ವಾಕಿಂಗ್ ವಿತ್ ವೂಲ್ಫ್ಸ್ ಸಾಕ್ಷ್ಯಚಿತ್ರ, ಕೃಪಾಕರ್ - ಸೇನಾನಿ 
ಸಿನಿಮಾ ಸುದ್ದಿ

ತೋಳ ಬರ್ತಿದೆ ತೋಳ

ತೋಳ ಬಂತು ತೋಳ ಕತೆ ಎಲ್ಲರಿಗೂ...

ಬೆಂಗಳೂರು: ತೋಳ ಬಂತು ತೋಳ ಕತೆ ಎಲ್ಲರಿಗೂ ಗೊತ್ತೇ ಇದೆ. ಊಟ ಮಾಡಲು ಹಠ ಮಾಡುವ ಮಕ್ಕಳನ್ನ ಈಗಲೂ ತೋಳನ ಹೆಸರಲ್ಲಿ ಹಳ್ಳಿಗಳಲ್ಲಿ ಅಮ್ಮಂದಿರು ಹೆದರಿಸುವ ಪದ್ಧತಿ ಇದೆ. ತೋಳ ಅಂದರೆ ಭಯ... ತೋಳ ಅಂದರೆ ಅಪಶಕುನ... ತೋಳ ಅಂದರೆ ಅನಿಷ್ಟ ಎನ್ನುವ ಕಲ್ಪನೆಯನ್ನು ದೂರು ಮಾಡುವ ಕಾಲ ಈಗ ಬಂದಿದೆ. ಈಗ ನಿಜವಾಗಿಯೂ ತೋಳ ಬಂದಿದೆ ತೋಳ.

ವಿಶ್ವವಿಖ್ಯಾತ ವನ್ಯಜೀವಿ ಸಿನಿಮಾ ನಿರ್ಮಾಪಕ ಜೋಡಿ, ಮೈಸೂರಿನ ಕೃಪಾಕರ್-ಸೇನಾನಿ ಸತತ 3 ವರ್ಷ ಬೆವರು ಹರಿಸಿ ಈಗ ತೋಳಗಳ ಬಗ್ಗೆ ಅದ್ಭುತ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಜಗತ್ತಿನಲ್ಲೇ ಅತಿ ವಿರಳ ಹಾಗೂ ನಾಜೂಕು ಪ್ರಾಣಿ 'ಸೀಳು ನಾಯಿ'ಗಳ ಬಗ್ಗೆ ಕೃಪಾಕರ್-ಸೇನಾನಿ ನಿರ್ಮಿಸಿದ್ದ ಡಾಕ್ಯುಮೆಂಟರಿಗಳು ಗ್ರೀನ್ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದ್ದವು. ಸೀಳು ನಾಯಿಗಳ ನಂತರ ಅದೇ ರೀತಿ ನಾಜೂಕು ಸ್ವಭಾವದ ತೋಳಗಳ ಬಗ್ಗೆ ಈ ಜೋಡಿ ಅತೀವ ಕುತೂಹಲ ಹೊಂದಿತ್ತು. ಈ ಕುತೂಹಲ ಈಗ ತಣಿದು ಡಾಕ್ಯುಮೆಂಟರಿ ರೂಪ ತಳೆದಿದೆ.

ಉತ್ತರ ಕರ್ನಾಟಕದ ಬಯಲು ಪ್ರದೇಶಗಳು ಒಂದಾನೊಂದು ಕಾಲದಲ್ಲಿ ತೋಳಗಳು ಸಾಮ್ರಾಜ್ಯವಾಗಿದ್ದವು. ಆದರೆ, ಕೃಷಿ ಪ್ರದೇಶಗಳ ವಿಸ್ತರಣೆ, ಅಣೆಕಟ್ಟು ನಿರ್ಮಾಣ, ಅತಿಯಾದ ಕಲ್ಲು ಗಣಿಗಾರಿಕೆ ಹಾಗೂ ಕಡಿಮೆಯಾಗುತ್ತಿರುವ ಕುರಿಗಾಹಿ ಪದ್ಧತಿಯಿಂದಾಗಿ ತೋಳಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿತ್ತು. ಇದಕ್ಕೆ ಕಾರಣ ಹುಡುಕುವ ಪ್ರಯತ್ನವೇ 'ವಾಕಿಂಗ್ ವಿತ್ ವೂಲ್ಫ್ಸ್' ಸಾಕ್ಷ್ಯಚಿತ್ರ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಬಯಲು ಪ್ರದೇಶಗಳಲ್ಲಿ ಇಡೀ ಸಾಕ್ಷ್ಯ ಚಿತ್ರದ ಶೂಟಿಂಗ್ ಮಾಡಲಾಗಿದೆ.

ರಾಯಚೂರು ಮತ್ತು ಕೊಪ್ಪಳದಲ್ಲಿನ 3 ತೋಳಗಳ ಗುಂಪಿನ ಮೇಲೆ ಇಡೀ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ತೋಳಗಳ ಬಗ್ಗೆ ಅತೀವ ಕುತೂಹಲ ಹೊಂದಿರುವ ಯುವಕನೊಬ್ಬ ಅವುಗಳ ಅಧ್ಯಯನ ಮಾಡುತ್ತಾ ಹೋದಂತೆ ತೆರೆದುಕೊಳ್ಳುವ ಅಪರೂಪದ ಮಾಹಿತಿಗಳು ಇದರಲ್ಲಿ ದಾಖಲಾಗಿದೆ. 1 ಗಂಟೆ ಅವಧಿಯ ಈ ಡಾಕ್ಯುಮೆಂಟರಿಯಲ್ಲಿ ತೋಟಗಳ ಬಗ್ಗೆ ಈ ಹಿಂದೆ ಎಲ್ಲಿಯೂ ಕಂಡುಬಂದಿರದಂಥ ವಿಸ್ಮಯಕಾರಿ ಮಾಹಿತಿ ಸೆರೆಹಿಡಿಯಲಾಗಿದೆ. ಮಾಂಸಹಾರಿಯಾದ ಈ ಪ್ರಾಣಿ ಬಾಳೆಹಣ್ಣು, ಜೋಳ ಹಾಗೂ ಎಲಚಿ ಹಣ್ಣುಗಳನ್ನು ತಿನ್ನುವ ದೃಶ್ಯಗಳನ್ನು ಶೂಟ್ ಮಾಡಲಾಗಿದೆ.

ಕರ್ನಾಟಕವೇ ಇಡೀ ಜಗತ್ತಿನ ತೋಳಗಳ ತವರು. ಇಡೀ ವಿಶ್ವದ ತೋಳಗಳ ವಂಶವಾಹಿಯನ್ನು ಹೋಲಿಸಿ ನೋಡಿದಲ್ಲಿ ಕರ್ನಾಟಕದ ತೋಳಗಳ ವಂಶವಾಹಿ ಅವುಗಳಿಗೆ ಹೋಲಿಕೆಯಾಗುವುದರಿಂದ ಇಲ್ಲಿಂದಲೇ ತೋಳಗಳು ಜಗತ್ತಿನ ನಾನಾ ಭಾಗಗಳಿಗೆ ವಲಸೆ ಹೋಗಿರುವುದು ಖಚಿತವಾಗುತ್ತವೆ. ಆದರೆ, ಆ ತೋಳಗಳು ಈಗ ಅವುಗಳ ಸ್ವಂತ ನೆಲದಲ್ಲೇ ಅವನತಿಯತ್ತ ಸಾಗುತ್ತಿವೆ ಎನ್ನುತ್ತಾರೆ ಕೃಪಾಕರ್.


-ವಿನೋದಕುಮಾರ್ ಬಿ ನಾಯಕ್



Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT