'ಮಾಸ್ಟರ್ ಪೀಸ್'ನಲ್ಲಿ ಯಶ್ 
ಸಿನಿಮಾ ಸುದ್ದಿ

'ಮಾಸ್ಟರ್ ಪೀಸ್'ಗೆ ದಿನಗಣನೆ

ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ಗೆ ಸೆನ್ಸಾರ್ ಮಂಡಲಿಯಿಂದ 'ಯು/ಎ' ಪ್ರಮಾಣಪತ್ರ ದೊರಕಿರುವುದಕ್ಕೆ ಚೊಚ್ಚಲ ನಿರ್ದೇಶಕ ಮಂಜು

ಬೆಂಗಳೂರು: ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ಗೆ ಸೆನ್ಸಾರ್ ಮಂಡಲಿಯಿಂದ 'ಯು/ಎ' ಪ್ರಮಾಣಪತ್ರ ದೊರಕಿರುವುದಕ್ಕೆ ಚೊಚ್ಚಲ ನಿರ್ದೇಶಕ ಮಂಜು ಮಾಂಡವ್ಯ ಅವರಿಗೆ ಸಂತಸವಾಗಿದೆಯಂತೆ. "ಅವರು ಒಂದೆರಡು ಸರಳ ಕಟ್ ಗಳನ್ನು ಸೂಚಿಸಿದರು ಹಾಗೂ ಒಂದೆರಡು ಕಡೆ ಬ್ಲರ್ ಮಾಡಲು ಹೇಳಿದರು. ನಾವು ಯಾವುದೇ ಸಂಭಾಷಣೆಗೆ ಕತ್ತರಿ ಹಾಕಿಲ್ಲ ಎಂಬುದು ಖುಷಿಯ ಸಂಗತಿ ಮತ್ತು ಸಿನೆಮಾ ನೋಡಿದ ಸದಸ್ಯರು ಒಳ್ಳೆಯ ವಿಮರ್ಶೆ ನೀಡಿದರು" ಎನ್ನುತ್ತಾರೆ.

ಚಿತ್ರೀಕರಣ ಪ್ರಾರಂಭವಾದಾಗಲಿಂದಲು ಹೈಪ್ ಮಾಡುತ್ತಾ ಬಂದಿದೆ ಈ ಸಿನೆಮಾ. "ಈ ಸಿನೆಮಾ ಎಷ್ಟು ಸುದ್ದಿ ಮಾಡಿತ್ತೆಂದರೆ ವಿತರಕರು ಅತಿ ಹೆಚ್ಚಿನ ಬೆಲೆಗೆ ಸಿನೆಮಾ ಹಕ್ಕುಗಳನ್ನು ಖರೀದಿಸಲು ಸಿದ್ಧರಿದ್ದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿತರಣೆಗೆ ಬೇಡಿಕೆ ಬಂದಿದ್ದು, ಅದರ ಒಟ್ಟು ಮೊತ್ತ ೩೪ ಕೋಟಿ ಆಗುತ್ತದೆ. ಅದು ನಿರ್ಮಾಪಕರಿಗೆ ಬಿಟ್ಟ ವಿಷಯ. ಟಿ ವಿ ಹಕ್ಕುಗಳಿಗೆ ಖಾಸಗಿ ವಾಹಿನಿಯೊಂದು ೬ ಕೋಟಿಗೆ ಹಕ್ಕುಗಳನ್ನು ಖರೀದಿಸಲು ಮುಂದಾಗಿದೆ. ಇದು ಕೂಡ ಇನ್ನೂ ನಿರ್ಧಾರವಾಗಬೇಕಿದೆ. ಆಡಿಯೊ ಹಕ್ಕುಗಳನ್ನು ೭೫ ಲಕ್ಷಕ್ಕೆ ಮಾರಾಟ ಮಾಡಲಾಗಿದೆ" ಎನ್ನುತ್ತಾರೆ ಮಂಜು. ಖಳನಾಯಕನೂ ಒಳಗೊಂಡಂತೆ ಹಲವಾರು ಶೇಡ್ ಗಳಲ್ಲಿ ಯಶ್ ಕಾಣಿಸಿಕೊಂಡಿರುವುದು ಸಿನೆಮಾ ಇಷ್ಟೊಂದು ಸುದ್ದಿ ಮಾಡಲು ಕಾರಣವಾಗಿದೆಯಂತೆ.

ಕಳೆದ ವರ್ಷ ಡಿಸೆಂಬರ್ ಕ್ರಿಸ್ಮಸ್ ಸಮಯಕ್ಕೆ ಬಿಡುಗಡೆಯಾದ ಯಶ್ ಅವರ 'ಮಿ ಅಂಡ್ ಮಿಸೆಸ್ ರಾಮಾಚಾರಿ' ಭಾರಿ ಯಶಸ್ಸು ಕಂಡು ಶತದಿನೋತ್ಸವ ಪೂರೈಸಿತ್ತು. ಇದನ್ನು ಮರುಕಳಿಸುವ ನಿಟ್ಟಿನಲ್ಲಿ 'ಮಾಸ್ಟರ್ ಪೀಸ್' ಕೂಡ ಡಿಸೆಂಬರ್ ೨೪ ರಂದು ಬಿಡುಗಡೆಯಾಗಲಿದೆ. ಜಯಣ್ಣ ವಿತರಣಾ ಹಕ್ಕುಗಳನ್ನು ಖರೀದಿಸಿದ್ದು, ನಿರ್ಮಾಪಕರು ಕರ್ನಾಟಕ ಮತ್ತು ಇತರೆ ರಾಜ್ಯಗಳನ್ನು ಸೇರಿ ೨೨೫ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಜನವರಿ ಅಂತ್ಯಕ್ಕೆ ವಿಶ್ವದಾದ್ಯಂತ ಬಿಡುಗಡೆ ಮಾಡುವ ಯೋಜನೆಗಳು ಕೂಡ ಇವೆ.

ಶಾನ್ವಿ ಶ್ರೀವಾಸ್ತವ್ ನಾಯಕ ನಟಿ. ಸುಹಾಸಿನಿ, ಅಚ್ಯುತ್ ಕುಮಾರ್ ಸಹ ನಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT