ನಟಿ ಪ್ರಿಯಾಮಣಿ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಉಪ್ಪಿ2 ನಂತರ 'ಕಲ್ಪನಾ-2' ದತ್ತ ಉಪ್ಪಿ ಚಿತ್ತ

ತಮ್ಮ ಬಹುನಿರೀಕ್ಷಿತ ಚಿತ್ರವಾಗಿದ್ದ ಉಪ್ಪಿ2 ಚಿತ್ರದಲ್ಲಿ ಧ್ಯಾನ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ, ಇತ್ತೀಚೆಗಷ್ಟೇ ಉಪ್ಪಿ 2 ಚಿತ್ರದ ಪ್ರಚಾರಕ್ಕಾಗಿ ಅಮೆರಿಕಾಗೆ ತೆರಳಿದ್ದರು. ಇದೀಗ ಉಪ್ಪಿ2 ಧ್ಯಾನದಿಂದ ಹೊರಬಂದಿರುವ ಉಪೇಂದ್ರ...

ತಮ್ಮ ಬಹುನಿರೀಕ್ಷಿತ ಚಿತ್ರವಾಗಿದ್ದ ಉಪ್ಪಿ2 ಚಿತ್ರದಲ್ಲಿ ಧ್ಯಾನ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ, ಇತ್ತೀಚೆಗಷ್ಟೇ ಉಪ್ಪಿ 2 ಚಿತ್ರದ ಪ್ರಚಾರಕ್ಕಾಗಿ ಅಮೆರಿಕಾಗೆ ತೆರಳಿದ್ದರು. ಇದೀಗ ಉಪ್ಪಿ2 ಧ್ಯಾನದಿಂದ ಹೊರಬಂದಿರುವ ಉಪೇಂದ್ರ ಅವರು ಕಲ್ಪನಾ2 ಚಿತ್ರದತ್ತ ತಮ್ಮ ಚಿತ್ತ ಹರಿಸಲು ತಯಾರಾಗಿದ್ದಾರೆ.

ಕಲ್ಪನಾ 2 ಚಿತ್ರವನ್ನು ಅನಂತರಾಜು ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಮೊದಲ ಬಾರಿಗೆ ಉಪೇಂದ್ರ ಹಾಗೂ ಪ್ರಿಯಾಮಣಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ ಕಲ್ಪನಾ-2 ಚಿತ್ರದ ನಾಯಕಿ ಪಾತ್ರಕ್ಕೆ ನಟಿ ಪ್ರಿಯಾ ಮಣಿರನ್ನ ಚಿತ್ರದ ತಂಡ ಸಂಪರ್ಕಿಸಿದ್ದು, ಚಿತ್ರದ ಕುರಿತಂತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಬಗ್ಗೆ ಪ್ರಿಯಾಮಣಿ ಸಹ ಆಸಕ್ತಿ ತೋರಿಸಿದ್ದು, ಅಧಿಕೃತವಾಗಿ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.

`ಕಲ್ಪನಾ-2' ಚಿತ್ರವು ತಮಿಳಿನ `ಕಾಂಚನ-2' ಚಿತ್ರದ ರೀಮೇಕ್ ಆಗಿರಲಿದೆ. ಇದಕ್ಕೂ ಮುನ್ನ ರಾಘವ ಲಾರೆನ್ಸ್ ಅಭಿನಯದ ತಮಿಳಿನ`ಕಾಂಚನ' ಚಿತ್ರ ಕನ್ನಡದಲ್ಲಿ ರೀಮೇಕ್ ಆಗಿತ್ತು. ಚಿತ್ರದಲ್ಲಿ ಉಪೇಂದ್ರ ಅಭಿನಯಿಸಿದ್ದರು. ಈಗ ಅದರ ಮುಂದುವರೆದ ಭಾಗದಲ್ಲೂ ಉಪೇಂದ್ರ ಅವರು ನಟಿಸುತ್ತಿರುವುದು ವಿಶೇಷವಾಗಿದೆ.

ಈ ಹಿಂದೆ ಕಲ್ಪನಾ-2 ಚಿತ್ರದ ನಾಯಕಿ ಪಾತ್ರಕ್ಕೆ ರಾಧಿಕಾ ಪಂಡಿತ್ ಬರಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಕಲ್ಪನಾ-2 ಚಿತ್ರದ ನಾಯಕಿಯಾಗಿ ಅಭಿನಯಿಸುವ ಆಫರ್ ನ್ನು ಚಿತ್ರದ ತಂಡ ರಾಧಿಕಾ ಪಂಡಿತ್ ಅವರಿಗೆ ನೀಡಿದ್ದು, ಈ ಆಫರ್ ನ್ನು ರಾಧಿಕಾ ಪಂಡಿತ್ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಕಲ್ಪನಾ-2 ಚಿತ್ರದ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆಸಿರುವ ಚಿತ್ರದ ತಂಡ ನವೆಂಬರ್ ಕೊನೆಯಲ್ಲಿ ಪಾತ್ರಗಳ ಕುರಿತಂತೆ ಅಧಿಕೃತ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT