ಕಲ್ಪನಾ-೨ ಸಿನೆಮಾದಲ್ಲಿ ಉಪೇಂದ್ರ 
ಸಿನಿಮಾ ಸುದ್ದಿ

'ಕಲ್ಪಾನ'ಗೆ ಹುರಿಗೊಳ್ಳುತ್ತಿರುವ ಉಪೇಂದ್ರ

ರಾಘವ ಲಾರೆನ್ಸ್ ಅವರ ಕಾಂಚನ ಸಿನೆಮಾ ಸರಣಿ ತಮಿಳು ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿ ಮನಗೆದ್ದಿದ್ದು ಈಗ ಇತಿಹಾಸ. ಇದರಿಂದ ಸ್ಫೂರ್ತಿಗೊಂಡು ಕನ್ನಡ ನಟ ಉಪೇಂದ್ರ

ಬೆಂಗಳೂರು: ರಾಘವ ಲಾರೆನ್ಸ್ ಅವರ ಕಾಂಚನ ಸಿನೆಮಾ ಸರಣಿ ತಮಿಳು ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿ ಮನಗೆದ್ದಿದ್ದು ಈಗ ಇತಿಹಾಸ. ಇದರಿಂದ ಸ್ಫೂರ್ತಿಗೊಂಡು ಕನ್ನಡ ನಟ ಉಪೇಂದ್ರ ಅದಕ್ಕೆ ತಮ್ಮದೇ ಆದ ಹೊಳಹುಗಳನ್ನು ಸೇರಿಸುತ್ತಿದ್ದಾರೆ.

ಕಲ್ಪನಾ -೨ ತಮಿಳಿನ ಕಾಂಚನ೨ ರಿಮೇಕ್. ಲಾರೆನ್ಸ್ ಅವರ ಮೂಲಕ್ಕಿಂತಲೂ ವಿಭಿನ್ನವಾಗಿ ಮಾಡುವುದು ನಿರ್ದೇಶಕ ಆರ್ ಅನಂತ ರಾಜು ಅವರಿಗೆ ಸವಾಲಂತೆ. "ಲಾರೆನ್ಸ್ ಅವರಿಗೆ ದೊಡ್ಡ ನಟರನ್ನು ನಿಭಾಯಿಸುವ ಕಷ್ಟವಿರಲಿಲ್ಲ. ಅವರು ಪಾತ್ರದ ಜೊತೆ ಸಾಮಾನ್ಯವಾಗಿ ಆಟವಾಡಿದರು. ಇಲ್ಲಿ ಉಪೇಂದ್ರ ಇರುವುದರಿಂದ ಸನ್ನಿವೇಶ ಬದಲಾಗಿದೆ" ಎನ್ನುತ್ತಾರೆ.

ಉಪೇಂದ್ರ ಅವರ ಇಮೇಜ್ ಮತ್ತು ಪಾತ್ರವನ್ನು ಸರಿದೂಗಿಸುವುದು ಪ್ರಮುಖ ಸವಾಲು ಎನ್ನುವ ನಿರ್ದೇಶಕ "ಉಳಿತ ಪಾತ್ರವರ್ಗದ ಪರಿಕಲ್ಪನೆ ಅದೇ ಆಗಿರುತ್ತದೆ" ಎನ್ನುತ್ತಾರೆ. ದ್ವಿತೀಯಾರ್ಧದ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವುದಾಗಿ ತಿಳಿಸುವ ಅನಂತ "ಮೂಲದಲ್ಲಿ ಒಂದೇ ದಿನದಲ್ಲಿ ನಡೆಯುವ ಹಲವಾರು ಘಟನೆಗಳನ್ನು ತೋರಿಸಿದ್ದಾರೆ. ಇಲ್ಲಿ ನಮ್ಮ ಪ್ರೇಕ್ಷಕರಿಗೆ ಅದು ಕರಗತವಾಗುವುದು ಸ್ವಲ ಕಷ್ಟ. ಇಲ್ಲಿ ಕ್ರಮಬದ್ಧವಾಗಿ ಸ್ಪಷ್ಟತೆಯನ್ನು ಕೋರುತ್ತಾರೆ. ಹಾಗೆಯೇ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ" ಎನ್ನುತ್ತಾರೆ.

ಪ್ರಿಯಾಮಣಿ ನಾಯಕನಟಿಯಾಗಿದ್ದು ಉಪೇಂದ್ರ ಎದುರು ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಪ್ರಕಾಶ್ ಹೆಬ್ಗೋಡು ಖಳನಾಯಕ. ಪೆಟ್ರೋಲ್ ಪ್ರಸನ್ನ ಮತ್ತು ವಿಕ್ಟರಿ ವಾಸು ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT