ನಟ ಜಯರಾಂ (ಜೆಕೆ) 
ಸಿನಿಮಾ ಸುದ್ದಿ

ರಾವಣನಾಗಿ ಹಿಂದಿಗೆ ಹೋದ ಜೆಕೆ

ಕಿರುತೆರೆಯಲ್ಲಿ ಜೆಕೆ ಎಂದೆ ಪ್ರಸಿದ್ಧನಾದ ನಟ ಜಯರಾಂ, ಟಿವಿ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದ ಮೂಲಕ ಜನಪ್ರಿಯರಾದವರು. ಬೆಳ್ಳಿತೆರೆಗೆ ಬಂದರೂ ಅದು ಯಾಕೋ

ಬೆಂಗಳೂರು: ಕಿರುತೆರೆಯಲ್ಲಿ ಜೆಕೆ ಎಂದೆ ಪ್ರಸಿದ್ಧನಾದ ನಟ ಜಯರಾಂ, ಟಿವಿ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದ ಮೂಲಕ ಜನಪ್ರಿಯರಾದವರು. ಬೆಳ್ಳಿತೆರೆಗೆ ಬಂದರೂ ಅದು ಯಾಕೋ ನಿರೀಕ್ಷಿತ ಮಟ್ಟದ ಯಶಸ್ಸು ಇವರನ್ನು ಅರಸಿ ಬರಲಿಲ್ಲ.

ಅಕ್ಟೋಬರ್ ಕೊನೆಗೆ 'ಅಶ್ವಿನಿ ನಕ್ಷತ್ರ' ಕೊನೆಗೊಳ್ಳಲಿದೆ ಎಂದು ತಿಳಿದುಬಂದಿದ್ದು, ಜೆಕೆ ಹಿಂದಿ ಧಾರಾವಾಹಿಗೆ ಜಿಗಿದಿದ್ದಾರಂತೆ. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗಲಿರುವ ನೂತನ ರಾಮಾಯಣ 'ಸಿಯ ಕೆ ರಾಮ್' ನಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರಂತೆ.

"ಧಾರಾವಾಹಿ ನಿರ್ಮಾಪಕರು ಮತ್ತು ನಿರ್ದೇಶಕ ಹೇಳುವಂತೆ ರಾವಣ ಪಾತ್ರಕ್ಕೆ ೯೦೦೦ ಜನರನ್ನು ಆಡಿಶನ್ ಮಾಡಿದರಂತೆ. ನಾನು ಆಡಿಶನ್ ನಲ್ಲಿ ಕಷ್ಟ ಪಟ್ಟಿದ್ದಕ್ಕೆ ಆಯ್ಕೆಯಾದೆ" ಎನ್ನುತ್ತಾರೆ ಹಿಂದಿ ಕೂಡ ಚೆನ್ನಾಗಿ ಮಾತನಾಡಬಲ್ಲಿ ಜೆಕೆ.

ಈ ಟಿವಿ ಧಾರಾವಾಹಿಯ ಚಿತ್ರೀಕರಣ ಆಗಲೇ ಪ್ರಾರಂಭವಾಗಿದ್ದು, ತಂಡವನ್ನು ಜೆಕೆ ನವೆಂಬರ್ ನಲ್ಲಿ ಸೇರಲಿದ್ದಾರಂತೆ. "ಒಂದು ವರ್ಷದ ಸಮಯವನ್ನು ಮೀಸಲಿಡಬೇಕು. ಆದರೆ ನನಗೆ ವಿಷಯ ಚೆನ್ನಾಗಿ ತಿಳಿದಿರುವುದರಿಂದ ನನಗೆ ತೊಂದರೆಯಿಲ್ಲ" ಎನ್ನುತ್ತಾರೆ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಧಾರಾವಾಹಿ ಚಿತ್ರೀಕರಣವಾಗುತ್ತಿದ್ದು, ತಿಂಗಳಲ್ಲಿ ೧೦-೧೨ ದಿನ ಈ ನಟ ಚಿತ್ರೀಕರಣಕ್ಕೆ ಮೀಸಲಿಡಬೇಕೆಂತೆ. ಅಲ್ಲದೆ ಸದ್ಯಕ್ಕೆ ಕೆಲವು ಕನ್ನಡ, ತೆಲುಗು, ತಮಿಳು ಸಿನೆಮಾಗಳ ಅವಕಾಶಗಳು ಕೂಡ ಇವೆ ಎನ್ನುತ್ತಾರೆ ನಟ ಜೆಕೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT