'ಮಾಸ್ಟರ್ ಪೀಸ್'ನಲ್ಲಿ ಯಶ್ 
ಸಿನಿಮಾ ಸುದ್ದಿ

'ಮಾಸ್ಟರ್ ಪೀಸ್'ಗೆ ದಿನಗಣನೆ

ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ಗೆ ಸೆನ್ಸಾರ್ ಮಂಡಲಿಯಿಂದ 'ಯು/ಎ' ಪ್ರಮಾಣಪತ್ರ ದೊರಕಿರುವುದಕ್ಕೆ ಚೊಚ್ಚಲ ನಿರ್ದೇಶಕ ಮಂಜು

ಬೆಂಗಳೂರು: ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ಗೆ ಸೆನ್ಸಾರ್ ಮಂಡಲಿಯಿಂದ 'ಯು/ಎ' ಪ್ರಮಾಣಪತ್ರ ದೊರಕಿರುವುದಕ್ಕೆ ಚೊಚ್ಚಲ ನಿರ್ದೇಶಕ ಮಂಜು ಮಾಂಡವ್ಯ ಅವರಿಗೆ ಸಂತಸವಾಗಿದೆಯಂತೆ. "ಅವರು ಒಂದೆರಡು ಸರಳ ಕಟ್ ಗಳನ್ನು ಸೂಚಿಸಿದರು ಹಾಗೂ ಒಂದೆರಡು ಕಡೆ ಬ್ಲರ್ ಮಾಡಲು ಹೇಳಿದರು. ನಾವು ಯಾವುದೇ ಸಂಭಾಷಣೆಗೆ ಕತ್ತರಿ ಹಾಕಿಲ್ಲ ಎಂಬುದು ಖುಷಿಯ ಸಂಗತಿ ಮತ್ತು ಸಿನೆಮಾ ನೋಡಿದ ಸದಸ್ಯರು ಒಳ್ಳೆಯ ವಿಮರ್ಶೆ ನೀಡಿದರು" ಎನ್ನುತ್ತಾರೆ.

ಚಿತ್ರೀಕರಣ ಪ್ರಾರಂಭವಾದಾಗಲಿಂದಲು ಹೈಪ್ ಮಾಡುತ್ತಾ ಬಂದಿದೆ ಈ ಸಿನೆಮಾ. "ಈ ಸಿನೆಮಾ ಎಷ್ಟು ಸುದ್ದಿ ಮಾಡಿತ್ತೆಂದರೆ ವಿತರಕರು ಅತಿ ಹೆಚ್ಚಿನ ಬೆಲೆಗೆ ಸಿನೆಮಾ ಹಕ್ಕುಗಳನ್ನು ಖರೀದಿಸಲು ಸಿದ್ಧರಿದ್ದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿತರಣೆಗೆ ಬೇಡಿಕೆ ಬಂದಿದ್ದು, ಅದರ ಒಟ್ಟು ಮೊತ್ತ ೩೪ ಕೋಟಿ ಆಗುತ್ತದೆ. ಅದು ನಿರ್ಮಾಪಕರಿಗೆ ಬಿಟ್ಟ ವಿಷಯ. ಟಿ ವಿ ಹಕ್ಕುಗಳಿಗೆ ಖಾಸಗಿ ವಾಹಿನಿಯೊಂದು ೬ ಕೋಟಿಗೆ ಹಕ್ಕುಗಳನ್ನು ಖರೀದಿಸಲು ಮುಂದಾಗಿದೆ. ಇದು ಕೂಡ ಇನ್ನೂ ನಿರ್ಧಾರವಾಗಬೇಕಿದೆ. ಆಡಿಯೊ ಹಕ್ಕುಗಳನ್ನು ೭೫ ಲಕ್ಷಕ್ಕೆ ಮಾರಾಟ ಮಾಡಲಾಗಿದೆ" ಎನ್ನುತ್ತಾರೆ ಮಂಜು. ಖಳನಾಯಕನೂ ಒಳಗೊಂಡಂತೆ ಹಲವಾರು ಶೇಡ್ ಗಳಲ್ಲಿ ಯಶ್ ಕಾಣಿಸಿಕೊಂಡಿರುವುದು ಸಿನೆಮಾ ಇಷ್ಟೊಂದು ಸುದ್ದಿ ಮಾಡಲು ಕಾರಣವಾಗಿದೆಯಂತೆ.

ಕಳೆದ ವರ್ಷ ಡಿಸೆಂಬರ್ ಕ್ರಿಸ್ಮಸ್ ಸಮಯಕ್ಕೆ ಬಿಡುಗಡೆಯಾದ ಯಶ್ ಅವರ 'ಮಿ ಅಂಡ್ ಮಿಸೆಸ್ ರಾಮಾಚಾರಿ' ಭಾರಿ ಯಶಸ್ಸು ಕಂಡು ಶತದಿನೋತ್ಸವ ಪೂರೈಸಿತ್ತು. ಇದನ್ನು ಮರುಕಳಿಸುವ ನಿಟ್ಟಿನಲ್ಲಿ 'ಮಾಸ್ಟರ್ ಪೀಸ್' ಕೂಡ ಡಿಸೆಂಬರ್ ೨೪ ರಂದು ಬಿಡುಗಡೆಯಾಗಲಿದೆ. ಜಯಣ್ಣ ವಿತರಣಾ ಹಕ್ಕುಗಳನ್ನು ಖರೀದಿಸಿದ್ದು, ನಿರ್ಮಾಪಕರು ಕರ್ನಾಟಕ ಮತ್ತು ಇತರೆ ರಾಜ್ಯಗಳನ್ನು ಸೇರಿ ೨೨೫ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಜನವರಿ ಅಂತ್ಯಕ್ಕೆ ವಿಶ್ವದಾದ್ಯಂತ ಬಿಡುಗಡೆ ಮಾಡುವ ಯೋಜನೆಗಳು ಕೂಡ ಇವೆ.

ಶಾನ್ವಿ ಶ್ರೀವಾಸ್ತವ್ ನಾಯಕ ನಟಿ. ಸುಹಾಸಿನಿ, ಅಚ್ಯುತ್ ಕುಮಾರ್ ಸಹ ನಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!

'ಮಹಿಳೆಯರು ಚಿನ್ನವಿದ್ದಂತೆ, ಪೆಟ್ಟಿಗೆಯೊಳಗಿಟ್ಟು ಜೋಪಾನ ಮಾಡಿ': ಮನೆಯಿಂದ ಹೊರಗೆ ಕಾಲಿಡಲು ಬಿಟ್ಟರೆ 'ಭಾರಿ ವಿನಾಶ' ಎಂದ ಕೇರಳದ ಧರ್ಮಗುರು!