ಸಂಜಯ್ ದತ್ ಸುನಿಯೆಲ್ ಶೆಟ್ಟಿ 
ಬಾಲಿವುಡ್

ಕೋವಿಡ್ ಬಿಕ್ಕಟ್ಟು: ಮುಂಬೈನ ಡಬ್ಬಾವಾಲಾಗಳಿಗೆ ಬಾಲಿವುಡ್ ಸ್ಟಾರ್ ಗಳ ನೆರವಿನ ಹಸ್ತ

ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್ ಹಾಗೂ ಸುನೀಲ್ ಶೆಟ್ಟಿ ಲಾಕ್ ಡೌನ್ ಸಮಯದಲ್ಲಿ ಮುಂಬಯಿಯ ಪ್ರಸಿದ್ದ ಡಬ್ಬಾವಾಲಾಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಲಾಕ್ ಡೌನ್ ಕಾಲದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಡಬ್ಬಾವಾಲಾಗಳ ಕುಟುಂಬಗಳಿಗೆ ನಟರು ಆಹಾರಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್ ಹಾಗೂ ಸುನೀಲ್ ಶೆಟ್ಟಿ ಲಾಕ್ ಡೌನ್ ಸಮಯದಲ್ಲಿ ಮುಂಬಯಿಯ ಪ್ರಸಿದ್ದ ಡಬ್ಬಾವಾಲಾಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಲಾಕ್ ಡೌನ್ ಕಾಲದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಡಬ್ಬಾವಾಲಾಗಳ ಕುಟುಂಬಗಳಿಗೆ ನಟರು ಆಹಾರಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

"ಇದು ಅಸ್ಲಂ ಭಾಯ್(ಕ್ಯಾಬಿನೆಟ್ ಸಚಿವ ಅಸ್ಲಂ ಶೇಖ್) ಮತ್ತು ಸಂಜು(ಸಂಜಯ್ ದತ್)ಅವರು ಪ್ರಾರಂಭಿಸಿದ ಉಪಕ್ರಮ, ಅವರೊಂದಿಗೆ ಕೈಜೋಡಿಸಲು ನನಗೆ ಯಾವುದೇ ಹಿಂಜರಿಕೆ ಇರಲಿಲ್ಲ. ಎಲ್ಲರೂ ಒಗ್ಗೂಡಿದಾಗ ನಮ್ಮೆಲ್ಲರ ಪ್ರೀತಿಯ ಡಬ್ಬಾವಾಲಾಗಳ ಬದುಕು ಇನ್ನಷ್ಟು ಸುಂದರವಾಗಲಿದೆ. ಈಗಾಗಲೇ ಆಹಾರ ಟ್ರಕ್‌ಗಳನ್ನು ಪುಣೆಗೆ ಕಳುಹಿಸಲಾಗಿದೆ, ಅಲ್ಲಿ ಹಲವಾರು ಡಬ್ಬಾವಾಲಾಗಳು ತಾವು ಕ್ಯಾಂಪ್ ಹಾಕಿಕೊಂಡಿದ್ದಾರೆ." ಸುನೀಲ್ ಶೆಟ್ಟಿ ಹೇಳಿದ್ದಾರೆ.

ಈವರೆಗೆ 800 ಕಿಟ್‌ಗಳ ಅಕ್ಕಿ ಬೆಳೆ, ಸಕ್ಕರೆ, ಹಿಟ್ಟು ಮತ್ತು ಎಣ್ಣೆಯನ್ನು ಖೇಡ್ ಮತ್ತು ಮಾಲ್ವಾಲ್‌ಗೆ ಕಳಿಸಲಾಗಿದೆ. ಸೇವ್ ದಿ ಚಿಲ್ಡ್ರನ್ ಇಂಡಿಯಾ ಎಂಬ ಎನ್‌ಜಿಒ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮೂವರು 5000 ಕುಟುಂಬಗಳ ಪ್ರತಿ ಸದಸ್ಯರನ್ನು ಲುಪಲು ಉದ್ದೇಶಿಸಿದ್ದಾರೆ. ಎನ್‌ಜಿಒ ಎಲ್ಲವನ್ನು ಪರಿಶೀಲಿಸಲು ಸಿಬ್ಬಂದಿಗಳನ್ನು ಹೊಂದಿದೆ. ನಮ್ಮದು ಮೂರು ತಿಂಗಳ ಯೋಜನೆಯಾಗಿದೆ ಎಂದು ನಟ ಹೇಳಿದ್ದಾರೆ.

ಬಹುಹಿಂದೆ  ಸುನಿಯೆಲ್ ಶೆಟ್ಟಿಯ ತಂದೆ ಎರಡು ಉಡುಪಿ ರೆಸ್ಟೋರೆಂಟ್‌ಗಳನ್ನು ಹೊಂದಿದ್ದರು, ನಂತರ ಅವರು ಅದನ್ನು ಉತ್ತಮ ಊಟದ  ರೆಸ್ಟೋರೆಂಟ್ ಆಗಿಸಿದ್ದರು. "ನಾನು ಜನರಿಗೆ ಆಹಾರವನ್ನು ನೀಡುವ ಕಾರ್ಯ ಪ್ರಾರಂಭಿಸಿದ್ದೆ. ಅವರು ಬಂದು ರೆಸ್ಟೋರೆಂಟ್‌ನಲ್ಲಿ ಊಟ ಮಾಡಬೇಕೆಂದು ನಾನು ಬಯಸಿದೆ. ಆದರೆ ಇದು ಮಾಮೂಲಿ ಸಮಯವಲ್ಲ. ಮತ್ತು ನಿಸ್ಸಂದೇಹವಾಗಿ ನಮ್ಮ ಜೀವನದ ಕಠಿಣ ಹಂತಗಳಲ್ಲಿ ಆಹಾರಕ್ಕಾಗಿ ಅನೇಕ ಜನರು ಹೆಣಗಾಡುತ್ತಿರುವುದು ಬೇಸರದ ಸಂಗತಿ. ಹಾಗಾಗಿ ಅವರಿದ್ದಲ್ಲಿಗೇ ಊಟ, ಆಹಾರವನ್ನು ಪೂರೈಸುವದಕ್ಕೆ ತೀರ್ಮಾನಿಸಿದೆ" ಸುನೀಶ್ ಶೆಟ್ಟಿ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT