'ಗಣಪ' ಸಿನೆಮಾ ಭಿತ್ತಿಚಿತ್ರ 
ಸಿನಿಮಾ ಸುದ್ದಿ

'ಗಣಪ' ಹೌಸ್ ಫುಲ್! ಹೆಚ್ಚುವರಿ ೫೦ ಚಿತ್ರಮಂದಿರಗಳಿಗೆ ವಿಸ್ತರಣೆ

'ಗಣಪ' ಎರಡನೆ ವಾರವೂ ಹೌಸ್ ಫುಲ್. ನಿರ್ಮಾಪಕ ಫುಲ್ ಖುಷ್. ಹೌದು ಸಂತೋಶ್ ಮತ್ತು ಪ್ರಿಯಾಂಕ ನಟನೆಯ 'ಗಣಪ'ನನ್ನು ಪ್ರೇಕ್ಷಕರು ತುಂಬು ಹೃದಯದಿಂದ...

ಬೆಂಗಳೂರು: 'ಗಣಪ' ಎರಡನೆ ವಾರವೂ ಹೌಸ್ ಫುಲ್. ನಿರ್ಮಾಪಕ ಫುಲ್ ಖುಷ್. ಹೌದು ಸಂತೋಶ್ ಮತ್ತು ಪ್ರಿಯಾಂಕ ನಟನೆಯ 'ಗಣಪ'ನನ್ನು ಪ್ರೇಕ್ಷಕರು ತುಂಬು ಹೃದಯದಿಂದ ಸ್ವಾಗತಿಸಿದ್ದಾರಂತೆ. ಒಂದು ವಾರದಲ್ಲಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿರುವ ಸಿನೆಮಾ, ಬೇಡಿಕೆಯ ಮೇರೆಗೆ ಕರ್ನಾಟಕದಾದ್ಯಂತ ಹೆಚ್ಚುವರಿ ೫೦ ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ. "ಸಿನೆಮಾದಲ್ಲಿ ಒಳ್ಳೆಯ ಕಥೆ-ಹೂರಣ ಇದ್ದರೆ ಅದು ಗೆಲ್ಲುತ್ತದೆ ಎನ್ನುವುದಕ್ಕೆ ಗಣಪ ಸಾಕ್ಷಿ. ನಮ್ಮ ಪಟ್ಟಿಗೆ ಇಂದು ನಾವು ಇನ್ನು ೫೦ ಥಿಯೇಟರ್ ಗಳನ್ನು ಸೇರಿಸುತ್ತಿದ್ದೇವೆ. ಎಲ್ಲಾ ಸ್ಕ್ರೀನ್ ಗಳಲ್ಲೂ ಸಿನೆಮಾ ಹೌಸ್ ಫುಲ್" ಎನ್ನುತ್ತಾರೆ ನಿರ್ಮಾಪಕ ಪರಮೇಶ್.

ಎಲ್ಲವೂ ಸರಿ ಬಂದರೆ ತಮಿಳು ಚಿತ್ರರಂಗದ, ಸೂರ್ಯ ಒಡೆತನದ ಸ್ಟುಡಿಯೋ ಗ್ರೀನ್ ತಮಿಳು ಅವತರಿಣಿಕೆಯ ವಿತರಣೆಯ ಹಕ್ಕನ್ನು ಕೊಂಡುಕೊಳ್ಳುವ ಸಾಧ್ಯತೆ ಇದೆಯಂತೆ. "ಮಾತುಕತೆ ಪ್ರಗತಿಯಲ್ಲಿದೆ. ತಮಿಳುನಾಡಿನಾದ್ಯಂತ ಎಷ್ಟು ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆ ಮಾಡಬೇಕೆಂದು ನಿರ್ಧರಿಸಲಿದ್ದೇವೆ. ಇದು ೨-೩ ವಾರ ಹಿಡಿಯುತ್ತದೆ" ಎನ್ನುತ್ತಾರೆ ಪರಮೇಶ್.

ಪ್ರಭು ಶ್ರೀನಿವಾಸ್ ನಿರ್ದೇಶನ 'ಗಣಪ' ಬೆಂಗಳುರಿನ ಭೂಗತ ಲೋಕದಲ್ಲಿ ಅರಳುವ ಪ್ರೇಮಕಥೆಯ ಜಾಡನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲ ಗೆಹ್ಲೋಟ್!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!