'ಯಶೋಗಾಥೆ' ಸಿನೆಮಾದಲ್ಲಿ ಮಾನಸಾ ಜೋಶಿ 
ಸಿನಿಮಾ ಸುದ್ದಿ

'ಯಶೋಗಾಥೆ' ಹೊಸ ಅಲೆಯ ಹಾರರ್ ಸಿನೆಮಾ: ವಿನೋದ್ ಆರ್ ರಾಜ್

ಇದೇ ತಿಂಗಳು ಹೊಸ ಅಲೆಯ ಹಾರರ್ ಸಿನೆಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ನಿಗೂಢ, ಭಯ, ಸ್ವಾತಂತ್ರ್ಯಪೂರ್ವದ ಕಥೆಯುಳ್ಳ 'ಯಶೋಗಾಥೆ'ಯ

ಬೆಂಗಳೂರು: ಇದೇ ತಿಂಗಳು ಹೊಸ ಅಲೆಯ ಹಾರರ್ ಸಿನೆಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ನಿಗೂಢ, ಭಯ, ಸ್ವಾತಂತ್ರ್ಯಪೂರ್ವದ ಕಥೆಯುಳ್ಳ 'ಯಶೋಗಾಥೆ'ಯ ನಿರ್ದೇಶಕ ವಿನೋದ್ ಜೆ ರಾಜ್.

ಈ ಸಿನೆಮಾದಲ್ಲಿ ಕಲ್ಪನೆ ಮತ್ತು ವಾಸ್ತವ ಒಂದಕ್ಕೊಂದು ಬೆಸೆದುಕೊಂಡಿದೆ ಎನ್ನುವ ನಿರ್ದೇಶಕ "ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಬರೀ ಮಹಿಳೆಯರಿರುವ ಕುಟುಂಬದ ಉಳಿವಿನ ಕಥಾಹಂದರವಿದೆ. ಆ ಕುಟುಂಬಕ್ಕೆ ಬಾಲಕನೊಬ್ಬ ಬಂದಾಗ ಆ ಮನೆಯವರು ಅನುಭವಿಸುವ ಅಲೌಖಿಕ ಭಯಾನಕ ಅನುಭವಗಳೇ ಕಥೆಯ ಜೀವಾಳ. ಇದಕ್ಕೆ ಉತ್ತರ ಕಂಡುಹಿಡಿಯಲು ಬಹಳ ನಿಗೂಢವಾಗಿರುವ ರಹಸ್ಯದ ಅನಾವರಣವಾಗುತ್ತದೆ" ಎನ್ನುತ್ತಾರೆ ವಿನೋದ್.

ಹಿಂದೆ ನಿರ್ದೇಶಕ ಮತ್ತು ನಿರ್ಮಾಪಕ ಹರಿ ಸುಧನ್ ತಿವಾರಿ ಕುಪ್ಪಂನಲ್ಲಿ ಸಾಕ್ಷ್ಯಚಿತ್ರವೊಂದನ್ನು ಚಿತ್ರೀಕರಣ ಮಾಡುವಾಗ ಮಹಿಳೆಯೊಬ್ಬರನ್ನು ಭೇಟಿ ಮಾಡಿದ ಫಲವೇ 'ಯಶೋಗಾಥೆ' ಚಿತ್ರದ ಕಥೆಯಂತೆ. "ಅವರು ತಮ್ಮ ಹಿಂದಿನ ಜೀವನದ ಕಥೆಯನ್ನು ವಿವರಿಸಿದರು. ಅದು ಬಹಳ ನಿಗೂಢವಾಗಿತ್ತು. ಆ ಕಥೆ ನಿರ್ಮಾಪಕ ಮತ್ತು ನನನ್ನು ಬಹಳ ಸೆಳೆಯಿತು. ಆದುದರಿಂದ ನಮ್ಮ ಸಂಶೋಧನೆಗೆ ಹಚ್ಚಿಕೊಂಡು ಬರವಣಿಗೆ ಮುಗಿಸಿ ೨೦೧೫ರಲ್ಲಿ ಚಿತ್ರೀಕರಣವನ್ನೂ ಮುಗಿಸಿದೆವು" ಎನ್ನುತ್ತಾರೆ ವಿನೋದ್.

ಕ್ಯಾಮರಾದ ಮುಂದೆ ಮತ್ತು ಹಿಂದೆ ದುಡಿದವರೆಲ್ಲ ಹೊಸ ಮುಖಗಳೇ ಎನ್ನುವ ವಿನೋದ್ "ಸಾಮಾನ್ಯವಾಗಿ ಕನ್ನಡ ಚಿತ್ರಗಳು ನಿಭಾಯಿಸುವ ಒಂದು ರೀತಿಯ ಸಿನೆಮಾ ಇದಲ್ಲ. ವಿಭಿನ್ನವಾಗಿರುವ ಈ ಸಿನೆಮಾಗೆ ಜೀವಂತಿಕೆ ಮೂಡಿಸಲು ರವಿವರ್ಮ ಕಲಾಕೃತಿಗಳನ್ನು ಬಳಸಿದ್ದೇವೆ" ಎನ್ನುತ್ತಾರೆ.

ಮಾನಸಾ ಜೋಶಿ, ಪವಿತ್ರಾ ಬೆಳ್ಳಿಯಪ್ಪ, ಲೋಹಿತ್ ಸುರಿಯಾ ಮುಂತಾದವರು ಸಿನೆಮಾದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT