ವೀರ್ ಸಮರ್ಥ್, ಪೂಜಾ ಗಾಂಧಿ, ಚಕ್ರವರ್ತಿ ಚಂದ್ರಚುಡ್ ಮತ್ತು ಜೆಡಿ ಚಕ್ರವರ್ತಿ 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಗೆ ಬಂದ ತೆಲುಗು ನಟ ಜೆಡಿ ಚಕ್ರವರ್ತಿಗೆ ಪಿಸ್ತೂಲ್ ಉಡುಗೊರೆ

'ರಾವಣಿ' ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರುತ್ತಿರೋ ಮಹಿಳಾ ಪ್ರಧಾನ ಥ್ರಿಲಿಂಗ್ ಕಹಾನಿ. ಈ ಚಿತ್ರದಲ್ಲಿ ಟಾಲಿವುಡ್...

'ರಾವಣಿ' ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರುತ್ತಿರೋ ಮಹಿಳಾ ಪ್ರಧಾನ ಥ್ರಿಲಿಂಗ್ ಕಹಾನಿ. ಈ ಚಿತ್ರದಲ್ಲಿ ಟಾಲಿವುಡ್ ಹಾಗೂ ಬಾಲಿವುಡ್ ನ ಖ್ಯಾತ ನಟ ಜೆ.ಡಿ ಚಕ್ರವರ್ತಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪೂಜಾ ಗಾಂಧಿ ನಿರ್ಮಾಣ ಹಾಗೂ ನಟನೆಯಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಚಂದ್ರಚೂಡ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಎರಡನೇ ಸಿನಿಮಾ ಇದಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ಪೆಷಲ್ ಥ್ರಿಲಿಂಗ್ ಸಿನಿಮಾವಾಗಿರುವ ರಾವಣಿ ಚಿತ್ರದ ಫಸ್ಟ್ ಲುಕ್ ಪೋಸ್ಟ್ರರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಾವಣಿ ಚಿತ್ರದಲ್ಲಿ ಚಕ್ರವರ್ತಿ ಮೇಜರ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೆಡಿ ಚಕ್ರವರ್ತಿ 90 ದಶಕದಲ್ಲಿ ಸ್ಟಾರ್ ಆಗಿ ಮಿಂಚಿದ ನಟ. ಕುರುಚಲು ಗಡ್ಡ ಮತ್ತು ಪಿಸ್ತೂಲ್ ನಿಂದ ಫೇಮಸ್ ಆದ ನಟ.

ಚಕ್ರವರ್ತಿಯ ಟ್ರೇಡ್ ಮಾರ್ಕ್ ಪಿಸ್ತೂಲ್ ಮತ್ತು ಕುರುಚಲು ಗಡ್ಡ. ಈ ಲುಕ್ ನಿಂದಲೇ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಸಕತ್ ಜನಪ್ರಿಯರಾಗಿದ್ದರು. ಸೈಲೆಂಟ್ ವೈಯಲೆಂಟ್ ಥ್ರಿಲರ್ ಗಳಲ್ಲಿ ಟಿಪಿಕಲ್ ಪಾತ್ರ ಮಾಡಿರೋ ಜೆಡಿ ಚಕ್ರವರ್ತಿ ಇದೀಗ ರಾವಣಿ ಚಿತ್ರದಲ್ಲೂ ಇಂತಹದ್ದೊಂದು ವಿಭಿನ್ನ ಪಾತ್ರ ಮಾಡುತ್ತಾದ್ದಾರಂತೆ. ಅಲ್ಲದೇ ರಾವಣಿ ಚಿತ್ರದ ಥೀಮ್ ಕೂಡ ಪಿಸ್ತೂಲ್ ಆಗಿದ್ದು, ಈ ಹಿನ್ನಲೆಯಲ್ಲಿ ಕನ್ನಡಕ್ಕೆ ಬಂದ ಜೆಡಿ ಚಕ್ರವರ್ತಿಗೆ ಪಿಸ್ತೂಲ್ ಉಡುಗೊರೆಯನ್ನಾಗಿ ನೀಡಲಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡ ಜೆಡಿ ಚಕ್ರವರ್ತಿ ಅವರಿಗೆ ಪಿಸ್ತೂಲ್ ಉಡುಗೊರೆಯನ್ನಾಗಿ ನೀಡಿದೆ. ಸೆಪ್ಟೆಂಬರ್ ನಲ್ಲಿ ರಾವಣಿ ಚಿತ್ರ ಸೆಟ್ಟೇರುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT