವರಿಗಾಗಿ ಸ್ಕ್ರಿಪ್ಟ್ ಗಳನ್ನು ಬರೆಯುತ್ತಲೇ ಇದ್ದೇವೆ. ಈಗ ಅವರಿಗಾಗಿ ಹಲವಾರು ಸ್ಕ್ರಿಪ್ಟ್ ಗಳಿವೆ" ಎಂದು ಕೂಡ ಚೋಪ್ರಾ ಹೇಳಿದ್ದಾರೆ.

ಮುನ್ನಾಭಾಯಿ ಸರಣಿಯ ಮೂರನೆ ಚಿತ್ರ 'ಮುನ್ನಾಭಾಯಿ ಆನ್ ದ ಫ್ಲೈಟ್' ಚಿತ್ರಕ್ಕೂ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್

"ಜನ ನಾಯಗನ್ ಬಜೆಟ್': ಮಹಿಳೆಯರು, ಯುವಜನತೆಗೆ ದಳಪತಿ ವಿಜಯ್ ಬಂಪರ್ ಗಿಫ್ಟ್; ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ