ನಟ ರವಿಶಂಕರ್ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಪುನೀತ್ ಮತ್ತು ರವಿಶಂಕರ್ ಜಿದ್ದಾಜಿದ್ದಿ

ಈ ಸಿನೆಮಾದ ಘೋಷಣೆಯಾದಾಗಲಿಂದಲು ಸಿನೆರಸಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಕಾರಣ ಒಂದು ಇದು ಪುನೀತ್ ರಾಜಕುಮಾರ್ ಅವರ ೨೫ ನೆ ಚಿತ್ರ.

ಬೆಂಗಳೂರು: ಈ ಸಿನೆಮಾದ ಘೋಷಣೆಯಾದಾಗಲಿಂದಲು ಸಿನೆರಸಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಕಾರಣ ಒಂದು ಇದು ಪುನೀತ್ ರಾಜಕುಮಾರ್ ಅವರ ೨೫ ನೆ ಚಿತ್ರ. ಮತ್ತು ಇದರ ನಿರ್ದೇಶಕ ಸೂರಿ. ಸಿನೆಮಾದ ಹೆಸರು 'ದೊಡ್ಮನೆ ಹುಡುಗ'. ಚಿತ್ರರಸಿಕರು ಸಿನೆಮಾದ ಬಿಡುಗಡೆಯ ದಿನಾಂಕ ತಿಳಿಯಲು ಉತ್ಸುಕರಾಗಿರುವುದಂತೂ ನಿಜ.

ಪ್ರೇಕ್ಷಕರಿಗೆ ಸಿಹಿಸುದ್ದಿಯೆಂದರೆ ಚಿತ್ರೀಕರಣ ಮುಗಿಯಲು ಇನ್ನು ೮ ದಿನಗಳಷ್ಟೇ ಬಾಕಿ ಉಳಿದಿರುವುದು. ಇದರ ನಂತರ ಕೆಲವು ಹಾಡುಗಳ ಚಿತ್ರೀಕರಣ ಇರುತ್ತದಂತೆ. "ನಾನು ಸದ್ಯಕ್ಕೆ ರವಿಶಂಕರ್ ಅವರ ಭಾಗವನ್ನು ಚಿತ್ರೀಕರಿಸಲು ಮೈಸೂರಿನಲ್ಲಿದ್ದೇನೆ. ಇದು ಒಂದು ವಾರ ನಡೆಯಲಿದ್ದು ನಂತರ ಹಾಡುಗಳ ಚಿತ್ರೀಕರಣ ಪ್ರಾರಂಭವಾಗುತ್ತದೆ" ಎನ್ನುತ್ತಾರೆ ಸೂರಿ.

ಇದೇ ಮೊದಲ ಬಾರಿಗೆ ಪುನೀತ್ ಎದುರು ಖಳನಟನಾಗಿ ರವಿಶಂಕರ್ ನಟಿಸುತ್ತಿರುವುದು.

ಹಾಗೆಯೇ ಇದೇ ಮೊದಲ ಬಾರಿಗೆ 'ದೊಡ್ಮನೆ ಹುಡುಗ'ನ ಮೂಲಕ ಅಂಬರೀಶ್ ಮತ್ತು ಪುನೀತ್ ಕೂಡ ಜೊತೆಗೆ ನಟಿಸುತ್ತಿದ್ದಾರೆ. ರಾಧಿಕಾ ಪಂಡಿತ್ ನಾಯನಟಿಯಾಗಿದ್ದು, ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್ ಮತ್ತು ಸುಮಲತಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕೃಷ್ಣ, ಸಂತೋಶ್, ಚಿಕ್ಕಣ್ಣ ಸಹನಟರು. ಸತ್ಯ ಹೆಗಡೆ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಜೊತೆಜೊತೆಗೆ ಪುನೀತ್ 'ಚಕ್ರವ್ಯೂಹ'ದ ಚಿತ್ರೀಕರಣ ಕೂಡ ಮುಗಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನ್ನ ಸ್ನೇಹಿತ ಪುಟಿನ್‌ರನ್ನು ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ: ಪ್ರಧಾನಿ ಮೋದಿ

ಸ್ನೇಹ, ನಂಬಿಕೆ: ಮೋದಿ ಜೊತೆ ಸಾಮಾನ್ಯ Fortuner ಕಾರಿನಲ್ಲಿ Putin ಪ್ರಯಾಣ! Video

Video: ದೆಹಲಿಗೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್; ಖುದ್ದು ಪಾಲಂ ಏರ್​​ಪೋರ್ಟ್​​ಗೆ ತೆರಳಿ ಸ್ವಾಗತಿಸಿದ ಪ್ರಧಾನಿ ಮೋದಿ

'ಭರವಸೆ ಈಡೇರಿಸಲು ಸಾಧ್ಯವಾಗಲಿಲ್ಲ.. ಸಮಸ್ಯೆ ಬಗೆಹರಿಸಲು ಪ್ರಯತ್ನ': IndiGo ಸಿಇಒ ವಿಷಾದ

ದ್ವೇಷ ಭಾಷಣ, ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ಸೇರಿ 8 ಮಸೂದೆಗಳಿಗೆ ಸಚಿವ ಸಂಪುಟ ಅನುಮೋದನೆ

SCROLL FOR NEXT