'ಮಾಸ್ಟರ್ ಪೀಸ್'ನಲ್ಲಿ ಯಶ್ 
ಸಿನಿಮಾ ಸುದ್ದಿ

'ಮಾಸ್ಟರ್ ಪೀಸ್'ಗೆ ದಿನಗಣನೆ

ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ಗೆ ಸೆನ್ಸಾರ್ ಮಂಡಲಿಯಿಂದ 'ಯು/ಎ' ಪ್ರಮಾಣಪತ್ರ ದೊರಕಿರುವುದಕ್ಕೆ ಚೊಚ್ಚಲ ನಿರ್ದೇಶಕ ಮಂಜು

ಬೆಂಗಳೂರು: ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ಗೆ ಸೆನ್ಸಾರ್ ಮಂಡಲಿಯಿಂದ 'ಯು/ಎ' ಪ್ರಮಾಣಪತ್ರ ದೊರಕಿರುವುದಕ್ಕೆ ಚೊಚ್ಚಲ ನಿರ್ದೇಶಕ ಮಂಜು ಮಾಂಡವ್ಯ ಅವರಿಗೆ ಸಂತಸವಾಗಿದೆಯಂತೆ. "ಅವರು ಒಂದೆರಡು ಸರಳ ಕಟ್ ಗಳನ್ನು ಸೂಚಿಸಿದರು ಹಾಗೂ ಒಂದೆರಡು ಕಡೆ ಬ್ಲರ್ ಮಾಡಲು ಹೇಳಿದರು. ನಾವು ಯಾವುದೇ ಸಂಭಾಷಣೆಗೆ ಕತ್ತರಿ ಹಾಕಿಲ್ಲ ಎಂಬುದು ಖುಷಿಯ ಸಂಗತಿ ಮತ್ತು ಸಿನೆಮಾ ನೋಡಿದ ಸದಸ್ಯರು ಒಳ್ಳೆಯ ವಿಮರ್ಶೆ ನೀಡಿದರು" ಎನ್ನುತ್ತಾರೆ.

ಚಿತ್ರೀಕರಣ ಪ್ರಾರಂಭವಾದಾಗಲಿಂದಲು ಹೈಪ್ ಮಾಡುತ್ತಾ ಬಂದಿದೆ ಈ ಸಿನೆಮಾ. "ಈ ಸಿನೆಮಾ ಎಷ್ಟು ಸುದ್ದಿ ಮಾಡಿತ್ತೆಂದರೆ ವಿತರಕರು ಅತಿ ಹೆಚ್ಚಿನ ಬೆಲೆಗೆ ಸಿನೆಮಾ ಹಕ್ಕುಗಳನ್ನು ಖರೀದಿಸಲು ಸಿದ್ಧರಿದ್ದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿತರಣೆಗೆ ಬೇಡಿಕೆ ಬಂದಿದ್ದು, ಅದರ ಒಟ್ಟು ಮೊತ್ತ ೩೪ ಕೋಟಿ ಆಗುತ್ತದೆ. ಅದು ನಿರ್ಮಾಪಕರಿಗೆ ಬಿಟ್ಟ ವಿಷಯ. ಟಿ ವಿ ಹಕ್ಕುಗಳಿಗೆ ಖಾಸಗಿ ವಾಹಿನಿಯೊಂದು ೬ ಕೋಟಿಗೆ ಹಕ್ಕುಗಳನ್ನು ಖರೀದಿಸಲು ಮುಂದಾಗಿದೆ. ಇದು ಕೂಡ ಇನ್ನೂ ನಿರ್ಧಾರವಾಗಬೇಕಿದೆ. ಆಡಿಯೊ ಹಕ್ಕುಗಳನ್ನು ೭೫ ಲಕ್ಷಕ್ಕೆ ಮಾರಾಟ ಮಾಡಲಾಗಿದೆ" ಎನ್ನುತ್ತಾರೆ ಮಂಜು. ಖಳನಾಯಕನೂ ಒಳಗೊಂಡಂತೆ ಹಲವಾರು ಶೇಡ್ ಗಳಲ್ಲಿ ಯಶ್ ಕಾಣಿಸಿಕೊಂಡಿರುವುದು ಸಿನೆಮಾ ಇಷ್ಟೊಂದು ಸುದ್ದಿ ಮಾಡಲು ಕಾರಣವಾಗಿದೆಯಂತೆ.

ಕಳೆದ ವರ್ಷ ಡಿಸೆಂಬರ್ ಕ್ರಿಸ್ಮಸ್ ಸಮಯಕ್ಕೆ ಬಿಡುಗಡೆಯಾದ ಯಶ್ ಅವರ 'ಮಿ ಅಂಡ್ ಮಿಸೆಸ್ ರಾಮಾಚಾರಿ' ಭಾರಿ ಯಶಸ್ಸು ಕಂಡು ಶತದಿನೋತ್ಸವ ಪೂರೈಸಿತ್ತು. ಇದನ್ನು ಮರುಕಳಿಸುವ ನಿಟ್ಟಿನಲ್ಲಿ 'ಮಾಸ್ಟರ್ ಪೀಸ್' ಕೂಡ ಡಿಸೆಂಬರ್ ೨೪ ರಂದು ಬಿಡುಗಡೆಯಾಗಲಿದೆ. ಜಯಣ್ಣ ವಿತರಣಾ ಹಕ್ಕುಗಳನ್ನು ಖರೀದಿಸಿದ್ದು, ನಿರ್ಮಾಪಕರು ಕರ್ನಾಟಕ ಮತ್ತು ಇತರೆ ರಾಜ್ಯಗಳನ್ನು ಸೇರಿ ೨೨೫ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಜನವರಿ ಅಂತ್ಯಕ್ಕೆ ವಿಶ್ವದಾದ್ಯಂತ ಬಿಡುಗಡೆ ಮಾಡುವ ಯೋಜನೆಗಳು ಕೂಡ ಇವೆ.

ಶಾನ್ವಿ ಶ್ರೀವಾಸ್ತವ್ ನಾಯಕ ನಟಿ. ಸುಹಾಸಿನಿ, ಅಚ್ಯುತ್ ಕುಮಾರ್ ಸಹ ನಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT