ನಟ ರವಿಶಂಕರ್ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಪುನೀತ್ ಮತ್ತು ರವಿಶಂಕರ್ ಜಿದ್ದಾಜಿದ್ದಿ

ಈ ಸಿನೆಮಾದ ಘೋಷಣೆಯಾದಾಗಲಿಂದಲು ಸಿನೆರಸಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಕಾರಣ ಒಂದು ಇದು ಪುನೀತ್ ರಾಜಕುಮಾರ್ ಅವರ ೨೫ ನೆ ಚಿತ್ರ.

ಬೆಂಗಳೂರು: ಈ ಸಿನೆಮಾದ ಘೋಷಣೆಯಾದಾಗಲಿಂದಲು ಸಿನೆರಸಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಕಾರಣ ಒಂದು ಇದು ಪುನೀತ್ ರಾಜಕುಮಾರ್ ಅವರ ೨೫ ನೆ ಚಿತ್ರ. ಮತ್ತು ಇದರ ನಿರ್ದೇಶಕ ಸೂರಿ. ಸಿನೆಮಾದ ಹೆಸರು 'ದೊಡ್ಮನೆ ಹುಡುಗ'. ಚಿತ್ರರಸಿಕರು ಸಿನೆಮಾದ ಬಿಡುಗಡೆಯ ದಿನಾಂಕ ತಿಳಿಯಲು ಉತ್ಸುಕರಾಗಿರುವುದಂತೂ ನಿಜ.

ಪ್ರೇಕ್ಷಕರಿಗೆ ಸಿಹಿಸುದ್ದಿಯೆಂದರೆ ಚಿತ್ರೀಕರಣ ಮುಗಿಯಲು ಇನ್ನು ೮ ದಿನಗಳಷ್ಟೇ ಬಾಕಿ ಉಳಿದಿರುವುದು. ಇದರ ನಂತರ ಕೆಲವು ಹಾಡುಗಳ ಚಿತ್ರೀಕರಣ ಇರುತ್ತದಂತೆ. "ನಾನು ಸದ್ಯಕ್ಕೆ ರವಿಶಂಕರ್ ಅವರ ಭಾಗವನ್ನು ಚಿತ್ರೀಕರಿಸಲು ಮೈಸೂರಿನಲ್ಲಿದ್ದೇನೆ. ಇದು ಒಂದು ವಾರ ನಡೆಯಲಿದ್ದು ನಂತರ ಹಾಡುಗಳ ಚಿತ್ರೀಕರಣ ಪ್ರಾರಂಭವಾಗುತ್ತದೆ" ಎನ್ನುತ್ತಾರೆ ಸೂರಿ.

ಇದೇ ಮೊದಲ ಬಾರಿಗೆ ಪುನೀತ್ ಎದುರು ಖಳನಟನಾಗಿ ರವಿಶಂಕರ್ ನಟಿಸುತ್ತಿರುವುದು.

ಹಾಗೆಯೇ ಇದೇ ಮೊದಲ ಬಾರಿಗೆ 'ದೊಡ್ಮನೆ ಹುಡುಗ'ನ ಮೂಲಕ ಅಂಬರೀಶ್ ಮತ್ತು ಪುನೀತ್ ಕೂಡ ಜೊತೆಗೆ ನಟಿಸುತ್ತಿದ್ದಾರೆ. ರಾಧಿಕಾ ಪಂಡಿತ್ ನಾಯನಟಿಯಾಗಿದ್ದು, ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್ ಮತ್ತು ಸುಮಲತಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕೃಷ್ಣ, ಸಂತೋಶ್, ಚಿಕ್ಕಣ್ಣ ಸಹನಟರು. ಸತ್ಯ ಹೆಗಡೆ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಜೊತೆಜೊತೆಗೆ ಪುನೀತ್ 'ಚಕ್ರವ್ಯೂಹ'ದ ಚಿತ್ರೀಕರಣ ಕೂಡ ಮುಗಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT