'ಡಾ ರಾಜಕುಮಾರ್ ಸಮಗ್ರ ಚರಿತ್ರೆ' ಪುಸ್ತಕದಿಂದ ಆಯ್ದ ಪುಟ 
ಸಿನಿಮಾ ಸುದ್ದಿ

ರಾಜಕುಮಾರ್ ಬದುಕು ಚಿತ್ರಿಸುವ ಸಂಗ್ರಹಯೋಗ್ಯ ಪುಸ್ತಕದ ತೂಕ ೧೧ ಕೆಜಿ; ೨೯ಕ್ಕೆ ಬಿಡುಗಡೆ

ವರನಟ ಡಾ. ರಾಜಕುಮಾರ್ ಅವರ ಬದುಕನ್ನು ಅಪರೂಪದ ಛಾಯಾಚಿತ್ರಗಳ ಮೂಲಕ ಸೆರೆಹಿಡಿದಿರುವ ೨ ಸಂಪುಟಗಳ ೧೧ ಕೆಜಿ ತೂಗುವ ಪುಸ್ತಕಗಳನ್ನು ಹೊತ್ತ ೩ ಟ್ರಕ್ಕುಗಳು

ಬೆಂಗಳೂರು: ವರನಟ ಡಾ. ರಾಜಕುಮಾರ್ ಅವರ ಬದುಕನ್ನು ಅಪರೂಪದ ಛಾಯಾಚಿತ್ರಗಳ ಮೂಲಕ ಸೆರೆಹಿಡಿದಿರುವ ೨ ಸಂಪುಟಗಳ ೧೧ ಕೆಜಿ ತೂಗುವ ಪುಸ್ತಕಗಳನ್ನು ಹೊತ್ತ ೩ ಟ್ರಕ್ಕುಗಳು ಮಂಗಳವಾರ ಶಿವಕಾಶಿಯಿಂದ ಹೊರಡಲಿವೆ. ದೊಡ್ಡಹುಲ್ಲೂರು ರುಕ್ಕೋಜಿ ಅವರು ಸಂಪಾದಿಸಿರುವ 'ಡಾ ರಾಜಕುಮಾರ್ ಸಮಗ್ರ ಚರಿತ್ರೆ' ಪುಸ್ತಕವನ್ನು ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಿಡುಗಡೆ ಮಾಡಲಿದ್ದಾರೆ.

ಎರಡು ಸಂಪುಟಗಳಲ್ಲಿ ಒಟ್ಟು ೨೧೪೮ ಪುಟಗಳ ಅಪೂರ್ವ ಚಿತ್ರಗಳನ್ನು ಹೊಂದಿರುವ ಈ ಪುಸ್ತಕವನ್ನು ಸಂಪಾದಿಸಲು ರುಕ್ಕೋಜಿಯವರಿಗೆ ೧೫ ವರ್ಷ ಹಿಡಿಯಿತಂತೆ. ಇದು ಸಂಗ್ರಹಗಾರರಿಗೆ ಅಪರೂಪದ ಪುಸ್ತಕವಾಗಲಿದೆ. ಮೊದಲ ಸಂಪುಟ ರಾಜಕುಮಾರ್ ಅವರ ಜೀವನ ಮತ್ತು ಕುಟುಂಬದ ಬಗ್ಗೆ ಮಾಹಿತಿಯನ್ನು ಒಳಗೊಂಡಿದ್ದರೆ ಎರಡನೇ ಸಂಪುಟದಲ್ಲಿ ಅವರ ಚಲನಚಿತ್ರಗಳ ಮಾಹಿತಿಯಿದೆ.


"ಈ ಪುಸ್ತಕಕ್ಕಾಗಿ ನಾನು ೨೦೦೦೦ ಫೋಟೊಗಳನ್ನು ಸಂಗ್ರಹಿಸಿದ್ದೆ. ಅವುಗಳಲ್ಲಿ ೧೪೦೦೦ ಫೋಟೊಗಳನ್ನು ಸ್ಕ್ಯಾನ್ ಮಾಡಿದ್ದೆ. ಇವುಗಳಲ್ಲಿ ೮೭೦೦ ಫೋಟೊಗಳನ್ನು ಬಳಸಿಕೊಂಡಿದ್ದೇನೆ. ಮುದ್ರಕರು ೨೫೦೦ ಪ್ರತಿಗಳನ್ನು ಮುದ್ರಿಸಲು ೩೩ ಟನ್ ಕಾಗದ ಬಳಸಿದ್ದಾರೆ" ಎಂದು ವಿವರಿಸುತ್ತಾರೆ ರುಕ್ಕೋಜಿ.

ಈ ಪುಸ್ತಕ ಹೊರತರಲು ಯಾವುದೇ ಸಂಸ್ಥೆಯಿಂದ ಧನಸಹಾಯ ಬಯಸದೆ ಸ್ವ ಆಸಕ್ತಿಯಿಂದ ಹೊರತಂದಿದ್ದಾರೆ. "ಬದಲಾಗಿ ನನ್ನ ಗೆಳೆಯರು ಬಡ್ಡಿಯಿಲ್ಲದೆ ಹಣವನ್ನು ಸಾಲವಾಗಿ ನೀಡಿದ್ದಾರೆ. ನನಗೆ ಪುಸ್ತಕ ಯಾವಾಗ ಸಂಪೂರ್ಣಗೊಳ್ಳುತ್ತದೆ ಎಂಬುದರ ಬಗ್ಗೆ ಅರಿವಿರಲಿಲ್ಲ" ಎಂದು ರುಕ್ಕೋಜಿ ವಿವರಿಸುತ್ತಾರೆ.

೨೫೦೦ ಪುಸ್ತಕಗಳಲ್ಲಿ ೨೦೦ ಪ್ರತಿಗಳನ್ನು ಪುಸ್ತಕಕ್ಕೆ ಸಹಾಯ ಮಾಡಿದವರಿಗೆ ನೀಡಲಾಗುತ್ತದಂತೆ. ಉಳಿದ ಪ್ರತಿಗಳು ಮಾರಾಟಕ್ಕೆ ಲಭ್ಯವಾಗಲಿವೆ.

ಎರಡು ಸಂಪುಟಗಳ ಪುಸ್ತಕದ ಬೆಲೆ ೭೫೦೦/- ಇದ್ದು, ಪ್ರತಿಗಳಿಗಾಗಿ ೯೮೪೪೦೨೧೯೯೩ ಸಂಪರ್ಕಿಸಬೇಕಾಗಿ ಕೋರಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT