ಭಾರತ ಕ್ರಿಕೆಟ್ ತಾರೆ ಎಂ ಎಸ್ ಧೋನಿಯವರನ್ನು ಭೇಟಿ ಮಾಡಿದ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ 
ಸಿನಿಮಾ ಸುದ್ದಿ

ಧೋನಿ ಭೇಟಿ ಮಾಡಿದ 'ಕಾಕಾ ಮುತ್ತೈ' ಬಾಲನಟರು

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರಿಗೆ ಕನಸು ನನಸಾದ ಕ್ಷಣ. ಭಾರತ ಕ್ರಿಕೆಟ್ ತಾರೆ ಎಂ ಎಸ್

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರಿಗೆ ಕನಸು ನನಸಾದ ಕ್ಷಣ. ಭಾರತ ಕ್ರಿಕೆಟ್ ತಾರೆ ಎಂ ಎಸ್ ಧೋನಿಯವರನ್ನು ಈ ಬಾಲನಟರು ಭೇಟಿ ಮಾಡಿದ್ದಾರೆ.

"ಧೋನಿ ಸರ್ ಜೊತೆ ಇದು ಸೂಪರ್ ಭೇಟಿಯಾಗಿತ್ತು. ಅವರು ನಮ್ಮ ಜೊತೆ ಗೆಳೆಯರಂತೆ ಮತ್ತು ಖುಷಿಯಿಂದಿದ್ದರು. ಅವರನ್ನು ನಮ್ಮನ್ನು ಅಭಿನಂದಿಸಿ ಆಲಿಂಗಿಸಿದರು. ಇದು ನಮಗೆ ಕನಸು ನನಸಾದಂತೆ" ಎಂದು ರಮೇಶ್ ತಿಳಿಸಿದ್ದಾರೆ.

ಧೋನಿ ತಮ್ಮ ಜೊತೆ ಮಾಡನಾಡುತ್ತಿದ್ದುದನ್ನು ನಂಬಲಾಗದೆ ನನ್ನನು ನಾನೇ ತಟ್ಟಿ ನೋಡಿಕೊಂಡೆ ಎನ್ನುತ್ತಾರೆ ವಿಜ್ಞೇಶ್.

"ಕಾಕ ಮುತ್ತೈ" ಬಾಲನಟರಿಗೆ ಧೋನಿ ಅವರನ್ನು ನೋಡುವಾಸೆಯನ್ನು ತಿಳಿದ ಫಾಕ್ಸ್ ಸ್ಟಾರ್ ಸ್ಟುಡಿಯೊಸ್ ಸಂಸ್ಥೆ ಕೂಡಲೆ ಈ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ.

ಬಾಲನಟರನ್ನು ಸಿನೆಮಾದ ನಿರ್ದೇಶಕ ಎಂ ಮಣಿಕಂಠನ್ ಅವರೊಂದಿಗೆ ಕ್ರಿಕೆಟ್ ತಾರೆಯನ್ನು ಭೇಟಿ ಮಾಡಲು ಡಿ ವೈ ಪಾಟಿಲ್ ಮೈದಾನಕ್ಕೆ ಕೊಂಡೊಯ್ಯೊಲಾಗಿತ್ತು.

ಇಬ್ಬರು ಬೀದಿ ಮಕ್ಕಳು ಪಿಜ್ಜಾ ತಿನ್ನುವಾಸೆಯ ಸುತ್ತ ಹೆಣೆದಿರುವ ಈ ಸಿನೆಮಾ, ವಿಮರ್ಶಕರ ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT