ಸಲ್ಮಾನ್ ಖಾನ್ online desk
ಬಾಲಿವುಡ್

ಜೀವ ಬೆದರಿಕೆ ನಡುವೆ ಸಿಕಂದರ್ ಚಿತ್ರೀಕರಣಕ್ಕೆ ಸಲ್ಮಾನ್ ಖಾನ್: ಎನ್ ಎಸ್ ಜಿ ಕಮಾಂಡೋ, 50-60 ಅಧಿಕಾರಿಗಳಿಂದ ಭದ್ರತೆ

ನಟನ ಭದ್ರತೆಗಾಗಿ, ಒಂದು ಭಾಗವನ್ನು ಚಲನಚಿತ್ರದ ತಂಡಕ್ಕೆ ಮಾತ್ರ ಅತ್ಯಂತ ನಿರ್ಬಂಧಿತ ಪ್ರವೇಶದೊಂದಿಗೆ ಸೀಲ್ ಮಾಡಲಾಗಿದೆ ಎಂದು ಮಿಡ್-ಡೇ ವರದಿ ಮಾಡಿದೆ.

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹೆಚ್ಚಾಗತೊಡಗಿದ್ದು, ಬೆದರಿಕೆ ಕರೆಗಳ ನಡುವೆಯೇ ತಮ್ಮ ಮುಂದಿನ ಚಿತ್ರ ಸಿಕಂದರ್ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

ವರದಿಗಳ ಪ್ರಕಾರ, ಬಾಲಿವುಡ್ ನಟನಿಗೆ ಪ್ರೊಡಕ್ಷನ್ ನಿಂದ 4 ಪದರಗಳ ಭದ್ರತೆಯನ್ನು ಒದಗಿಸಲಾಗಿದೆ. ಸಿಕಂದರ್ ನ ಚಿತ್ರೀಕರಣ ಹೈದರಾಬಾದ್ ನ ಫಲಕ್ನುಮಾ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆಯುತ್ತಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಗುರುವಾರ ರಾತ್ರಿಯೂ ಸಲ್ಮಾನ್ ಖಾನ್ ಗೆ ಹೊಸ ಬೆದರಿಕೆ ಸಂದೇಶ ಬಂದಿದೆ. ಈ ಬಾರಿ ಎಚ್ಚರಿಕೆಯನ್ನು, ಸಲ್ಮಾನ್ ಖಾನ್ ನ್ನು ಜೈಲಿನಲ್ಲಿರುವ ದರೋಡೆಕೋರನಿಗೆ ಲಿಂಕ್ ಮಾಡುವ ವಿವಾದಾತ್ಮಕ ಕುರಿತು ಗೀತರಚನೆಕಾರರಿಗೆ ಉದ್ದೇಶಿಸಲಾಗಿದೆ ಎಂದು ವರದಿಯಾಗಿದೆ. ತನಿಖೆಯ ಮಧ್ಯೆ, ನಟ ತನ್ನ ಮುಂದಿನ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ. ಸಲ್ಮಾನ್ ಸದ್ಯ ಹೈದರಾಬಾದ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಹಾಡುಗಳ ಚಿತ್ರೀಕರಣ ನಡೆಸುತ್ತಿದ್ದಾರೆ.

ನಟನ ಭದ್ರತೆಗಾಗಿ, ಒಂದು ಭಾಗವನ್ನು ಚಲನಚಿತ್ರದ ತಂಡಕ್ಕೆ ಮಾತ್ರ ಅತ್ಯಂತ ನಿರ್ಬಂಧಿತ ಪ್ರವೇಶದೊಂದಿಗೆ ಸೀಲ್ ಮಾಡಲಾಗಿದೆ ಎಂದು ಮಿಡ್-ಡೇ ವರದಿ ಮಾಡಿದೆ. ಹೆಚ್ಚಿನ ಭದ್ರತಾ ಕ್ರಮಗಳ ಜೊತೆಗೆ, ಸೆಟ್‌ನಲ್ಲಿ ಹೆಚ್ಚಿನ ಸುರಕ್ಷತೆಯನ್ನು ಅಳವಡಿಸಲಾಗಿದೆ. ಇಡೀ ಹೋಟೆಲ್ ಸುರಕ್ಷಿತವಾಗಿದೆ ಅತಿಥಿಗಳ ಹೊರತಾಗಿ ಸಿಬ್ಬಂದಿ ಕೂಡ ದೈನಂದಿನ ತಪಾಸಣೆಗೆ ಒಳಗಾಗುತ್ತಿದ್ದಾರೆ.

ಮತ್ತೊಂದೆಡೆ, ಸಲ್ಮಾನ್ ಭದ್ರತೆಯನ್ನು ಸುಧಾರಿಸಲಾಗಿದ್ದು ಇದು ಸರ್ಕಾರ-ಅಧಿಕೃತ ರಕ್ಷಣೆಯನ್ನು ಒಳಗೊಂಡಿದೆ, NSG ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಸಲ್ಮಾನ್ ಖಾನ್ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ನಾಲ್ಕು ಹಂತದ ವ್ಯವಸ್ಥೆ ಖಾಸಗಿ ಮಾಜಿ ಅರೆಸೈನಿಕ ಸಿಬ್ಬಂದಿ ಮತ್ತು ಆಯ್ಕೆ ಮಾಡಿದ ತಂಡವನ್ನು ಒಳಗೊಂಡಿದೆ.

ವರದಿಗಳ ಪ್ರಕಾರ, ಒಟ್ಟು 50 ರಿಂದ 70 ಭದ್ರತಾ ಸಿಬ್ಬಂದಿ ಜೊತೆಯಲ್ಲಿದ್ದಾರೆ. ನಟ ನಗರದಲ್ಲಿ ಚಿತ್ರೀಕರಣ ನಡೆಸುತ್ತಿರುವಾಗ ಹೈದರಾಬಾದ್ ಮತ್ತು ಮುಂಬೈ ಪೊಲೀಸರು ಭದ್ರತೆಯ ಭಾಗವಾಗಿದ್ದಾರೆ. ಏತನ್ಮಧ್ಯೆ, ಅವರು ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ ನಂತರ ಅವರು ತಮ್ಮ ಡಾ-ಬ್ಯಾಂಗ್ ರಿಲೋಡೆಡ್ ಶೋಗಾಗಿ ದುಬೈಗೆ ತೆರಳಲಿರುವುದನ್ನು ವರದಿಗಳು ಬಹಿರಂಗಪಡಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT