ಕರೀನಾ ಕಪೂರ್ (ಸಂಗ್ರಹ ಚಿತ್ರ) 
ಬಾಲಿವುಡ್

ಪ್ರಭಾಸ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಬದಲಿಗೆ ಯಶ್ ಜೊತೆ ನಟಿಸಲು ಕರೀನಾ ಕಪೂರ್‌ಗೆ ಇಷ್ಟವಂತೆ!

ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಈ ಸಿನಿಮಾಗಳಿಗೆ ಪರಭಾಷಾ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ನಟನೆಗೆ ಎಲ್ಲಿಲ್ಲದ ಮೈಲೇಜ್ ಸಿಕ್ಕಿತ್ತು. ಬಾಲಿವುಡ್ ನಟರಾದ ಶಾರುಖ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಅನೇಕರು ಯಶ್ ನಟನೆಗೆ ಜೈ ಎಂದಿದ್ದರು. ಇದೀಗ ಆ ಸಾಲಿಗೆ ನಟಿ ಕರೀನಾ ಕಪೂರ್ ಸೇರಿದ್ದಾರೆ.

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಯಶ್ ಅವರು ಕನ್ನಡ ಚಿತ್ರರಂಗವಲ್ಲದೆ ಪ್ಯಾನ್ ಇಂಡಿಯಾ ನಟನಾಗಿ ಬೆಳೆದಿದ್ದಾರೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಇದು ಅವರ ಅಸಾಧಾರಣ ಪ್ರತಿಭೆ ಮತ್ತು ಸಾರ್ವತ್ರಿಕವಾಗಿ ಅನುರಣಿಸುವ ಅನನ್ಯ ವರ್ಚಸ್ಸಿನ ಪ್ರತಿಬಿಂಬವಾಗಿದೆ.

ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಈ ಸಿನಿಮಾಗಳಿಗೆ ಪರಭಾಷಾ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ನಟನೆಗೆ ಎಲ್ಲಿಲ್ಲದ ಮೈಲೇಜ್ ಸಿಕ್ಕಿತ್ತು. ಬಾಲಿವುಡ್ ನಟರಾದ ಶಾರುಖ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಅನೇಕರು ಯಶ್ ನಟನೆಗೆ ಜೈ ಎಂದಿದ್ದರು. ಇದೀಗ ಆ ಸಾಲಿಗೆ ನಟಿ ಕರೀನಾ ಕಪೂರ್ ಸೇರಿದ್ದಾರೆ.

ಪ್ರಖ್ಯಾತ ಟಾಕ್ ಶೋ ಕಾಫಿ ವಿತ್ ಕರಣ್‌ನ ಇತ್ತೀಚಿನ ಸಂಚಿಕೆಯಲ್ಲಿ, ಯಶ್ ಕುರಿತಾದ ಮಾತುಗಳು ಕೇಳಿಬಂದಿವೆ. ರ್ಯಾಪಿಡ್ ಫೈರ್ ರೌಂಡ್ ಸಮಯದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರನ್ನು, 'ನೀವು ದಕ್ಷಿಣದ ಯಾವ ನಟನೊಂದಿಗೆ ನಟಿಸಲು ಬಯಸುತ್ತೀರಿ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಪ್ರಭಾಸ್, ರಾಮ್ ಚರಣ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಮತ್ತು ಯಶ್ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಈ ವೇಳೆ ಅವರು, ತಕ್ಷಣವೇ 'ಯಶ್' ಎಂದು ಪ್ರತಿಕ್ರಿಯಿಸಿದರು. ಹೆಮ್ಮೆಯಿಂದ ತಮ್ಮನ್ನು ತಾವು 'ಕೆಜಿಎಫ್ ಹುಡುಗಿ' ಎಂದು ಘೋಷಿಸಿಕೊಂಡರು.

'ಎಲ್ಲರೂ ಉತ್ತಮ ನಟರೆ. ಆದರೆ, ನಾನು 'ಕೆಜಿಎಫ್' ಹುಡುಗಿ. ಹಾಗಾಗಿ ನನಗೆ ಯಶ್ ಜೊತೆ ನಟಿಸೋಕೆ ಇಷ್ಟ' ಎಂದಿದ್ದಾರೆ. ನೀವು 'ಕೆಜಿಎಫ್' ಸಿನಿಮಾ ನೋಡಿದ್ದೀರಾ ಎನ್ನುವ ಪ್ರಶ್ನೆಗೆ, ಕರೀನಾ ಹೌದು ಎಂದಿದ್ದಾರೆ. 

ಅಂತರಾಷ್ಟ್ರೀಯ ವೇದಿಕೆಯಲ್ಲಿ ಯಶ್ ಅವರ ಉಪಸ್ಥಿತಿಯು ಭೌಗೋಳಿಕ ಗಡಿಗಳನ್ನು ಮೀರಿದೆ. ಅವರನ್ನು ಚಲನಚಿತ್ರೋದ್ಯಮದಲ್ಲಿ ಬೇಡಿಕೆಯ ವ್ಯಕ್ತಿಯನ್ನಾಗಿ ಮಾಡಿದೆ. ಕರೀನಾ ಕಪೂರ್ ಖಾನ್ ಅವರಂತಹ ಉದ್ಯಮದ ಇತರರ ಹೇಳಿಕೆಗಳಿಂದ ನಿಜವಾದ ಜಾಗತಿಕ ಐಕಾನ್ ಆಗಿ ಅವರ ಸ್ಥಾನಮಾನವನ್ನು ಬಲಪಡಿಸುತ್ತದೆ.

ಯಶ್ ಕೇವಲ ಸೂಪರ್ ಸ್ಟಾರ್ ಅಲ್ಲ; ಅವರು ವೈವಿಧ್ಯಮಯ ಹಿನ್ನೆಲೆ ಮತ್ತು ಸಂಸ್ಕೃತಿಯ ಪ್ರೇಕ್ಷಕರನ್ನು ಒಂದುಗೂಡಿಸಿದ ಐಕಾನ್ ಆಗಿದ್ದಾರೆ. ಪ್ರತಿಭೆಯು ಎಲ್ಲಾ ಗಡಿಗಳನ್ನು ಮೀರಿದ ಮತ್ತು ಶಾಶ್ವತವಾದ ಗುರುತನ್ನು ರಚಿಸುವ ಸಾರ್ವತ್ರಿಕ ಭಾಷೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT