ಸ್ವಾತಿ ಕೊಂಡೆ-ಅವಿನಾಶ್ 
ಸಿನಿಮಾ ಸುದ್ದಿ

ವೆನಿಲ್ಲಾ: ಜಾಗತಿಕ ಮಾಫಿಯಾ ಬಗ್ಗೆ ನಿಗೂಢ ಸಿನೆಮಾ!

ನಿರ್ದೇಶಕ ಜಯತೀರ್ಥ ಅವರು 'ಬ್ಯೂಟಿಫುಲ್ ಮನಸುಗಳು' ಸಿನೆಮಾ ಮಾಡಿ ಮುಗಿಸಿದ್ದು, 'ಯು/ಎ ಪ್ರಮಾಣಪತ್ರ'ದೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ. ಏತನ್ಮಧ್ಯೆ ನಿರ್ದೇಶಕ ತಮ್ಮ ಮುಂದಿನ ಸಿನೆಮಾಗೆ

ಬೆಂಗಳೂರು: ನಿರ್ದೇಶಕ ಜಯತೀರ್ಥ ಅವರು 'ಬ್ಯೂಟಿಫುಲ್ ಮನಸುಗಳು' ಸಿನೆಮಾ ಮಾಡಿ ಮುಗಿಸಿದ್ದು, 'ಯು/ಎ ಪ್ರಮಾಣಪತ್ರ'ದೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ. ಏತನ್ಮಧ್ಯೆ ನಿರ್ದೇಶಕ ತಮ್ಮ ಮುಂದಿನ ಸಿನೆಮಾಗೆ ಅಣಿಯಾಗಿದ್ದಾರೆ. 'ವೆನಿಲ್ಲಾ' ಎಂಬ ಶೀರ್ಷಿಕೆ ಹೊತ್ತ ಈ ಸಿನೆಮಾ, ನಿಗೂಢ ಥ್ರಿಲ್ಲರ್ ಆಗಿದ್ದು ಹೊಸ ಮುಖಗಳನ್ನು ಪರಿಚಯಿಸಲಿದೆ. 
ತಮ್ಮ ಮುಂದಿನ ಚಿತ್ರವನ್ನು ಧೃಢೀಕರಿಸುವ ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತ ಮತ್ತು ನಿರ್ದೇಶಕ "ಎಲ್ಲ ನಿರ್ದೇಶಕರಂತೆ, ನಾನು ಕೂಡ ಜನ ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ನೋಡಲು ಕಾಯುತ್ತಿದ್ದೇನೆ. ಜನವರಿಯಲ್ಲಿ ಇದು ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ (ನೋಟು ಹಿಂಪಡೆತ ನಿರ್ಧಾರದ ನಂತರ). ನಂತರ ನಾವು 'ಬ್ಯೂಟಿಫುಲ್ ಮನಸುಗಳು' ಸಿನೆಮಾದ ಬಿಡುಗಡೆ ದಿನಾಂಕವನ್ನು ನಿಶ್ಚಯಿಸಲಿದ್ದೇವೆ. ಈಮಧ್ಯೆ ನಾನು ಮುಂದಿನ ಚಿತ್ರ 'ವೆನಿಲ್ಲಾ' ಪ್ರಾರಂಭಿಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜನವರಿ ೧ ರಂದು ಅಧಿಕೃತ ಘೋಷಣೆ ಮಾಡಲಿದ್ದೇನೆ" ಎನ್ನುವ ಜಯತೀರ್ಥ ಶೀರ್ಷಿಕೆಗೂ, ಗಿಡ ಮತ್ತು ಸ್ವಾದಕ್ಕೂ ಸಂಬಂಧವಿದೆ ಎನ್ನುತ್ತಾರೆ. 
"ಈ ವಿಷಯ ನೈಜ ಕಥೆಗೆ ಸಂಬಂಧಿಸಿದ್ದು ಮತ್ತು ಇದು ಪರಿಸರವನ್ನು ಹಾಳುಗೆಡವುತ್ತಿರುವ ಜಾಗತಿಕ ಮಾಫಿಯಾಗೆ ಸಂಬಂಧಿಸಿದ್ದು. ಇದರಲ್ಲಿ ಪ್ರೀತಿ ಇರಲಿದೆ ಮತ್ತು ಥ್ರಿಲ್ ಕೂಡ" ಎಂದು ಜಯತೀರ್ಥ ವಿವರಿಸುತ್ತಾರೆ.
ಈ ಸಿನೆಮಾಗೆ ಅವರು ಹೊಸ ಮುಖಗಳಾದ ಅವಿನಾಶ್ ಮತ್ತು ಸ್ವಾತಿ ಕೊಂಡೆ ಇವರನ್ನು ಆಯ್ಕೆ ಮಾಡಿದ್ದು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಅವಿನಾಶ್ ರಂಗಭೂಮಿ ಹಿನ್ನಲೆಯಿಂದ ಬಂದವರು ಮತ್ತು 'ಬ್ಯೂಟಿಫುಲ್ ಮನಸುಗಳು' ಸಮಯದಲ್ಲಿ ಸ್ವಾತಿ ಅವರನ್ನು ಆಡಿಷನ್ ಮಾಡಲಾಗಿತ್ತು. ಇಬ್ಬರಿಗೂ ನಾನು ತರಬೇತಿ ನೀಡಿದ್ದೇನೆ ಮತ್ತು ಕ್ಯಾಮರಾ ಎದುರಿಸಲು ಸಿದ್ಧರಾಗಿದ್ದಾರೆ" ಎನ್ನುತ್ತಾರೆ ನಿರ್ದೇಶಕ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT