ಕರೀನಾ ಕಪೂರ್ (ಸಂಗ್ರಹ ಚಿತ್ರ) 
ಬಾಲಿವುಡ್

ಪ್ರಭಾಸ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಬದಲಿಗೆ ಯಶ್ ಜೊತೆ ನಟಿಸಲು ಕರೀನಾ ಕಪೂರ್‌ಗೆ ಇಷ್ಟವಂತೆ!

ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಈ ಸಿನಿಮಾಗಳಿಗೆ ಪರಭಾಷಾ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ನಟನೆಗೆ ಎಲ್ಲಿಲ್ಲದ ಮೈಲೇಜ್ ಸಿಕ್ಕಿತ್ತು. ಬಾಲಿವುಡ್ ನಟರಾದ ಶಾರುಖ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಅನೇಕರು ಯಶ್ ನಟನೆಗೆ ಜೈ ಎಂದಿದ್ದರು. ಇದೀಗ ಆ ಸಾಲಿಗೆ ನಟಿ ಕರೀನಾ ಕಪೂರ್ ಸೇರಿದ್ದಾರೆ.

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಯಶ್ ಅವರು ಕನ್ನಡ ಚಿತ್ರರಂಗವಲ್ಲದೆ ಪ್ಯಾನ್ ಇಂಡಿಯಾ ನಟನಾಗಿ ಬೆಳೆದಿದ್ದಾರೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಇದು ಅವರ ಅಸಾಧಾರಣ ಪ್ರತಿಭೆ ಮತ್ತು ಸಾರ್ವತ್ರಿಕವಾಗಿ ಅನುರಣಿಸುವ ಅನನ್ಯ ವರ್ಚಸ್ಸಿನ ಪ್ರತಿಬಿಂಬವಾಗಿದೆ.

ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಈ ಸಿನಿಮಾಗಳಿಗೆ ಪರಭಾಷಾ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ನಟನೆಗೆ ಎಲ್ಲಿಲ್ಲದ ಮೈಲೇಜ್ ಸಿಕ್ಕಿತ್ತು. ಬಾಲಿವುಡ್ ನಟರಾದ ಶಾರುಖ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಅನೇಕರು ಯಶ್ ನಟನೆಗೆ ಜೈ ಎಂದಿದ್ದರು. ಇದೀಗ ಆ ಸಾಲಿಗೆ ನಟಿ ಕರೀನಾ ಕಪೂರ್ ಸೇರಿದ್ದಾರೆ.

ಪ್ರಖ್ಯಾತ ಟಾಕ್ ಶೋ ಕಾಫಿ ವಿತ್ ಕರಣ್‌ನ ಇತ್ತೀಚಿನ ಸಂಚಿಕೆಯಲ್ಲಿ, ಯಶ್ ಕುರಿತಾದ ಮಾತುಗಳು ಕೇಳಿಬಂದಿವೆ. ರ್ಯಾಪಿಡ್ ಫೈರ್ ರೌಂಡ್ ಸಮಯದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರನ್ನು, 'ನೀವು ದಕ್ಷಿಣದ ಯಾವ ನಟನೊಂದಿಗೆ ನಟಿಸಲು ಬಯಸುತ್ತೀರಿ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಪ್ರಭಾಸ್, ರಾಮ್ ಚರಣ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಮತ್ತು ಯಶ್ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಈ ವೇಳೆ ಅವರು, ತಕ್ಷಣವೇ 'ಯಶ್' ಎಂದು ಪ್ರತಿಕ್ರಿಯಿಸಿದರು. ಹೆಮ್ಮೆಯಿಂದ ತಮ್ಮನ್ನು ತಾವು 'ಕೆಜಿಎಫ್ ಹುಡುಗಿ' ಎಂದು ಘೋಷಿಸಿಕೊಂಡರು.

'ಎಲ್ಲರೂ ಉತ್ತಮ ನಟರೆ. ಆದರೆ, ನಾನು 'ಕೆಜಿಎಫ್' ಹುಡುಗಿ. ಹಾಗಾಗಿ ನನಗೆ ಯಶ್ ಜೊತೆ ನಟಿಸೋಕೆ ಇಷ್ಟ' ಎಂದಿದ್ದಾರೆ. ನೀವು 'ಕೆಜಿಎಫ್' ಸಿನಿಮಾ ನೋಡಿದ್ದೀರಾ ಎನ್ನುವ ಪ್ರಶ್ನೆಗೆ, ಕರೀನಾ ಹೌದು ಎಂದಿದ್ದಾರೆ. 

ಅಂತರಾಷ್ಟ್ರೀಯ ವೇದಿಕೆಯಲ್ಲಿ ಯಶ್ ಅವರ ಉಪಸ್ಥಿತಿಯು ಭೌಗೋಳಿಕ ಗಡಿಗಳನ್ನು ಮೀರಿದೆ. ಅವರನ್ನು ಚಲನಚಿತ್ರೋದ್ಯಮದಲ್ಲಿ ಬೇಡಿಕೆಯ ವ್ಯಕ್ತಿಯನ್ನಾಗಿ ಮಾಡಿದೆ. ಕರೀನಾ ಕಪೂರ್ ಖಾನ್ ಅವರಂತಹ ಉದ್ಯಮದ ಇತರರ ಹೇಳಿಕೆಗಳಿಂದ ನಿಜವಾದ ಜಾಗತಿಕ ಐಕಾನ್ ಆಗಿ ಅವರ ಸ್ಥಾನಮಾನವನ್ನು ಬಲಪಡಿಸುತ್ತದೆ.

ಯಶ್ ಕೇವಲ ಸೂಪರ್ ಸ್ಟಾರ್ ಅಲ್ಲ; ಅವರು ವೈವಿಧ್ಯಮಯ ಹಿನ್ನೆಲೆ ಮತ್ತು ಸಂಸ್ಕೃತಿಯ ಪ್ರೇಕ್ಷಕರನ್ನು ಒಂದುಗೂಡಿಸಿದ ಐಕಾನ್ ಆಗಿದ್ದಾರೆ. ಪ್ರತಿಭೆಯು ಎಲ್ಲಾ ಗಡಿಗಳನ್ನು ಮೀರಿದ ಮತ್ತು ಶಾಶ್ವತವಾದ ಗುರುತನ್ನು ರಚಿಸುವ ಸಾರ್ವತ್ರಿಕ ಭಾಷೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT