ಸಲ್ಮಾನ್ ಖಾನ್ 
ಬಾಲಿವುಡ್

ಮುಂಬೈ: ಸಲ್ಮಾನ್ ಖಾನ್ ಭೇಟಿಗೆ ಮನೆಬಿಟ್ಟು ಬಂದು ಕಾಂಪೌಂಡ್ ಗೋಡೆ ಏರಿದ ಬಾಲಕಿ!

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಂದ ಆಕರ್ಷಿತಗೊಂಡ ಬಾಲಕಿಯೊಬ್ಬಳು ಅವರನ್ನು ನೋಡಲೆಂದು ಮಧ್ಯಪ್ರದೇಶದಿಂದ ಮನೆಬಿಟ್ಟು ಮುಂಬೈಗೆ ಬಂದಿದ್ದು, ಬಾಂದ್ರದಲ್ಲಿನ ಪೊಸ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಕಾಂಪೌಂಡ್ ಗೋಡೆ ಏರಿ ಪ್ರಯತ್ನಿಸಿದ್ದಾಳೆ.

ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಂದ ಆಕರ್ಷಿತಗೊಂಡ ಬಾಲಕಿಯೊಬ್ಬಳು ಅವರನ್ನು ನೋಡಲೆಂದು  ಮಧ್ಯಪ್ರದೇಶದಿಂದ ಮನೆಬಿಟ್ಟು  ಮುಂಬೈಗೆ ಬಂದಿದ್ದು, ಬಾಂದ್ರದಲ್ಲಿನ ಪೊಸ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಕಾಂಪೌಂಡ್ ಗೋಡೆ ಏರಿ ಪ್ರಯತ್ನಿಸಿದ್ದಾಳೆ.

ನಂತರ 15 ವರ್ಷದ ಆ ಬಾಲಕಿಯನ್ನು ವಶಕ್ಕೆ ಪಡೆದು  ಮಕ್ಕಳ ವಸತಿ ನಿಲಯಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಬೆರಸಿಯಾ ನಿವಾಸಿದ ಈ ಬಾಲಕಿ , ಸಲ್ಮಾನ್ ಖಾನ್ ಭೇಟಿ ಸಲುವಾಗಿ ಭಾನುವಾರ ಮನೆ ಬಿಟ್ಟಿದ್ದಾಳೆ .ನಂತರ ರೈಲಿನಲ್ಲಿ ದೂರದ ಮುಂಬೈಗೆ ಬಂದಿದ್ದು, ನಿನ್ನೆ ಬೆಳಿಗ್ಗೆ ಬಾಂದ್ರಾ ನಿಲ್ದಾಣದಲ್ಲಿ ಇಳಿದುಕೊಂಡಿದ್ದಾಳೆ.

 ಬಾಂದ್ರಾದಲ್ಲಿ ಸಲ್ಮಾನ್ ಖಾನ್ ಮನೆ ಇರುವುದನ್ನು ತಿಳಿದ ಆ ಬಾಲಕಿ ,ನೇರವಾಗಿ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಬಳಿ ಬಂದಿದ್ದು, ಗೇಟ್ ಮೂಲಕ ಅಪಾರ್ಟ್ ಮೆಂಟ್ ನ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ್ದಾಳೆ. ಆದರೆ, ಸ್ಥಳದಲ್ಲಿಯೇ ಇದ್ದ ಭದ್ರತಾ ಪಡೆಗಳು ಇದನ್ನು ತಡೆದಿದ್ದಾರೆ.

ನಂತರ ಆ ಬಾಲಕಿ ಕಟ್ಟಡದ ಗೋಡೆ ಕಾಂಪೌಂಡ್ ಏರಲು  ಪ್ರಯತ್ನಿಸಿದ್ದಾಳೆ. ಮತ್ತೆ ಭದ್ರತಾ ಸಿಬ್ಬಂದಿಗಳು ಇದನ್ನು ತಡೆದಿದ್ದು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆ ಬಾಲಕಿಯನ್ನು   ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

 ಆಧಾರ್ ಕಾರ್ಡ್ ಆಧಾರದ ಮೇಲೆ ಆ ಬಾಲಕಿ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ . ನಂತರ ಪ್ರಾಥಮಿಕ ವಿಚಾರಣೆ ಬಳಿಕ ಆ ಬಾಲಕಿಯನ್ನು ಮಕ್ಕಳ ವಸತಿಗೆ ಸೇರಿಸಲಾಗಿದೆ. ಮುಂಬೈಗೆ ಆಕೆಯ ಪೋಷಕರು ಬಂದ ನಂತರ ಅವರ ವಶಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

SCROLL FOR NEXT