ಸಂಜಯ್ ದತ್ ಮತ್ತು ವಿಧು ವಿನೋದ್ ಚೋಪ್ರಾ 
ಬಾಲಿವುಡ್

ಸಂಜಯ್ ದತ್ ಗಾಗಿ ಹಲವಾರು ಸ್ಕ್ರಿಪ್ಟ್ ಗಳಿವೆ: ವಿಧು ವಿನೋದ್ ಚೋಪ್ರಾ

'ಮುನ್ನಾಭಾಯಿ' ಸಿನೆಮಾಗಳ ನಟ ಮತ್ತು ಗೆಳೆಯ ಸಂಜಯ್ ದತ್ ಸೆರೆಮನೆಯಿಂದ ಬಿಡುಗಡೆಗೆಯಾಗಲಿರುವ ಸುದ್ದಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ವಿಧು ವಿನೋದ್ ಚೋಪ್ರಾ,

ಮುಂಬೈ: 'ಮುನ್ನಾಭಾಯಿ' ಸಿನೆಮಾಗಳ ನಟ ಮತ್ತು ಗೆಳೆಯ ಸಂಜಯ್ ದತ್ ಸೆರೆಮನೆಯಿಂದ ಬಿಡುಗಡೆಗೆಯಾಗಲಿರುವ ಸುದ್ದಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಅವರಿಗಾಗಿ ಹಲವಾರು ಸ್ಕ್ರಿಪ್ಟ್ ಗಳನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದ್ದಾರೆ.

೧೯೯೩ರ ಮುಂಬೈ ಸರಣಿ ಸ್ಫೋಟದ ಸಮಯದಲ್ಲಿ ಅನಧಿಕೃತವಾಗಿ ಎ ಕೆ-೪೭ ಹೊಂದಿದ್ದಕ್ಕೆ ೫೬ ವರ್ಷದ ನಟನಿಗೆ ಜೈಲು ಶಿಕ್ಷೆ ನೀಡಲಾಗಿತ್ತು.

ಫೆಬ್ರವರಿ ೨೭ ರಂದು ಸಂಜಯ್ ಜೈಲಿನಿಂದ ಹೊರಬರಲಿದ್ದಾರೆ ಎಂದು ಅವರ ವಕೀಲ ಹಿತೇಶ್ ಜೈನ್ ತಿಳಿಸಿದ್ದರು, "ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಮಹಾರಾಷ್ಟ್ರದ ರಾಜ್ಯ ಗೃಹ ಸಚಿವ ಹೇಳಿದ್ದಾರೆ.

"ಅವರು ಸೆರೆಮನೆಯಿಂದ ಹಿಂದಿರುಗುವುದಕ್ಕೆ ನಮಗೆ ಸಂತಸವಾಗಿದೆ. ಅವರು ತಪ್ಪು ಮಾಡಿ ಶಿಕ್ಷೆ ಅನುಭವಿಸಿದ್ದಾರೆ. ಇದು ಅವರಿಗೆ ಹೊಸಹುಟ್ಟು" ಎಂದು 'ವಾಜಿರ್' ಸಿನೆಮಾದ ವಿಶೇಷ ಪ್ರದರ್ಶನದ ವೇಳೆ ವಿಧು ವಿನೋದ್ ಚೋಪ್ರಾ ಹೇಳಿದ್ದಾರೆ.

"ಕಳೆದ ೨ ವರ್ಷಗಳಿಂದ ಅವರಿಗಾಗಿ ಸ್ಕ್ರಿಪ್ಟ್ ಗಳನ್ನು ಬರೆಯುತ್ತಲೇ ಇದ್ದೇವೆ. ಈಗ ಅವರಿಗಾಗಿ ಹಲವಾರು ಸ್ಕ್ರಿಪ್ಟ್ ಗಳಿವೆ" ಎಂದು ಕೂಡ ಚೋಪ್ರಾ ಹೇಳಿದ್ದಾರೆ.

ಮುನ್ನಾಭಾಯಿ ಸರಣಿಯ ಮೂರನೆ ಚಿತ್ರ 'ಮುನ್ನಾಭಾಯಿ ಆನ್ ದ ಫ್ಲೈಟ್' ಚಿತ್ರಕ್ಕೂ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಚಾರ್ ಸಾಥಿಯಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಕಡ್ಡಾಯ ಆದೇಶ ವಾಪಸ್: ಸಚಿವ ಸಿಂಧಿಯಾ

2ನೇ ಏಕದಿನ: ಕೊಹ್ಲಿ, ಗಾಯಕ್ವಾಡ್ ಸ್ಫೋಟಕ ಶತಕ; ಆಫ್ರಿಕಾ ವಿರುದ್ಧ 358 ರನ್ ಬೃಹತ್ ಮೊತ್ತ ಪೇರಿಸಿದ ಭಾರತ

ಕರ್ನಾಟಕದಲ್ಲಿ ಸಹಕಾರಿ ಅಭಿವೃದ್ಧಿಗಾಗಿ ಕೇಂದ್ರ ಇದುವರೆಗೆ 4,164 ಕೋಟಿ ರೂ. ನೀಡಿದೆ: ಅಮಿತ್ ಶಾ

ಕೋಚ್ ಗಂಭೀರ್ ಜೊತೆ ಮುನಿಸು: ODI ನಲ್ಲಿ 53ನೇ ಶತಕ ಸಿಡಿಸಿ ವಿಶ್ವದ ಏಕೈಕ ಬ್ಯಾಟರ್ Virat Kohli!

ಕರ್ನಾಟಕ ರಾಜಭವನಕ್ಕೆ ಲೋಕಭವನ ಎಂದು ಮರುನಾಮಕರಣ

SCROLL FOR NEXT