ನಟ ಜಯರಾಂ (ಜೆಕೆ) 
ಸಿನಿಮಾ ಸುದ್ದಿ

ರಾವಣನಾಗಿ ಹಿಂದಿಗೆ ಹೋದ ಜೆಕೆ

ಕಿರುತೆರೆಯಲ್ಲಿ ಜೆಕೆ ಎಂದೆ ಪ್ರಸಿದ್ಧನಾದ ನಟ ಜಯರಾಂ, ಟಿವಿ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದ ಮೂಲಕ ಜನಪ್ರಿಯರಾದವರು. ಬೆಳ್ಳಿತೆರೆಗೆ ಬಂದರೂ ಅದು ಯಾಕೋ

ಬೆಂಗಳೂರು: ಕಿರುತೆರೆಯಲ್ಲಿ ಜೆಕೆ ಎಂದೆ ಪ್ರಸಿದ್ಧನಾದ ನಟ ಜಯರಾಂ, ಟಿವಿ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದ ಮೂಲಕ ಜನಪ್ರಿಯರಾದವರು. ಬೆಳ್ಳಿತೆರೆಗೆ ಬಂದರೂ ಅದು ಯಾಕೋ ನಿರೀಕ್ಷಿತ ಮಟ್ಟದ ಯಶಸ್ಸು ಇವರನ್ನು ಅರಸಿ ಬರಲಿಲ್ಲ.

ಅಕ್ಟೋಬರ್ ಕೊನೆಗೆ 'ಅಶ್ವಿನಿ ನಕ್ಷತ್ರ' ಕೊನೆಗೊಳ್ಳಲಿದೆ ಎಂದು ತಿಳಿದುಬಂದಿದ್ದು, ಜೆಕೆ ಹಿಂದಿ ಧಾರಾವಾಹಿಗೆ ಜಿಗಿದಿದ್ದಾರಂತೆ. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗಲಿರುವ ನೂತನ ರಾಮಾಯಣ 'ಸಿಯ ಕೆ ರಾಮ್' ನಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರಂತೆ.

"ಧಾರಾವಾಹಿ ನಿರ್ಮಾಪಕರು ಮತ್ತು ನಿರ್ದೇಶಕ ಹೇಳುವಂತೆ ರಾವಣ ಪಾತ್ರಕ್ಕೆ ೯೦೦೦ ಜನರನ್ನು ಆಡಿಶನ್ ಮಾಡಿದರಂತೆ. ನಾನು ಆಡಿಶನ್ ನಲ್ಲಿ ಕಷ್ಟ ಪಟ್ಟಿದ್ದಕ್ಕೆ ಆಯ್ಕೆಯಾದೆ" ಎನ್ನುತ್ತಾರೆ ಹಿಂದಿ ಕೂಡ ಚೆನ್ನಾಗಿ ಮಾತನಾಡಬಲ್ಲಿ ಜೆಕೆ.

ಈ ಟಿವಿ ಧಾರಾವಾಹಿಯ ಚಿತ್ರೀಕರಣ ಆಗಲೇ ಪ್ರಾರಂಭವಾಗಿದ್ದು, ತಂಡವನ್ನು ಜೆಕೆ ನವೆಂಬರ್ ನಲ್ಲಿ ಸೇರಲಿದ್ದಾರಂತೆ. "ಒಂದು ವರ್ಷದ ಸಮಯವನ್ನು ಮೀಸಲಿಡಬೇಕು. ಆದರೆ ನನಗೆ ವಿಷಯ ಚೆನ್ನಾಗಿ ತಿಳಿದಿರುವುದರಿಂದ ನನಗೆ ತೊಂದರೆಯಿಲ್ಲ" ಎನ್ನುತ್ತಾರೆ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಧಾರಾವಾಹಿ ಚಿತ್ರೀಕರಣವಾಗುತ್ತಿದ್ದು, ತಿಂಗಳಲ್ಲಿ ೧೦-೧೨ ದಿನ ಈ ನಟ ಚಿತ್ರೀಕರಣಕ್ಕೆ ಮೀಸಲಿಡಬೇಕೆಂತೆ. ಅಲ್ಲದೆ ಸದ್ಯಕ್ಕೆ ಕೆಲವು ಕನ್ನಡ, ತೆಲುಗು, ತಮಿಳು ಸಿನೆಮಾಗಳ ಅವಕಾಶಗಳು ಕೂಡ ಇವೆ ಎನ್ನುತ್ತಾರೆ ನಟ ಜೆಕೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT