ಉದಯ್ ಚೋಪ್ರಾ 
ಬಾಲಿವುಡ್

ಮಾರಿಜುವಾನ ಕಾನೂನುಬದ್ಧಗೊಳಿಸಿ, ಉದಯ್ ಚೋಪ್ರಾ ಹೇಳಿಕೆಗೆ 'ಹುಷಾರ್ 'ಎಂದ ಪೊಲೀಸರು !

ಮಾದಕ ವಸ್ತು ಮಾರಿಜುವಾನ ಕಾನೂನುಬದ್ಧಗೊಳಿಸುವಂತೆ ದೂಮ್ ಖ್ಯಾತಿಯ ಬಾಲಿವುಡ್ ನಟ ಉದಯ್ ಚೋಪ್ರಾ ಹೇಳಿಕೆ ನೀಡಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮುಂಬೈ: ಮಾದಕ ವಸ್ತು  ಮಾರಿಜುವಾನ  ಕಾನೂನುಬದ್ಧಗೊಳಿಸುವಂತೆ  ದೂಮ್ ಖ್ಯಾತಿಯ ಬಾಲಿವುಡ್ ನಟ ಉದಯ್ ಚೋಪ್ರಾ ಹೇಳಿಕೆ ನೀಡಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಮಾರಿಜುವಾನ ವೈದ್ಯಕೀಯವಾಗಿಯೂ ಸಾಕಷ್ಟು ಅನುಕೂಲವಾಗುವುದರಿಂದ   ಅದನ್ನು ಕಾನೂನುಬದ್ಧಗೊಳಿಸುವಂತೆ ಉದಯ್ ಚೋಪ್ರಾ ನಿನ್ನೆ ಟ್ವೀಟ್ ಮಾಡಿದ್ದರು.

ಮಾರಿಜುವಾನ  ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ಕಾನೂನುಬದ್ಧಗೊಳಿಸಬೇಕು , ಅದನ್ನು ಕಾನೂನುಬದ್ಧಗೊಳಿಸಿ ತೆರಿಗೆ ವಿಧಿಸುವುದರಿಂದ ಹೆಚ್ಚಿನ ಪ್ರಮಾಣದ ಆದಾಯ ಬರುತ್ತದೆ. ಜೊತೆಗೆ  ಹೆಚ್ಚಿನ ಪ್ರಮಾಣದ ವೈದ್ಯಕೀಯ ಅನುಕೂಲವೂ ಆಗಲಿದೆ ಎಂದು ಅವರು ಹೇಳಿದ್ದರು.

 ಉದಯ್ ಚೋಪ್ರಾ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವಂತೆ ಮುಂಬೈ ಪೊಲೀಸರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇಶದ ನಾಗರಿಕರಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುವಾಗ ಹುಷಾರಾಗಿರಿ.1985ರ ಕಾಯ್ದೆ ಪ್ರಕಾರ  ಮಾರಿಜುವಾನ  ಸೇವನೆ, ಸಂಗ್ರಹ, ಹಾಗೂ ಮಾರಾಟಕ್ಕೆ  ಕಠಿಣ ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಚೋಪ್ರಾ ಟ್ವಿಟ್ ಗೆ ಇಂದು ಮದ್ಯಾಹ್ನ 300  ಪ್ರತಿಕ್ರಿಯೆಗಳು ಬಂದಿದ್ದು, 1 ಸಾವಿರ ಲೈಕ್ ಹಾಗೂ ಅನೇಕ ಟೀಕೆಗಳು ಬಂದಿವೆ. ಅನೇಕ ಮಂದಿ ಚೋಪ್ರಾ ಅವರ ದೃಷ್ಟಿ ಹಾಸ್ಯಾಸ್ಪದದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

 ಈ ಟ್ವಿಟ್ ಗಳಲ್ಲಿ ಪ್ರತಿಕ್ರಿಯಿಸಿರುವ ಚೋಪ್ರಾ,  ಮದ್ಯವನ್ನು ಕಾನೂನುಬದ್ಧಗೊಳಿಸದಂತೆ ಏಕೆ ಜನರು ಕೇಳುತ್ತಿಲ್ಲ ಎಂಬ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT