ಬಾಲಿವುಡ್

ಹೋಳಿ ಹಬ್ಬಕ್ಕೆ ಅಕ್ಷಯ್ ಕುಮಾರ್, ಕತ್ರೀನಾ ಕೈಫ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ 'ನಮಸ್ತೆ ಲಂಡನ್' ರೀರಿಲೀಸ್!

'ನಮಸ್ತೆ ಲಂಡನ್' ಚಿತ್ರವು ವಿಪುಲ್ ಅಮೃತಲಾಲ್ ಶಾ ನಿರ್ದೇಶಿಸಿದ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಆಗಿದೆ.

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ನಟನೆಯ 2007 ರಲ್ಲಿ ತೆರೆಕಂಡಿದ್ದ ಬ್ಲಾಕ್‌ಬಸ್ಟರ್ ಚಿತ್ರ 'ನಮಸ್ತೆ ಲಂಡನ್' ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ತೆರೆಕಾಣಲು ಸಿದ್ಧವಾಗಿದೆ ಏಕೆಂದರೆ ಅದು ಹೋಳಿ, ಮಾರ್ಚ್ 14 ರಂದು ಮರು-ಬಿಡುಗಡೆಯಾಗಲಿದೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟ ಅಕ್ಷಯ್ ಕುಮಾರ್ ಚಿತ್ರದ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

'ಈ ಹೋಳಿ ಹಬ್ಬ, ಮಾರ್ಚ್ 14 ರಂದು ನಮಸ್ತೆ ಲಂಡನ್ ಚಿತ್ರವು ದೊಡ್ಡ ಪರದೆ ಮೇಲೆ ರೀರಿಲೀಸ್ ಆಗಲಿದೆ ಎಂದು ಘೋಷಿಸಲು ರೋಮಾಂಚನಗೊಂಡಿದ್ದೇನೆ! ಈ ಮ್ಯಾಜಿಕ್ ಅನ್ನು ಬೆಳ್ಳೆ ಪದರೆ ಮೇಲೆ ನೋಡಲು ಸಿದ್ಧರಾಗಿ. ಮರೆಯಲಾಗದ ಹಾಡುಗಳು, ಸಾಂಪ್ರದಾಯಿಕ ಸಂಭಾಷಣೆಗಳು ಮತ್ತು ಕತ್ರೀನಾ ಕೈಫ್ ಅವರೊಂದಿಗಿನ ಟೈಮ್‌ಲೆಸ್ ರೊಮ್ಯಾನ್ಸ್ ಅನ್ನು ಮತ್ತೊಮ್ಮೆ ನೋಡಿ. ಚಿತ್ರಮಂದಿರಗಳಲ್ಲಿ ಮತ್ತೆ ಭೇಟಿಯಾಗೋಣ!' ಎಂದು ಬರೆದಿದ್ದಾರೆ.

'ನಮಸ್ತೆ ಲಂಡನ್' ಚಿತ್ರವು ವಿಪುಲ್ ಅಮೃತಲಾಲ್ ಶಾ ನಿರ್ದೇಶಿಸಿದ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಆಗಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕತ್ರೀನಾ ಕೈಫ್ ಜೊತೆಗೆ ರಿಷಿ ಕಪೂರ್, ನೀನಾ ವಾಡಿಯಾ, ಜಾವೇದ್ ಶೇಖ್, ಉಪೇನ್ ಪಟೇಲ್ ಮತ್ತು ಕ್ಲೈವ್ ಸ್ಟಾಂಡೆನ್ ನಟಿಸಿದ್ದಾರೆ. ಚಿತ್ರವು ಮೂಲತಃ ಅಕ್ಷಯ್ ಸ್ನೇಹಿತನ ನಿಜ ಜೀವನದ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ರಿತೇಶ್ ದೇಶಮುಖ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಆಗಿದ್ದು, ವಿಶ್ವದಾದ್ಯಂತ 71.40 ಕೋಟಿ ರೂ. ಗಳಿಕೆ ಕಂಡಿದೆ. 2007 ರ ಒಂಬತ್ತನೇ ಅತಿ ಹೆಚ್ಚು ಗಳಿಕೆಯ ಹಿಂದಿ ಚಲನಚಿತ್ರವಾಯಿತು.

ಅಕ್ಷಯ್ ಕುಮಾರ್ ಇತ್ತೀಚೆಗೆ ಬಿಡುಗಡೆಯಾದ 'ಸ್ಕೈ ಫೋರ್ಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಜೊತೆಗೆ ವೀರ್ ಪಹಾರಿಯಾ ನಟಿಸಿದ್ದಾರೆ. ಇದನ್ನು ಅಭಿಷೇಕ್ ಅನಿಲ್ ಕಪೂರ್ ಮತ್ತು ಸಂದೀಪ್ ಕೆವ್ಲಾನಿ ನಿರ್ದೇಶಿಸಿದ್ದಾರೆ.

ಶ್ರೀರಾಮ್ ರಾಘವನ್ ನಿರ್ದೇಶನದ 2024 ರ ಮಿಸ್ಟರಿ ಥ್ರಿಲ್ಲರ್ 'ಮೆರ್ರಿ ಕ್ರಿಸ್ಮಸ್' ನಲ್ಲಿ ಕತ್ರೀನಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಹಿಂದಿ-ತಮಿಳು ದ್ವಿಭಾಷಾ ಚಿತ್ರದಲ್ಲಿ ವಿಜಯ್ ಸೇತುಪತಿ, ಅಶ್ವಿನಿ ಕಲ್ಸೇಕರ್, ಲ್ಯೂಕ್ ಕೆನ್ನಿ ಮತ್ತು ಪಾರಿ ಮಹೇಶ್ವರಿ ಶರ್ಮಾ ನಟಿಸಿದ್ದಾರೆ. ಚಿತ್ರದ ಮೂಲ ಕಥಾವಸ್ತುವು ಫ್ರೆಡ್ರಿಕ್ ಡಾರ್ಡ್ ಅವರ ಫ್ರೆಂಚ್ ಕಾದಂಬರಿ ಲೆ ಮಾಂಟೆ-ಚಾರ್ಜ್ ಅನ್ನು ಆಧರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT