ಗ್ರಾಫಿಕ್ಸ್ ನಲ್ಲಿ ಸೃಷ್ಟಿಯಾದ ವಿಮಾನ 
ಸಿನಿಮಾ ಸುದ್ದಿ

'ಪುಷ್ಪಕ ವಿಮಾನ'ದಲ್ಲಿ ವಿಮಾನವು ಒಂದು ಪಾತ್ರ: ನಿರ್ದೇಶಕ ಎಸ್ ರವೀಂದ್ರನಾಥ್

ರಮೇಶ್ ಅರವಿಂದ್ ಅವರ ನಟನೆಯ ೧೦೦ ನೇ ಚಿತ್ರ 'ಪುಷ್ಪಕ ವಿಮಾನ' ಈ ವಾರ ಸೆನ್ಸಾರ್ ಮಂಡಳಿ ಮುಂದೆ ಬರಲಿದೆ. ಈ ಸಿನೆಮಾದ ವಿಶೇಷ ಪಾತ್ರದ ನೋಟವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಬೆಂಗಳೂರು: ರಮೇಶ್ ಅರವಿಂದ್ ಅವರ ನಟನೆಯ ೧೦೦ ನೇ  ಚಿತ್ರ  'ಪುಷ್ಪಕ ವಿಮಾನ' ಈ ವಾರ ಸೆನ್ಸಾರ್ ಮಂಡಳಿ ಮುಂದೆ ಬರಲಿದೆ. ಈ ಸಿನೆಮಾದ ವಿಶೇಷ ಪಾತ್ರದ ನೋಟವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅದುವೇ ವಿಮಾನ. ವಿಮಾನ ಮುಖ್ಯಪಾತ್ರಗಳಷ್ಟೇ ಕಥೆಗೆ ಕೊಡುಗೆ ನೀಡಿದೆ ಎನ್ನುತ್ತಾರೆ ನಿರ್ದೇಶಕ ಎಸ್ ರವೀಂದ್ರನಾಥ್. 
ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿರುವ ಇದು ೯೦ ರ ದಶಕದ ವಿಮಾನದ ಮಾಡೆಲ್ ಎಂದು ತಿಳಿಸುವ ನಿರ್ದೇಶಕ "ರಮೇಶ್ ಅರವಿಂದ್ ಅಭಿನಯಿಸಿರುವ ತಂದೆಯ ಪಾತ್ರ ಮತ್ತು ಬಾಲನಟಿ ಯುವಿನ ಪಾರ್ಥವಿ ನಟಿಸಿರುವ ಮಗಳ ನಡುವಿನ ಭಾವನಾತ್ಮಕ ಸಂಬಂಧ ಮತ್ತು ಉತ್ಸಾಹಕ್ಕೆ ಈ ವಿಮಾನ ಕಾರಣ. ದೂರದಲ್ಲಿ ಹಾರುವ ವಿಮಾನದ ಶಬ್ದ ಮತ್ತು ನೋಟ ಅವರನ್ನು ಸಂತಸವಾಗಿಟ್ಟಿರುತ್ತದೆ, ಆದರೆ ಇದೆ ವಿಮಾನ ಅವರ ಜೀವನದಲ್ಲಿ ಹಲವು ತಿರುವುಗಳಿಗೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಈ ವಿಮಾನ ಜೋಕರ್ ಆಗಿಯೂ, ಉಡುಗೊರೆಯಾಗಿಯೂ" ಕಾಣಿಸಿಕೊಂಡಿದೆ ಎನ್ನುತ್ತಾರೆ ರವೀಂದ್ರನಾಥ್. 
ಈ ವಿಮಾನ ಮಾದರಿಯನ್ನು ಸಿನೆಮಾದ ಜೊತೆಗೆ ಸಿನಿಮಾಮಂದಿರಗಳಲ್ಲಿ ಪ್ರದರ್ಶನಕ್ಕೆ ಇಡಲಾಗುವುದಂತೆ. ಮೈಸೂರಿನಲ್ಲಿ ಈ ಮಾದರಿಗಳು ಉತ್ಪಾದನೆಯಾಗುತ್ತಿದ್ದು, ನಗರ ಸಿನಿಮಾಮಂದಿರಗಳಿಗೆ ಶೀಘ್ರದಲ್ಲೇ ಬರಲಿವೆ. 
ವಿಖ್ಯಾತ್ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಪುಷ್ಪಕ ವಿಮಾನ' ೨೦೧೭ ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ರಚಿತಾ ರಾಮ್ ಕೂಡ ನಟಿಸಿದ್ದು, ಜೂಹಿ ಚಾವ್ಲಾ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದು, ಭುವನ್ ಗೌಡ ಅವರ ಛಾಯಾಗ್ರಹಣ ಸಿನೆಮಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?