ಬೆತ್ತನಗೆರೆ ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ರೌಡಿ ಸಹೋದರರ ಮೇಲೆ ಮಾಡಿದ ಸಿನೆಮಾಗೆ ೧೦೩ ಕಡೆ ಕತ್ತರಿ

ಬೆತ್ತನಗೆರೆ ಸೀನ ಮತ್ತು ಬೆತ್ತನಗೆರೆ ಶಂಕರ ಎಂಬ ರೌಡಿಗಳನ್ನು ತಮ್ಮ ಸಿನೆಮಾದ ವಿಷಯವಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಸಿನೆಮಾ ನಿರ್ದೇಶಕರು ಭಾರಿ ದಂಡ

ಬೆಂಗಳೂರು: ಬೆತ್ತನಗೆರೆ ಸೀನ ಮತ್ತು ಬೆತ್ತನಗೆರೆ ಶಂಕರ ಎಂಬ ರೌಡಿಗಳನ್ನು ತಮ್ಮ ಸಿನೆಮಾದ ವಿಷಯವಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಸಿನೆಮಾ ನಿರ್ದೇಶಕರು ಭಾರಿ ದಂಡ ತೆತ್ತಬೇಕಾಗಿ ಬಂದಿದೆ. ೧೦೩ ಕಡೆ ಕತ್ತರಿ ಮತ್ತು ನಾಲ್ಕು ಲಕ್ಷ ರೂ.

ಚಲನಚಿತ್ರ ಶೀರ್ಷಿಕೆಯಿಂದಲೇ ಬದಲಾವಣೆ ಮಾಡಬೇಕಾಗಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಮೋಹನ್ ಗೌಡ ಬಿ. ಮೊದಲು ಚಿತ್ರದ ಶೀರ್ಷಿಕೆ ಬೆತ್ತನಗೆರೆ ಸೀನ ಎಂದಿತ್ತು ಅದನ್ನು 'ಬೆತ್ತನಗೆರೆ' ಎಂದು ಬದಲಾಯಿಸಿದ್ದೇವೆ ಎನ್ನುತ್ತಾರೆ ಗೌಡ.

ಸೀನ ಹೆಸರಿನ ಪಾತ್ರವನ್ನು ಈಗ ಶಿವ ಎಂತಲೂ ಶಂಕರನನ್ನು ಶೇಖರ ಎಂತಲೂ ಬದಲಾಯಿಸಲಾಗಿದೆ. ಹೆಸರುಗಳನ್ನು ೪೦ ಕಡೆ ಬದಲಾಯಿಸಬೇಕಾಗಿ ಬಂತು. "ಅವರು ಸ್ಥಳದ (ನೆಲಮಂಗಲ) ಹೆಸರನ್ನೂ ಬದಲಾಯಿಸಲು ಕೂಡ ತಿಳಿಸಿದರು. ಬಂಡಿ ಬಂಡಿ ಜಾರೋ ಬಂಡಿ ಹಾಡಿನ ಸಂಪೂರ್ಣ ಗೀತ ಸಾಹಿತ್ಯವನ್ನು ಬದಲಾಯಿಸಬೇಕಾಯಿತು ಏಕೆಂದರೆ ಮಹಿಳೆಯ ದೇಹವನ್ನು ಸರಿಯಾಗಿ ಬಿಂಬಿಸಿಲ್ಲ ಎಂಬದು ಸೆನ್ಸಾರ್ ಮಂಡಲಿಯ ವಾದ" ಎನ್ನುತ್ತಾರೆ ಮೋಹನ್.

೧೫೦ ನಿಮಿಷಗಳ ಸಿನೆಮಾ ಈಗ ೧೨೫ ನಿಮಿಷಕ್ಕೆ ಇಳಿದಿದೆ. "ನಾವು ಮರುಚಿತ್ರೀಕರಣ ಮಾಡಲಿಲ್ಲ ಆದರೆ ಬಹಳಷ್ಟು ಹಣ ಮತ್ತು ಸಮಯವನ್ನು ವ್ಯಯಿಸಿದ್ದೇವೆ. ಈ ಬದಲಾವಣೆಗಳು ಬಹುತೇಕ ಡಬ್ಬಿಂಗ್ ಸ್ಟುಡಿಯೋದಲ್ಲಿ ನಡೆದದ್ದು ಮತ್ತು ಇದಕ್ಕೆ ನಾಲ್ಕು ಲಕ್ಷ ವ್ಯಯಿಸಿದ್ದೇವೆ" ಎನ್ನುತ್ತಾರೆ ನಿರ್ದೇಶಕ.

ನಿರ್ದೇಶಕ ಇದು ಕಾಲ್ಪನಿಕ ಸಿನೆಮಾ ಎಂದು ಹೇಳುತ್ತಾರೆ ಆದರೆ ನಿಜ ವ್ಯಕ್ತಿಗಳ ಮತ್ತು ಸ್ಥಳಗಳ ಹೆಸರುಗಳನ್ನು ಬಳಸಿದ್ದಾರೆ. ನಿರ್ದೇಶಕರು ಅದೇ ಕುಟುಂಬದ ಸದಸ್ಯರಾಗಿದ್ದು ನಿಜವಾದ ಹೆಸರುಗಳನ್ನು ಬಳಸುವಂತಿಲ್ಲ ಎಂದು ತಿಳಿದಿರಬೇಕಿತ್ತು ಎಂದಿದ್ದಾರೆ ಸೆನ್ಸಾರ್ ಮಂಡಲಿಯ ಪ್ರಾದೇಶಿಕ ಅಧ್ಯಕ್ಷ ಎನ್ ನಾಗೇಂದ್ರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT