ನಿರ್ದೇಶಕ ಅನುರಾಗ್ ಕಶ್ಯಪ್ 
ಬಾಲಿವುಡ್

ನನಗೆ 'ಸುಲ್ತಾನ್', 'ಡಿಶೂಂ' ತರಹದ ಸಿನೆಮಾಗಳನ್ನು ಮಾಡಲಾಗುವುದಿಲ್ಲ: ಅನುರಾಗ್ ಕಶ್ಯಪ್

ಎಲ್ಲ ಕಮರ್ಷಿಯಲ್ ಸಿನೆಮಾಗಳನ್ನು ಗಮನಿಸುವುದಾಗಿ ಹೇಳಿರುವ ನಿರ್ದೇಶಕ ಅನುರಾಗ್ ಕಶ್ಯಪ್, 'ಸುಲ್ತಾನ್' ಮತ್ತು 'ಡಿಶೂಂ' ಸಿನೆಮಾಗಳ ಟ್ರೇಲರ್ ಗಳನ್ನು ಮೆಚ್ಚಿದ್ದರೂ, ಅಂತಹ ಚಿತ್ರಗಳನ್ನು

ಮುಂಬೈ: ಎಲ್ಲ ಕಮರ್ಷಿಯಲ್ ಸಿನೆಮಾಗಳನ್ನು ಗಮನಿಸುವುದಾಗಿ ಹೇಳಿರುವ ನಿರ್ದೇಶಕ ಅನುರಾಗ್ ಕಶ್ಯಪ್, 'ಸುಲ್ತಾನ್' ಮತ್ತು 'ಡಿಶೂಂ' ಸಿನೆಮಾಗಳ ಟ್ರೇಲರ್ ಗಳನ್ನು ಮೆಚ್ಚಿದ್ದರೂ, ಅಂತಹ ಚಿತ್ರಗಳನ್ನು ತಮಗೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಅವರ ಮುಂದಿನ ಚಿತ್ರ 'ರಾಮನ್ ರಾಘವ ೨.೦'ದ 'ಕ್ವಾತಿ-ಎ-ಆಮ್' ಹಾಡಿನ ಚಾಲನೆಯಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಟ್ರೇಲರ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ "ನಾನು ಟ್ರೇಲರ್ ನೋಡಿದೆ ಮತ್ತು ಪ್ರತಿ ಟ್ರೇಲರ್ ಅನ್ನು ಎಲ್ಲರೂ ಆನಂದಿಸುತ್ತಾರೆ. 'ಡಿಶೂಂ' ಟ್ರೇಲರ್ ಕೂಡ ನನಗೆ ಇಷ್ಟವಾಯಿತು, ಆದರೆ ತೊಂದರೆ ಏನೆಂದರೆ ನನಗೆ ಅವುಗಳನ್ನು ಮಾಡಲಾಗುವುದಿಲ್ಲ" ಎಂದಿದ್ದಾರೆ.

'ಬ್ಲ್ಯಾಕ್ ಫ್ರೈಡೆ', 'ಗ್ಯಾಂಗ್ಸ್ ಆಫ್ ವಸೀಪುರ್', 'ಅಗ್ಲಿ' ಇಂತಹ ವಿಭಿನ್ನ ಸಿನೆಮಾಗಳನ್ನು ಸೃಷ್ಟಿಸಿರುವ ಅನುರಾಗ್ ಕಶ್ಯಪ್ ತಮ್ಮ ಮುಂದಿನ ಚಿತ್ರ 'ರಾಮನ್ ರಾಘವ ೨.೦' ಬಿಡುಗಡೆಗೆ ಸಿದ್ಧವಾಗಿದ್ದಾರೆ. ಈ ಸಿನೆಮಾ ಕಾನ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ಅವರ ಹಿಂದಿನ ಸಿನೆಮಾ 'ಬಾಂಬೆ ವೆಲ್ವೆಟ್' ನಿರೀಕ್ಷಿತ ಯಶಸ್ಸು ಕೊಡದೇ ಹೋದರು, ನವಾಜುದ್ದೀನ್ ಸಿದ್ಧಿಕಿ ಮತ್ತು ವಿಕ್ಕಿ ಕೌಶಾಲ್ ನಟನೆಯ 'ರಾಮನ್ ರಾಘವ ೨.೦' ಬಹಳ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT