ಬಾಲಿವುಡ್

ಸೋದರನೊಂದಿಗಿನ ರಕ್ಷಾ ಬಂಧನ ನೆನಪನ್ನು ಹಂಚಿಕೊಂಡ ಸುಶಾಂತ್ ಸಿಂಗ್ ಸೋದರಿ

ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ರಕ್ಷಾ ಬಂಧನ್ ಆಚರಣೆಯಂದು ಅಮೂಲ್ಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸುಶಾಂತ್ ಹಾಗೂ ಶ್ವೇತಾ ಸಿಂಗ್ ಬಾಲ್ಯದಲ್ಲಿ ರಾಖಿ ಹಬ್ಬ ಆಚರಿಸಿಕೊಂಡ ಕ್ಷಣಗಳು ಸೆರೆಯಾಗಿದೆ.

ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ರಕ್ಷಾ ಬಂಧನ್ ಆಚರಣೆಯಂದು ಅಮೂಲ್ಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸುಶಾಂತ್ ಹಾಗೂ ಶ್ವೇತಾ ಸಿಂಗ್ ಬಾಲ್ಯದಲ್ಲಿ ರಾಖಿ ಹಬ್ಬ ಆಚರಿಸಿಕೊಂಡ ಕ್ಷಣಗಳು ಸೆರೆಯಾಗಿದೆ.

“ಹ್ಯಾಪಿ ರಕ್ಷಾಬಂಧನ್ ಮೇರಾ ಸ್ವೀಟ್ ಸಾ ಬೇಬಿ ... ಬಹುತ್ ಪ್ಯಾರ್ ಕಾರ್ಟೆ ಹೈ ಹಮ್ ಆಪ್ಕೊ ಜಾನ್.... ಔರ್ಹಮೇಶ ಕಾರ್ಟೆ ರಹೇಂಗೆ ...  ನೀನು ಎಲ್ಲೇ , ಹೇಗೆ ಇದ್ದರೂ ಸದಾ ನಮಗೆ ಹೆಮ್ಮೆಯ ನೆನಪಾಗಿದ್ದೀ...@sushantsinghrajput #happyrakshabandhan,”ಶ್ವೇತಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಸುಶಾಂತ್ ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ  ಸಹ ಸಾಮಾಜಿಕ ತಾಣದಲ್ಲಿ ತಮ್ಮ ನೆನಪು ಹಂಚಿಕೊಂಡಿದ್ದು ಶ್ವೇತಾ ಅವರ ಪೋಸ್ಟ್ ಗೆ . "Diiiiiiiii,"  ಎಂದು ಕಮೆಂಟ್ ಮಾಡಿದ್ದಾರೆ.

ಸುಶಾಂತ್ ಅವರ ಹಿರಿಯ ಸಹೋದರಿ ನೀತು ಸಿಂಗ್ ಅವರನ್ನು ‘ರಾಣಿ ಡಿ’ ಎಂದು ಪ್ರೀತಿಯಿಂದ ಸಂಬೋಧಿಸಿದ್ದು, ಅವರಿಗಾಗಿ ಒಂದು ಭಾವನಾತ್ಮಕ  ನೋಟ್ ಸಹ ಬರೆದಿದ್ದಾರೆ. “ಇಂದು ನಿನ್ನ ದಿನ. ಇಂದು ನಮ್ಮ ದಿನ. ಇಂದು ರಾಖಿ.ಹಬ್ಬ, 35 ವರ್ಷಗಳಲ್ಲಿ ಮೊದಲ ಬಾರಿಗೆ ಪೂಜಾ ಕೋಣೆಯನ್ನು  ಅಲಂಕರಿಸಲಾಗಿದೆ, ದೀಪ ಬೆಳಗಲಾಗಿದೆ.  ಆದರೆ ನಾನು ನಿನಗೆ ಆರತಿ ಮಾಡಲು ಸಾಧ್ಯವಿಲ್ಲ. ನಿನ್ನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟಲು ಸಾಧ್ಯವಿಲ್ಲ. ನಾನು ನಿನಗೆ ಸಿಹಿತಿಂಡಿಗಳನ್ನು ನೀಡಲು ಸಾಧ್ಯವಿಲ್ಲ. ನಾನು ನಿನ್ನ ಹಣೆಗೆ ಮುತ್ತಿಡಲು ಸಾಧ್ಯವಿಲ್ಲ. ನಾನು ನಿನ್ನನ್ನು ತಬ್ಬಿಕೊಳ್ಳಲಾರೆ. ”

"ನೀನು ಜನಿಸಿದಾಗ ಜೀವನವು ಪ್ರಕಾಶಮಾನವಾಯಿತು. ನಿನ್ನ ಜೀವಿತಾವಧಿಯಲ್ಲಿ ನೀನು  ಸಂತೋಷವನ್ನು ಹರಡುತ್ತಿದ್ದೆ. ಆದರೆ ಈಗ ನೀನು ಇಲ್ಲಿಲ್ಲದ ಕಾರಣ, ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನೀನು ಇಲ್ಲದೆ ಹೇಗೆ ಬದುಕಬೇಕು ಎಂದು ನನಗೆ ತಿಳಿದಿಲ್ಲ. ನಾನು ಈ ದಿನವನ್ನು ನೋಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ - ನೀನು ಇಲ್ಲದ ದಿನ.... ನಾವು ಒಟ್ಟಿಗೆ ತುಂಬಾ ಕಲಿತಿದ್ದೇವೆ. ಆದರೆ ನೀನು ಇಲ್ಲದೆ ಬದುಕಲು ನಾನು ಹೇಗೆ ಕಲಿಯಬೇಕು? ನೀನು ನನಗೆ ಹೇಳು. ಎಂದೆಂದಿಗೂ ನಿನ್ನ ರಾಣಿ  ಡಿ, ” ಹಿಂದಿಯಲ್ಲಿ ಬರೆದ ಪೋಸ್ಟ್ ನಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT