ವಿಪುಲ್ ಶಾ-ಅದಾ ಶರ್ಮಾ 
ಬಾಲಿವುಡ್

'ದಿ ಕೇರಳ ಸ್ಟೋರಿ': ಪುರಾವೆ ಇಲ್ಲದೆ ಏನನ್ನು ಮಾಡಿಲ್ಲ- ನಿರ್ಮಾಪಕ ವಿಪುಲ್ ಶಾ

ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ವಿಪುಲ್ ಶಾ ಅವರು ತಮ್ಮ ಮುಂಬರುವ ಚಿತ್ರ 'ದಿ ಕೇರಳ ಸ್ಟೋರಿ' ಕುರಿತು ಕೆಲವು ಸಮಯದಿಂದ ಚರ್ಚೆಯಲ್ಲಿದ್ದಾರೆ. ಈ ಚಿತ್ರದ ಟೀಸರ್ ನವೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.

ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ವಿಪುಲ್ ಶಾ ಅವರು ತಮ್ಮ ಮುಂಬರುವ ಚಿತ್ರ 'ದಿ ಕೇರಳ ಸ್ಟೋರಿ' ಕುರಿತು ಕೆಲವು ಸಮಯದಿಂದ ಚರ್ಚೆಯಲ್ಲಿದ್ದಾರೆ. ಈ ಚಿತ್ರದ ಟೀಸರ್ ನವೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. 

ಟೀಸರ್ ಬಿಡುಗಡೆ ನಂತರ ಚಿತ್ರ ಟೀಕೆಗಳನ್ನು ಎದುರಿಸುತ್ತಿದೆ. ಕೇರಳದ ಹಲವು ನಾಯಕರು ಈ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದರು. ಈಗ ಈ ಎಲ್ಲದರ ಬಗ್ಗೆ ಸ್ವತಃ ವಿಪುಲ್ ಶಾ ಮಾತನಾಡಿದ್ದಾರೆ.

ನಿರ್ದೇಶಕ ಸುದೀಪ್ತೋ ಸೇನ್ 'ದಿ ಕೇರಳ ಸ್ಟೋರಿ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅದಾ ಶರ್ಮಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಟೀಸರ್‌ನಲ್ಲಿ, ಅದಾ ಶರ್ಮಾ ಹಿಜಾಬ್ ಧರಿಸಿ, 'ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್. ನರ್ಸ್ ಆಗುವ ಮೂಲಕ ಜನರ ಸೇವೆ ಮಾಡಬೇಕೆಂದುಕೊಂಡಿದ್ದೇ. ಈಗ ನಾನು ಫಾತಿಮಾ ಬಾ, ಐಸಿಸ್ ಭಯೋತ್ಪಾದಕ. ಅಫ್ಘಾನಿಸ್ತಾನ ಜೈಲಿನಲ್ಲಿ ನಾನು ಒಬ್ಬಂಟಿಯಾಗಿಲ್ಲ ನನ್ನಂತೆಯೇ 32 ಸಾವಿರ ಮಹಿಳೆಯರನ್ನು ಪರಿವರ್ತಿಸಲಾಗಿದೆ ಮತ್ತು ಸಿರಿಯಾ ಮತ್ತು ಯೆಮೆನ್ ಮರುಭೂಮಿಗಳಲ್ಲಿ ಸಮಾಧಿ ಮಾಡಲಾಗಿದೆ ಎಂದು ಹೇಳಿದ್ದರು.

ಇನ್ನು ಅದಾ ಶರ್ಮಾ, ಸಾಮಾನ್ಯ ಹುಡುಗಿಯನ್ನು ಅಪಾಯಕಾರಿ ಭಯೋತ್ಪಾದಕನನ್ನಾಗಿ ಮಾಡುವ ಆಟ ಕೇರಳದಲ್ಲಿ ಬಹಿರಂಗವಾಗಿ ನಡೆಯುತ್ತಿದೆ. ಇದು ನನ್ನ ಕಥೆ. ಇದು ಆ 32 ಸಾವಿರ ಹುಡುಗಿಯರ ಕಥೆ. ಈ ಟೀಸರ್ ಬಿಡುಗಡೆಯಾದ ನಂತರ, ಚಿತ್ರವು ಟೀಕೆಗಳನ್ನು ಎದುರಿಸಿತು. ಅದರ ವಿರುದ್ಧ ಸತ್ಯಗಳನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂಬ ಆರೋಪಗಳನ್ನು ಹೊರಿಸಲಾಯಿತು. ಈಗ ಈ ಬಗ್ಗೆ ವಿಪುಲ್ ಶಾ ಹೇಳಿದ್ದೇನು ಗೊತ್ತಾ?

ಪುರಾವೆ ಇಲ್ಲದೆ ಏನೂ ಮಾಡಿಲ್ಲ - ವಿಪುಲ್ ಶಾ
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಪುಲ್ ಶಾ, ಸಮಯ ಬಂದಾಗ ಆರೋಪಗಳ ಬಗ್ಗೆ ಮಾತನಾಡುತ್ತೇವೆ. ನಾವು ಏನೇ ಹೇಳಿದರೂ ಪುರಾವೆ ಇಲ್ಲದೇ ಇರುವುದಿಲ್ಲ. ನಾವು ಸತ್ಯ ಮತ್ತು ಅಂಕಿಅಂಶಗಳನ್ನು ಪ್ರಸ್ತುತಪಡಿಸಿದಾಗ ಜನರು ಉತ್ತರಗಳನ್ನು ಪಡೆಯುತ್ತಾರೆ. ಆಮೇಲೆ ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಅದು ಅವರಿಗೆ ಬಿಟ್ಟದ್ದು. ನಿರ್ದೇಶಕ ಸುದೀಪ್ತೋ ಸೇನ್ ಸಿನಿಮಾ ಆರಂಭಿಸುವ ಮುನ್ನ ನಾಲ್ಕು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದರು ಎಂದರು.

ದೊಡ್ಡ ದುರಂತದ ಮೇಲೆ ಸಿನಿಮಾ ಮಾಡುತ್ತಿದ್ದೇವೆ ಎಂದು ವಿಪುಲ್ ಶಾ ಹೇಳಿದ್ದಾರೆ. 'ನಾನು ಈ ಕಥೆಯನ್ನು ಚಲನಚಿತ್ರ ನಿರ್ಮಾಪಕನಾಗಿ ಹೇಳಲು ಬಯಸುತ್ತೇನೆ. ಒಬ್ಬ ಚಲನಚಿತ್ರ ನಿರ್ಮಾಪಕನಾಗಿ, ನಾನು ನನ್ನ ಹೃದಯವನ್ನು ಸ್ಪರ್ಶಿಸುವ ಮತ್ತು ಅವುಗಳನ್ನು ಹೇಳಲು ಪ್ರೇರೇಪಿಸುವ ಕಥೆಗಳ ಬಗ್ಗೆ ಯೋಚಿಸುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT