ರಾಖಿ ಸಾವಂತ್ 
ಬಾಲಿವುಡ್

'ಸುಶಾಂತ್ ಸಿಂಗ್ ರಜಪೂತ್ ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರ್ತಾನೆ'

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದ ನಟ ಸುಶಾಂತ್​ ಸಿಂಗ್ ರಜಪೂತ್​ ಬಗ್ಗೆ ಮಾತನಾಡಿರುವ ರಾಖಿ ಸಾವಂತ್ ವಿಡಿಯೋವನ್ನು ಇನ್​​​​ ಸ್ಟಾಗ್ರಾಂನಲ್ಲಿ  ಅಪ್ಲೋಡ್​ ಮಾಡಿದ್ದಾರೆ. ವಿಡಿಯೋದಲ್ಲಿ ರಾಖಿ ಸಾವಂತ್​, ಸುಶಾಂತ್​ ಸಿಂಗ್​ ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರುತ್ತಾನೆ ಎಂದಿದ್ದಾರೆ.

ಮುಂಬಯಿ:​​ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದ ನಟ ಸುಶಾಂತ್​ ಸಿಂಗ್ ರಜಪೂತ್​ ಬಗ್ಗೆ ಮಾತನಾಡಿರುವ ರಾಖಿ ಸಾವಂತ್ ವಿಡಿಯೋವನ್ನು ಇನ್​​​​ ಸ್ಟಾಗ್ರಾಂನಲ್ಲಿ  ಅಪ್ಲೋಡ್​ ಮಾಡಿದ್ದಾರೆ. ವಿಡಿಯೋದಲ್ಲಿ  ರಾಖಿ ಸಾವಂತ್​, ಸುಶಾಂತ್​ ಸಿಂಗ್​ ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರುತ್ತಾನೆ ಎಂದಿದ್ದಾರೆ.

ರಾಖಿ ಸಾವಂತ್​ ಕನಸಿನಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಬಂದಿದ್ದರಂತೆ.  ‘ಸ್ನೇಹಿತರೆ ನಾನು ನಿಮಗೊಂದು ಗುಡ್​ನ್ಯೂಸ್​​ ಹೇಳುತ್ತೇನೆ, ನಾನು ನಿನ್ನೆ ರಾತ್ರಿ ಮಲಗಿದ್ದಾಗ ಕನಸು ಬಿತ್ತು. ತಕ್ಷಣ ಎಚ್ಚರ ಆಯ್ತು. ನನ್ನ ಕನಸಿನಲ್ಲಿ ಸುಶಾಂತ್ ಸಿಂಗ್​ ಬಂದಿದ್ದರು. ನನ್ನ ಕನಸಿನಲ್ಲಿ ಸುಶಾಂತ್ ಸಿಂಗ್​ ಬಂದಿದ್ದರು. ನೀವು ನಾನು ಹೇಳುತ್ತಿರುವ ಈ ಮಾತನ್ನು ನಂಬೋದಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.

ಈ ಕನಸಿನಿಂದ ನಾನು ಸಿಕ್ಕಾಪಟ್ಟೆ ಬೆವತುಬಿಟ್ಟೆ. ನೀನು ಮದುವೆಯಾದ್ರೆ ನಿನ್ನ ಹೊಟ್ಟೆಯಲ್ಲಿ ನಾನು ಮತ್ತೆ ಹುಟ್ಟಿ ಬರ್ತೀನಿ. ನನ್ನ ಅಭಿಮಾನಿಗಳಿಗೆ ಈ ವಿಷಯ ಹೇಳು. ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗು ಸುಶಾಂತ್ ಆಗಿರ್ತಾನೆ. ನನಗೆ ಸುಶಾಂತ್ ಒಳ್ಳೆಯ ದೋಸ್ಟ್, ಸಹೋದರ ಆಗಿದ್ದಾನೆ. ಈ ಚಿತ್ರರಂಗ ನನಗೆ ತುಂಬ ಕಷ್ಟ ಕೊಟ್ಟಿದೆ. ಬಾಲಿವುಡ್‌ ನನಗೆ   ಎಷ್ಟು ಬಹಳಷ್ಟು ಕೊಟ್ಟಿದೆಯೋ ಅಷ್ಟೇ ಕಿತ್ತುಕೊಂಡಿದೆ. ಪಾರ್ಟಿಗಳಿಗೆ ಬಾಯ್‌ಕಟ್ ಹೇಳಿತ್ತು. ಕಂಗನಾ ರಣಾವತ್, ರಾಖಿ ಸಾವಂತ್ ನನಗೆ ಪ್ರೋತ್ಸಾಹ ನೀಡಿದ್ದಾರೆ. ಇವರಿಗೆ ನನ್ನ ಧನ್ಯವಾದಗಳು ಎಂದು ಸುಶಾಂತ್ ಹೇಳಿದ್ದಾರೆ' ಎಂದು ರಾಖಿ ಸಾವಂತ್ ಹೇಳಿದ್ದಾರೆ.

ರಾಖಿ ಸಾವಂತ್​ ಮಾತು ಕೇಳಿ ಅನೇಕರು ಸಿಟ್ಟಾಗಿದ್ದಾರೆ. ಕೆಲವರು ಈ ರೀತಿ ಹೇಳಿದ್ದಕ್ಕಾಗಿ ಬೈಗುಳದ ಸುರಿಮಳೆ ಸುರಿಸಿದ್ದಾರೆ. ಇನ್ನು ಕೆಲವು ಟ್ರೋಲ್​ ಪೇಜ್​ ರಾಖಿ ಸಾವಂತ್​ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಕ್ಬಾಲ್ ಹುಸೇನ್ ಮಾತು ನಂಬಬೇಡಿ, ಅವನಿಗೆ ಮಾತಾಡೋ ಚಟ: 'ಮಾನಸಪುತ್ರ'ನ ವಿರುದ್ಧ ಡಿಕೆಶಿ ಸಿಡಿಮಿಡಿ

Video: ಜ. 6 ರಂದು ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ: ಡಿಕೆಶಿ ‘ಮಾನಸಪುತ್ರ’ನಿಂದ ಸ್ಫೋಟಕ ಹೇಳಿಕೆ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ನಗರ, ಪಂಚಾಯಿತಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ ಯುಡಿಎಫ್, ತಿರುವನಂತಪುರಂನಲ್ಲಿ NDA ಭದ್ರ!

Lionel Messi: ಮೆಸ್ಸಿ ಫ್ಯಾನ್ಸ್ ದಾಂಧಲೆ; ಆಯೋಜಕರ ಬಂಧನ, ಹಣ ವಾಪಸ್​ಗೆ ಸೂಚನೆ

ಮೇಕೆದಾಟು ಅಣೆಕಟ್ಟು ಯೋಜನೆ: ಇದೇ ಕರ್ನಾಟಕದ ಪ್ರಮುಖ ಗುರಿ! ಡಿಎಂಕೆಯ ದ್ರೋಹವನ್ನು ಕ್ಷಮಿಸಲು ಸಾಧ್ಯವಿಲ್ಲ- ಪಳನಿಸ್ವಾಮಿ

SCROLL FOR NEXT