ಲಿಂಗಾ ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ಬಗೆಹರಿಯದ 'ಲಿಂಗಾ' ವಿವಾದ, ೩೪ ಕೋಟಿ ಪರಿಹಾರ ಕೇಳಿದ ವಿತರಕರು

ಸೂಪರ್ ಸ್ಟಾರ್ ರಜನೀಕಾಂತ್ ಅವರ ಲಿಂಗಾ ಸಿನೆಮಾ ವಿವಾದ ಬಗೆ ಹರಿದಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತೆ ವಿತರಕರು ಒಗ್ಗೂಡಿದ್ದಾರೆ.

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅವರ ಲಿಂಗಾ ಸಿನೆಮಾ ವಿವಾದ ಬಗೆ ಹರಿದಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತೆ ವಿತರಕರು ಒಗ್ಗೂಡಿದ್ದಾರೆ. ಈ ಹಿಂದೆ ಪರಿಹಾರ ಕೋರಿದ್ದ ವಿತರಕರು ಹಾಗೂ ಚಲನಚಿತ್ರಮಂದಿರ ಮಾಲಿಕರು ಭಾನುವಾರ ಮತ್ತೆ ಸಭೆ ಸೇರುತ್ತಿದ್ದು ನಟ ರಜನಿಕಾಂತ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮೇಲೆ ಹೊಸದಾಗಿ ಒತ್ತಡ ತರುವ ಬಗ್ಗೆ ಚಿಂತಿಸಲಿದ್ದಾರೆ.

ರಜನಿಕಾಂತ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ಲಿಂಗಾ ಚಲನಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶಿಸಿದ್ದರು. ಇದು ಡಿಸೆಂಬರ್ ೧೨ ರಂದು ಚಲನಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ವಿತರಕರಿಗೆ ಭಾರಿ ಮೊತ್ತಕ್ಕೆ ಈ ಸಿನೆಮಾ ಮಾರಾಟವಾಗಿತ್ತು. ಆದ ಚಲನಚಿತ್ರ ನಿರೀಕ್ಷಿತ ಗಳಿಕೆ ಕಾಣದೆ ಹೋದದ್ದರಿಂದ ವಿತರಕರು ಹಣ ಹಿಂದಿರುಗಿಸುವಂತೆ ರಜನಿಕಾಂತ್ ಅವರನ್ನು ಒತ್ತಾಯಿಸಿದ್ದರು.

ಸದ್ಯಕ್ಕೆ ನಿರ್ಮಾಪಕ ಒಪ್ಪಿಕೊಂಡಿರುವ ಪರಿಹಾರ ಅತಿ ಕಡಿಮೆ ಎಂದಿರುವ ವಿತರಕನೊಬ್ಬ, "ರಜನಿಕಾಂತ್ ಅವರ ಹತ್ತಿರದವರೇ ಆದ ತಿರ್ಪೂರ್ ಸುಬ್ರಮಣಿಯನ್ ಅವರು ನಮಗಾದ ನಷ್ಟದ ಬಗ್ಗೆ ವಿವರವಾಗಿ ಲೆಕ್ಕ ಮಾಡಿದ್ದಾರೆ. ಹೀಗಿದ್ದರೂ ಅವರು ನಮ್ಮ ನಷ್ಟವನ್ನು ಭರಿಸಿಕೊಡಲು ಒಪ್ಪುತ್ತಿಲ್ಲ ಆದುದರಿಂದ ಅವರು ಏರೋಸ್ ಇಂಟರ್ನ್ಯಾಶನಲ್ ನಿಂದ ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಮುಂದಾಗಿದ್ದೇವೆ" ಎನ್ನುತ್ತಾರೆ.

ನಮಗಾಗಿರುವ ನಷ್ಟ ಭರಿಸಿಕೊಡಲು ನಾವು ಕೇಳುತ್ತಿರುವ ಪರಿಹಾರ ಧನ ಕೇವಲ ೩೩.೮೫ ಕೋಟಿ. ನಾವು ಅವರ ಲಾಭದ ಮಾರ್ಜಿನ್ ಕಡಿಮೆ ಮಾಡಿಕೊಳ್ಳಿ ಎಂದಷ್ಟೇ ಕೇಳುತ್ತಿರುವುದು. ಅವರು ಏರೋಸ್ ಇಂಟರ್ನ್ಯಾಶನಲ್ ನಿಂದ ೧೫೭ ಕೋಟಿ ಪಡೆದಿದ್ದಾರೆ ಎಂದು ಕೂಡ ವಿತರಕರು ತಿಳಿಸಿದ್ದಾರೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ವಿತರಕರು ಅನುಭವಿಸಿದ್ದಾರೆ ಎನ್ನಲಾದ ನಷ್ಟದ ೧೦% ಮೊತ್ತವನ್ನು ಭರಿಸಿಕೊಡಲು ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್