ಬಾಲಿವುಡ್

ಸ್ವಜನಪಕ್ಷಪಾತವು ನನ್ನ ವೃತ್ತಿಯಲ್ಲಿ ಬರಲು ಬಿಡುವುದಿಲ್ಲ: ವಿದ್ಯಾ ಬಾಲನ್

Raghavendra Adiga

ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ತಮ್ಮ ವೃತ್ತಿಯಲ್ಲಿ ಸ್ವಜನಪಕ್ಷಪಾತವನ್ನು ಎಂದಿಗೂ ಬರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಆರೋಪದ ನಂತರ ಸಾಮಾಜಿಕ ತಾಣದಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಿದೆ. ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದವರು ಸೇರಿದಂತೆ ಸಾಮಾನ್ಯ ಜನರು ಸ್ವಜನಪಕ್ಷಪಾತ ಬಗ್ಗೆ ವಾದಿಸುತ್ತಿದ್ದಾರೆ. ಈ ಮಧ್ಯೆ ವಿದ್ಯಾ ಬಾಲನ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

“ನಾನು ಕೂಡ ಈ ಉದ್ಯಮದಲ್ಲಿ ಅನೇಕ ಏರಿಳಿತಗಳನ್ನು ನೋಡಿದ್ದೇನೆ. ಎಲ್ಲಾ ರೀತಿಯ ಅನುಭವಗಳನ್ನು ಕಂಡಿದ್ದೇನೆ. ಸ್ವಜನಪಕ್ಷಪಾತವಿಲ್ಲ ಎಂದು ನಾನು ಹೇಳುವುದಿಲ್ಲ, ಆದರೆ ನನ್ನ ವೃತ್ತಿಜೀವನದಲ್ಲಿ ಅದನ್ನು ಬರಲು ನಾನು ಬಿಡಲಿಲ್ಲ” ಎಂದು ತಿಳಿಸಿದ್ದಾರೆ. 

ವಿದ್ಯಾ ಪ್ರಸ್ತುತ ಶಕುಂತಲಾ ದೇವಿ ಚಿತ್ರದಲ್ಲಿ ನಟಿಸಿದ್ದು ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರು ಶ್ರೇಷ್ಠ ಗಣಿತಜ್ಞ ಶಕುಂತಲಾ ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು ತಿಂಗಳ ಕೊನೆಯಲ್ಲಿ ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

SCROLL FOR NEXT