ನೀತು ಸಿಂಗ್ ಕಪೂರ್ ಮತ್ತು ರಿಷಿ ಕಪೂರ್ (ಸಂಗ್ರಹ ಚಿತ್ರ) 
ಬಾಲಿವುಡ್

''ನಮ್ಮ ಕಥೆಯ ಅಂತ್ಯ'' ರಿಷಿ ಕಪೂರ್ ಗೆ ಭಾವನಾತ್ಮಕ ವಿದಾಯ ನುಡಿ ಬರೆದ ಪತ್ನಿ ನೀತು ಸಿಂಗ್ ಕಪೂರ್

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನರಾದ ಎರಡು ದಿನ ಬಳಿಕ ಅವರ ಪತ್ನಿ ನಟಿ ನೀತು ಸಿಂಗ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ವಿದಾಯ ಪೋಸ್ಟ್ ವೊಂದನ್ನು ಹಾಕಿದ್ದಾರೆ.

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನರಾದ ಎರಡು ದಿನ ಬಳಿಕ ಅವರ ಪತ್ನಿ ನಟಿ ನೀತು ಸಿಂಗ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ವಿದಾಯ ಪೋಸ್ಟ್ ವೊಂದನ್ನು ಹಾಕಿದ್ದಾರೆ.

ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಮುಖದ ತುಂಬಾ ನಗು ಇರುವ ರಿಷಿ ಕಪೂರ್ ಫೋಟೋವನ್ನು ಹಾಕಿರುವ ನೀತು ಕಪೂರ್ ನಮ್ಮ ಕಥೆಯ ಅಂತ್ಯ ಎಂದು ಅಡಿಬರಹ ಕೊಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕ್ಯಾನ್ಸರ್ ರೋಗಕ್ಕೆ ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್ ನಲ್ಲಿ ಮುಂಬೈಗೆ ವಾಪಸ್ಸಾಗಿದ್ದ 67 ವರ್ಷದ ರಿಷಿ ಕಪೂರ್ ಕಳೆದ ಗುರುವಾರ ಮುಂಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.

ರಿಷಿ ಕಪೂರ್ ಮತ್ತು ನೀತು ಸಿಂಗ್ 1974ರಲ್ಲಿ ಜೆಹ್ರೀಲಾ ಇನ್ಸಾನ್ ಚಿತ್ರೀಕರಣ ವೇಳೆ ಭೇಟಿಯಾಗಿದ್ದರು. ನಂತರ ಪರಿಚಯ, ಪ್ರೀತಿಗೆ ತಿರುಗಿ 1980ರಲ್ಲಿ ವಿವಾಹವಾದರು. ಖೇಲ್ ಖೇಲ್ ಮೇ, ರಫೂ ಚಕ್ಕರ್, ಕಭಿ ಕಭಿ, ಅಮರ್ ಅಕ್ಬರ್ ಅಂತೊನಿ, ದುನಿಯಾ ಮೇರಿ ಜಬ್ ಮೇ, ಜಿಂದಾ ದಿಲ್ ಮೊದಲಾದ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

ವಿವಾಹವಾದ ನಂತರವೂ ಈ ಜೋಡಿ ಲವ್ ಆಜ್ ಕಲ್, ದೊ ದೂನಿ ಚಾರ್, ಜಬ್ ತಕ್ ಹೈ ಜಾನ್ ಮತ್ತು ಬೆಶರಮ್ ಚಿತ್ರದಲ್ಲಿ ಪುತ್ರ ರಣ್ ಬೀರ್ ಕಪೂರ್ ಜೊತೆಗೆ ನಟಿಸಿದ್ದರು.

ರಿಷಿ ಕಪೂರ್ ತಮ್ಮ ಕೊನೆಯ ದಿನದವರೆಗೂ ಕುಟುಂಬಸ್ಥರು, ಬಂಧುಗಳ ಜೊತೆ, ಆಸ್ಪತ್ರೆಯಲ್ಲಿದ್ದಾಗ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಜೊತೆ ಹಾಸ್ಯ ಮಾಡುತ್ತಾ ವಿನೋದದಿಂದ ಇದ್ದರು ಎಂದು ಕಪೂರ್ ಮನೆತನ ಅವರ ನಿಧನ ನಂತರ ಬಿಡುಗಡೆ ಮಾಡಿದ ಪೋಸ್ಟ್ ನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT