ಸೂರಿ ನಿರ್ದೇಶನದ 'ಕಡ್ಡಿಪುಡಿ' ಸಿನೆಮಾದಲ್ಲಿ ನಟ ಶಿವರಾಜಕುಮಾರ್ 
ಸಿನಿಮಾ ಸುದ್ದಿ

ಮತ್ತೆ ಜತೆಯಾದ ಸೂರಿ ಮತ್ತು ಶಿವರಾಜಕುಮಾರ್

ಯಾವತ್ತೂ ಬ್ಯುಸಿಯಾಗಿರುವ ನಟ ಡಾ. ಶಿವರಾಜಕುಮಾರ್ ಅವರಿಗೆ ಒಳ್ಳೆಯ ಕಥೆಗಳು ಅರಸಿ ಬರುತ್ತಲೇ ಇರುತ್ತವೆ. ಈಗ ಬಲ್ಲ ಮೂಲಗಳ ಪ್ರಕಾರ ಕಡ್ಡಿಪುಡಿ ಸಿನೆಮಾದ ನಂತರ ನಿರ್ದೇಶಕ ಸೂರಿ,

ಬೆಂಗಳೂರು: ಯಾವತ್ತೂ ಬ್ಯುಸಿಯಾಗಿರುವ ನಟ ಡಾ. ಶಿವರಾಜಕುಮಾರ್ ಅವರಿಗೆ ಒಳ್ಳೆಯ ಕಥೆಗಳು ಅರಸಿ ಬರುತ್ತಲೇ ಇರುತ್ತವೆ. ಈಗ ಬಲ್ಲ ಮೂಲಗಳ ಪ್ರಕಾರ 'ಕಡ್ಡಿಪುಡಿ' ಸಿನೆಮಾದ ನಂತರ ನಿರ್ದೇಶಕ ಸೂರಿ, ಶಿವಣ್ಣನವರ ಮತ್ತೊಂದು ಸಿನೆಮಾವನ್ನು ನಿರ್ದೇಶಿಸಲಿದ್ದಾರೆ. ಸಿನೆಮಾದ ಹೆಸರು 'ಟಗರು' ಎಂದಿದ್ದು, ಅಡಿ ಶೀರ್ಷಿಕೆ 'ಮೈಯಲ್ಲಿ ಪೊಗರು' ಎಂದಿದೆಯಂತೆ.

ಇದನ್ನು ಧೃಢೀಕರಿಸಿದ ನಿರ್ದೇಶಕ "ಇದು ಸದ್ಯಕ್ಕೆ ಪ್ರಾರಂಭವಾಗುವ ಯೋಜನೆಯೇನಲ್ಲ. ಇಬ್ಬರೂ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದೇವೆ. ನಾನು ಶಿವರಾಜಕುಮಾರ್ ಜತೆಗೆ ಚರ್ಚಿಸಿದ್ದೇನೆ ಮತ್ತು ಒಂದು ಸಾಲಿನ ಕಥೆಯನ್ನು ಅವರು ಒಪ್ಪಿದ್ದಾರೆ. ಸ್ಕ್ರಿಪ್ಟ್ ಮುಗಿಸಲು ನಟ ನನಗೆ ಬೇಕಾದಷ್ಟು ಸಮಯ ನೀಡಿದ್ದಾರೆ. ಚಿತ್ರಕಥೆ ಅಂತಿಮವಾದ ಮೇಲಷ್ಟೇ ಮುಂದುವರೆಯಲು ಸಾಧ್ಯ" ಎನ್ನುತ್ತಾರೆ.

ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ ವದಂತಿಯ ಪ್ರಕಾರ ಕೆ ಪಿ ಶ್ರೀಕಾಂತ್ ಈ ಸಿನೆಮಾ ನಿರ್ಮಿಸಲಿದ್ದಾರೆ.

ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡುಗ' ಸಿನೆಮಾದ ಚಿತ್ರೀಕರಣವನ್ನು ಮುಂದುವರೆಸಲು ಸೂರಿ ಹುಬ್ಬಳ್ಳಿಗೆ ತೆರಳಲಿದ್ದಾರೆ. "ಬಹಳಷ್ಟು ಚಿತ್ರೀಕರಣ ಮುಗಿದಿದೆ. ಈಗ ರವಿಶಂಕರ್ ಅವರ ಭಾಗದ ಚಿತ್ರೀಕರಣ ನಡೆಯಬೇಕಿದೆ. ಜತೆಜತೆಗೆ 'ಕೆಂಡಸಂಪಿಗೆ-ಕಾಗೆ ಬಂಗಾರ'ಕ್ಕೂ ನಟರ ಶೋಧನೆಯಲ್ಲಿದ್ದೇನೆ" ಎನ್ನುತ್ತಾರೆ ಸೂರಿ.

ಹಾಗೆಯೇ ಇಂದು ಶಿವರಾಜ್ ಕುಮಾರ್ ಅವರ 'ಕಿಲ್ಲಿಂಗ್ ವೀರಪ್ಪನ್ ಸಿನೆಮಾದ ಆಡಿಯೋ ಬಿಡುಗಡೆ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

'Ground Ops ಗಾಗಿ ಭಾರತೀಯ ಸೇನೆ ಸಂಪೂರ್ಣ ಸಜ್ಜು: ಪಾಕ್ ಗೆ ವಾರ್ನಿಂಗ್ ನೀಡಿದ ಸೇನಾ ಮುಖ್ಯಸ್ಥ ದ್ವಿವೇದಿ!

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

SCROLL FOR NEXT