ಸಂಜಯ್ ದತ್ ಮತ್ತು ವಿಧು ವಿನೋದ್ ಚೋಪ್ರಾ 
ಬಾಲಿವುಡ್

ಸಂಜಯ್ ದತ್ ಗಾಗಿ ಹಲವಾರು ಸ್ಕ್ರಿಪ್ಟ್ ಗಳಿವೆ: ವಿಧು ವಿನೋದ್ ಚೋಪ್ರಾ

'ಮುನ್ನಾಭಾಯಿ' ಸಿನೆಮಾಗಳ ನಟ ಮತ್ತು ಗೆಳೆಯ ಸಂಜಯ್ ದತ್ ಸೆರೆಮನೆಯಿಂದ ಬಿಡುಗಡೆಗೆಯಾಗಲಿರುವ ಸುದ್ದಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ವಿಧು ವಿನೋದ್ ಚೋಪ್ರಾ,

ಮುಂಬೈ: 'ಮುನ್ನಾಭಾಯಿ' ಸಿನೆಮಾಗಳ ನಟ ಮತ್ತು ಗೆಳೆಯ ಸಂಜಯ್ ದತ್ ಸೆರೆಮನೆಯಿಂದ ಬಿಡುಗಡೆಗೆಯಾಗಲಿರುವ ಸುದ್ದಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಅವರಿಗಾಗಿ ಹಲವಾರು ಸ್ಕ್ರಿಪ್ಟ್ ಗಳನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದ್ದಾರೆ.

೧೯೯೩ರ ಮುಂಬೈ ಸರಣಿ ಸ್ಫೋಟದ ಸಮಯದಲ್ಲಿ ಅನಧಿಕೃತವಾಗಿ ಎ ಕೆ-೪೭ ಹೊಂದಿದ್ದಕ್ಕೆ ೫೬ ವರ್ಷದ ನಟನಿಗೆ ಜೈಲು ಶಿಕ್ಷೆ ನೀಡಲಾಗಿತ್ತು.

ಫೆಬ್ರವರಿ ೨೭ ರಂದು ಸಂಜಯ್ ಜೈಲಿನಿಂದ ಹೊರಬರಲಿದ್ದಾರೆ ಎಂದು ಅವರ ವಕೀಲ ಹಿತೇಶ್ ಜೈನ್ ತಿಳಿಸಿದ್ದರು, "ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಮಹಾರಾಷ್ಟ್ರದ ರಾಜ್ಯ ಗೃಹ ಸಚಿವ ಹೇಳಿದ್ದಾರೆ.

"ಅವರು ಸೆರೆಮನೆಯಿಂದ ಹಿಂದಿರುಗುವುದಕ್ಕೆ ನಮಗೆ ಸಂತಸವಾಗಿದೆ. ಅವರು ತಪ್ಪು ಮಾಡಿ ಶಿಕ್ಷೆ ಅನುಭವಿಸಿದ್ದಾರೆ. ಇದು ಅವರಿಗೆ ಹೊಸಹುಟ್ಟು" ಎಂದು 'ವಾಜಿರ್' ಸಿನೆಮಾದ ವಿಶೇಷ ಪ್ರದರ್ಶನದ ವೇಳೆ ವಿಧು ವಿನೋದ್ ಚೋಪ್ರಾ ಹೇಳಿದ್ದಾರೆ.

"ಕಳೆದ ೨ ವರ್ಷಗಳಿಂದ ಅವರಿಗಾಗಿ ಸ್ಕ್ರಿಪ್ಟ್ ಗಳನ್ನು ಬರೆಯುತ್ತಲೇ ಇದ್ದೇವೆ. ಈಗ ಅವರಿಗಾಗಿ ಹಲವಾರು ಸ್ಕ್ರಿಪ್ಟ್ ಗಳಿವೆ" ಎಂದು ಕೂಡ ಚೋಪ್ರಾ ಹೇಳಿದ್ದಾರೆ.

ಮುನ್ನಾಭಾಯಿ ಸರಣಿಯ ಮೂರನೆ ಚಿತ್ರ 'ಮುನ್ನಾಭಾಯಿ ಆನ್ ದ ಫ್ಲೈಟ್' ಚಿತ್ರಕ್ಕೂ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT