ಕಂಗನಾ ರನೌತ್-ಹೃತಿಕ್ ರೋಷನ್ 
ಬಾಲಿವುಡ್

ಹೃತಿಕ್ ರೋಷನ್ ತಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಲಿ: ಕಂಗನಾ ಪರ ವಕೀಲ

ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರನೌತ್ ನಡುವಿನ ಆರೋಪ-ಪ್ರತ್ಯಾರೋಪಗಳು ಸದ್ಯಕ್ಕೆ ಬಗೆಹರಿಯುವ ....

ಮುಂಬೈ: ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರನೌತ್ ನಡುವಿನ ಆರೋಪ-ಪ್ರತ್ಯಾರೋಪಗಳು ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಅನೇಕ ತಿಂಗಳುಗಳ ಕಾಲ ಮೌನವಾಗಿದ್ದ ಹೃತಿಕ್ ರೋಷನ್ ನಿನ್ನೆ ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ ನಂತರ ಇದೀಗ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ 9 ಪ್ರಶ್ನೆಗಳಿಗೆ ಉತ್ತರಿಸುವಂತೆ ತಿರುಗೇಟು ನೀಡಿದ್ದಾರೆ.
ನನ್ನ ಕಕ್ಷಿದಾರರು ಹಲವು ಸಮಯಗಳಿಂದ ಹೃತಿಕ್ ಅವರಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಬಯಸುತ್ತಿದ್ದು ಅದಕ್ಕೆ ಉತ್ತರಿಸದೆ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಂಗನಾ ವಕೀಲರು ಕೇಳಿದ ಪ್ರಶ್ನೆಗಳು ಈ ರೀತಿ ಇದೆ: 2014ರಿಂದ ಕಂಗನಾ ಅವರ ಖಾಸಗಿ ಇ ಮೇಲ್ ಹ್ಯಾಕ್ ಆಗಿದೆ ಎಂದು ಗೊತ್ತಾಗಿದ್ದರೂ ಹೃತಿಕ್  ಆ ಖಾತೆಯಿಂದ ಬಂದ ಸಾವಿರಾರು ಇ ಮೇಲ್ ಗಳನ್ನು ತಮ್ಮ ಖಾಸಗಿ ಮೇಲ್ ಐಡಿಯಲ್ಲಿ ಏಕೆ ಸಂಗ್ರಹಿಸಿಟ್ಟುಕೊಂಡಿದ್ದರು ಮತ್ತು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಏಕೆ ಪೊಲೀಸರಿಗೆ ದೂರು ನೀಡಲಿಲ್ಲ?
ಒಬ್ಬ ವಿವಾಹಿತ ವ್ಯಕ್ತಿ, ಇಬ್ಬರು ಮಕ್ಕಳ ತಂದೆಯಾಗಿ ಹೃತಿಕ್ ತಮಗೆ ಬಂದ ಇಮೇಲ್ ಗಳನ್ನು ನೋಡಿ ಆಘಾತಗೊಂಡು ನನ್ನ ಕಕ್ಷಿದಾರರಿಗೆ ಏಕೆ ವಿಷಯ ತಿಳಿಸಲಿಲ್ಲ ಮತ್ತು ಈ ಬಗ್ಗೆ ದೂರು ನೀಡಲಿಲ್ಲ. ಹ್ಯಾಕ್ ಆಗಿದ್ದ ಖಾತೆಯಿಂದ ಬಂದ ಮೇಲ್ ಗಳನ್ನು ಏಕೆ ಪರೀಕ್ಷಿಸದೆ ಸ್ವೀಕರಿಸುತ್ತಿದ್ದರು?
ನನ್ನ ಕಕ್ಷಿದಾರರು ದೂರು ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದ್ದರೂ ಕೂಡ ಹೃತಿಕ್ ರೋಷನ್ ಏಕೆ ಔಪಚಾರಿಕವಾಗಿ ಎಫ್ಐ ಆರ್ ದಾಖಲಿಸಲು ವಿಳಂಬ ಮಾಡಿದರು. ಕೇವಲ ಅನೌಪಚಾರಿಕವಾಗಿ ಏಕೆ ದೂರು ನೀಡಿದರು, ಇಲ್ಲಿ ಯಾರ ಹಿತಾಸಕ್ತಿ ಅಡಗಿದೆ?
ಹೀಗೆ ಹ್ಯಾಕ್ ಆದ ಖಾತೆಯಿಂದ ಬಂದ ಸಾವಿರಾರು ಇಮೇಲ್ ಗಳನ್ನು ಸಂಗ್ರಹಿಸಿ ದೂರು ನೀಡಲು ಹೃತಿಕ್ ರೋಷನ್ ಏಕೆ 7 ತಿಂಗಳು ಸಮಯ ತೆಗೆದುಕೊಂಡರು, ಅದು ಕೂಡ ಅನೌಪಚಾರಿಕವಾಗಿ ಏಕೆ ಪೊಲೀಸ್ ದೂರು ನೀಡಿದರು, ಅವರ ಈ ನಡೆಯ ಹಿಂದಿನ ಉದ್ದೇಶವೇನು?
ತಾವು ಉತ್ತರಿಸುವಂತೆ ನೊಟೀಸ್ ಬಂದ ಮೇಲಷ್ಟೇ ಹೃತಿಕ್ ಏಕೆ ಎಫ್ಐಆರ್ ದಾಖಲಿಸಿದರು? ಅದು ಕೂಡ ಎರಡು ವರ್ಷಗಳು ಕಳೆದ ನಂತರ ಏಕೆ?
ತಾವು ಹಣ ನೀಡಿದ ಖಾಸಗಿ, ತಮ್ಮ ಅನುಕೂಲಕ್ಕೆ ತಕ್ಕಂತಹ ವರದಿಯನ್ನೇ ಏಕೆ ಹೃತಿಕ್ ರೋಷನ್ ಕೇಳುತ್ತಿದ್ದಾರೆ.
ಹೃತಿಕ್ ಮತ್ತು ಕಂಗನಾ ಒಂದೇ ಫ್ಯಾಮಿಲಿ ಡಾಕ್ಟರ್ ಹತ್ತಿರ ಅನೇಕ ವರ್ಷಗಳಿಂದ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಕಂಗನಾ ಯಾವುದೇ ಮಾನಸಿಕ ಕಾಯಿಲೆಯಿಂದ ಬಳಲುತ್ತಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹೀಗಿರುವಾಗ ಮಾಧ್ಯಮಕ್ಕೆ ವಿಶ್ವಾಸಾರ್ಹವಲ್ಲದ ಮತ್ತು ತಿರುಚಲಾದ ಇಮೇಲ್ ಅನ್ನು ಹೇಗೆ ಬಿಡುಗಡೆ ಮಾಡಿದರು? ಇದರ ಹಿಂದಿನ ಉದ್ದೇಶವೇನು?
ನನ್ನ ಕಕ್ಷಿದಾರರು ಮತ್ತು ಹೃತಿಕ್ ನಡುವಿನ ಸಂಬಂಧವನ್ನು ಪುಷ್ಟೀಕರಿಸುವ ಫೋಟೋಗಳನ್ನು ಮೂರನೇ ವ್ಯಕ್ತಿಗೆ ತೋರಿಸಬಾರದು ಎಂದು ಹೇಳಿದ್ದರೂ ಕೂಡ ಯಾವ ಆಧಾರದ ಮೇಲೆ ಮತ್ತು ಯಾರ ಸಲಹೆ ಮೇರೆಗೆ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT