ಬಾಲಿವುಡ್

ಮುಂಬೈ ಈಗ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ: ಕಂಗನಾ ರಣಾವತ್ 

Srinivas Rao BV

ಶಿವಸೇನೆ ಸಂಸದ ಸಂಜಯ್ ರಾವತ್ ತಮಗೆ ಬೆದರಿಕೆ ಹಾಕಿರುವ ಬಗ್ಗೆ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದು ತಮಗೆ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. 

ಸಂಜಯ್ ರೌತ್ ತಮಗೆ ಮುಂಬೈ ಪೊಲೀಸರಲ್ಲಿ ನಂಬಿಕೆ ಇಲ್ಲದೇ ಇದ್ದರೆ ಮುಂಬೈಗೆ ಬರದಂತೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈ ನನಗೆ ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. 

ಇದಕ್ಕೂ ಮುನ್ನ ಸಂಜಯ್ ರೌತ್ ಶಿವಸೇನೆ ಮುಖವಾಣಿಯಲ್ಲಿ ಕಂಗನಾ ಅವರನ್ನು ಟೀಕಿಸುವ ಭರದಲ್ಲಿ ತಾವು ವಾಸಿಸುತ್ತಿರುವ ನಗರದ ಪೊಲೀಸರ ಬಗ್ಗೆ ನಂಬಿಕೆ ಇಲ್ಲದೇ ಇದ್ದಲ್ಲಿ ಮುಂಬೈಗೆ ಬರಬಾರದು, ಕಂಗನಾ ವಿರುದ್ಧ ಗೃಹ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಎನ್ ಸಿಬಿ ಬಾಲಿವುಡ್ ಗೆ ಬಂದರೆ ಹಲವು Aಲಿಸ್ಟರ್ ಗಳು ಜೈಲಿಗೆ ಹೋಗಲಿದ್ದಾರೆ. ರಕ್ತ ಪರೀಕ್ಷೆ ಮಾಡಿದರೆ ಹಲವು ಅಚ್ಚರಿಯ ಮಹಿತಿ ಬಹಿರಂಗವಾಗಲಿದೆ. ಪಿಎಂಒ ಸ್ವಚ್ಛಭಾರತ ಅಭಿಯಾನದ ಅಡಿಯಲ್ಲಿ ಬಾಲಿವುಡ್ ಎಂಬ ಗಟರ್ ನ್ನು ಸ್ವಚ್ಛ ಮಾಡಲಿದೆ ಎಂದು ಟ್ವೀಟ್ ನಲ್ಲಿ ಕಂಗನಾ ಹೇಳಿದ್ದರು.

SCROLL FOR NEXT