ಚಿರಾಗ್ ಪಾಸ್ವಾನ್ ಜೊತೆ ಕಂಗನಾ ರಣಾವತ್ 
ಬಾಲಿವುಡ್

ಚಿರಾಗ್ ಪಾಸ್ವಾನ್ ಜೊತೆ ರೊಮ್ಯಾನ್ಸ್ ವದಂತಿ; 'ಹಾಗಿದ್ದರೆ ಇಷ್ಟೊತ್ತಿಗೆ ಮಕ್ಕಳಾಗಿರುತ್ತಿದ್ದವು' ಎಂದ ಕಂಗನಾ!

ಕಂಗನಾ ಮತ್ತು ಚಿರಾಗ್ ಪಾಸ್ವಾನ್ ಮೊದಲ ಬಾರಿಗೆ 2011ರಲ್ಲಿ ತನ್ವೀರ್ ಖಾನ್ ನಿರ್ದೇಶನದ 'ಮಿಲೇ ನಾ ಮಿಲೇ ಹಮ್'ನಲ್ಲಿ ಒಟ್ಟಿಗೆ ಕೆಲಸ ಮಾಡಿದರು.

ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ಅವರು ತಮ್ಮ ಸಹ ರಾಜಕಾರಣಿ ಚಿರಾಗ್ ಪಾಸ್ವಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡ ನಂತರ ವ್ಯಾಪಕವಾಗಿ ಹರಡಿತು. ಅನೇಕ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ವ್ಯಕ್ತಪಡಿಸಿದ್ದರು. ಆದಾಗ್ಯೂ, ಕಂಗನಾ ಇದೀಗ ಇದಕ್ಕೆ ನೇರವಾಗಿ ಉತ್ತರ ನೀಡಿ ತಮ್ಮ ಸುತ್ತಲೂ ಎದ್ದಿದ್ದ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.

ಸುದ್ದಿಸಂಸ್ಥೆ ANIಗೆ ನೀಡಿದ ಸಂದರ್ಶನದಲ್ಲಿ, ಚಿರಾಗ್ ಪಾಸ್ವಾನ್ ಜೊತೆಗಿನ ತಮ್ಮ ಯಾವುದೇ ಸಂಬಂಧದ ಕುರಿತು ವದಂತಿಗಳನ್ನು ತಳ್ಳಿಹಾಕಿದರು.

'ಇಲ್ಲ, ಇಲ್ಲ, ಚಿರಾಗ್ ಒಬ್ಬ ಸ್ನೇಹಿತ. ನಾನು ಅವರನ್ನು ನೋಡಿದಾಗ, ನನಗೆ ಒಬ್ಬ ಸ್ನೇಹಿತನ ನೆನಪಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮ ನಡುವೆ ಯಾವುದೇ ಪ್ರಣಯ ನಡೆಯುತ್ತಿಲ್ಲ. ನಮಗೆ ಒಬ್ಬರಿಗೊಬ್ಬರಿಗೆ ತಿಳಿದಿರುವಂತೆ ನಾವಿಬ್ಬರು ಸ್ನೇಹಿತರು... ಚಿರಾಗ್ 10 ವರ್ಷಗಳ ಹಿಂದೆ ನನ್ನೊಂದಿಗೆ ಚಿತ್ರವನ್ನು ಮಾಡಿದ್ದರು. ನಮ್ಮಿಬ್ಬರ ನಡುವೆ ಪ್ರಣಯ ಇದ್ದರೆ, ಇಷ್ಟೊತ್ತಿಗೆ ನಮಗೆ ಮಕ್ಕಳಾಗಿರುತ್ತಿದ್ದವು' ಎಂದು ಅವರು ಹೇಳಿದರು.

'ನಾನು ಪ್ರಣಯವನ್ನು ಹೊಂದಲು ಬಯಸಿದರೆ, ಅದು ಆಗುತ್ತಿತ್ತು. ಆದರೆ, ಅದು ಆಗಿಲ್ಲ. ನಮ್ಮಿಬ್ಬರ ನಡುವೆ ಕೇವಲ ಸ್ನೇಹಪರ ವಾತಾವರಣ ಇದೆ. ನಿಮ್ಮಂತೆಯೇ ಇರುವ ವ್ಯಕ್ತಿಯಿಂದ ನೀವು ಸ್ನೇಹವನ್ನು ಪಡೆಯುತ್ತೀರಿ. ಅವರು ಒಂದು ರೀತಿಯಲ್ಲಿ ಚಲನಚಿತ್ರೋದ್ಯಮದಿಂದ ಬಂದವರು. ಆದ್ದರಿಂದ ನಾನು ಅವರೊಂದಿಗೆ ಸ್ನೇಹದಿಂದ ಇದ್ದೇನೆ' ಎಂದು ಕಂಗನಾ ಹೇಳಿದರು.

ಕಂಗನಾ ಮತ್ತು ಚಿರಾಗ್ ಪಾಸ್ವಾನ್ ಮೊದಲ ಬಾರಿಗೆ 2011ರಲ್ಲಿ ತನ್ವೀರ್ ಖಾನ್ ನಿರ್ದೇಶನದ 'ಮಿಲೇ ನಾ ಮಿಲೇ ಹಮ್'ನಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಚಿತ್ರವು ಚಿರಾಗ್ ಅವರು ನಟನಾಗಿ ಕಾಣಿಸಿಕೊಂಡ ಚೊಚ್ಚಲ ಚಿತ್ರವಾಗಿದ್ದು, ಕಂಗನಾ ನಾಯಕಿಯಾಗಿ ನಟಿಸಿದ್ದಾರೆ.

ಈ ಇಬ್ಬರೂ ಇದೀಗ ರಾಜಕೀಯಕ್ಕೆ ಕಾಲಿಟ್ಟಿದ್ದರೂ, ಅವರ ಸಿನಿಮೀಯ ಭೂತಕಾಲದಿಂದಾಗಿ ಅವರು ಸಾಂದರ್ಭಿಕವಾಗಿ ಒಟ್ಟಿಗೆ ಕಾಣಿಸಿಕೊಂಡಾಗ ಅದು ಗಮನ ಸೆಳೆಯುತ್ತಲೇ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

Gen-Z ಗಳಿಗೆ ʻಜನರೇಷನ್‌ ಗಟರ್‌ʼಎಂದ ಕಂಗನಾ ರಣಾವತ್; ಅವರನ್ನು ಬಿಜೆಪಿಯೇ ಗಂಭೀರವಾಗಿ ಪರಿಗಣಿಸಿಲ್ಲ, ಸಿಜೆಪಿ ತಿರುಗೇಟು! Video

ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!

NEET ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ಮುಂದು!