ಶಿವರಾಜ್ ಕುಮಾರ್ ಮತ್ತು ಪರಿಣಿತ ಬೆಳಗೆರೆ 
ಸಿನಿಮಾ ಸುದ್ದಿ

ಶಿವಣ್ಣ ಪುತ್ರಿಯಾಗಿ ಸ್ಯಾಂಡಲ್ ವುಡ್ ಗೆ ಶ್ರೀನಗರ ಕಿಟ್ಟಿ ಭಾವನಾ ಬೆಳೆಗೆರೆ ಪುತ್ರಿ ಎಂಟ್ರಿ

ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳೆಗೆರೆ ಪುತ್ರಿ ಪರಿಣಿತ ಬೆಳಗೆರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ....

ಬೆಂಗಳೂರು: ತನ್ನ ಮೂರನೇ ವರ್ಷದಲ್ಲೇ ವಿಜ್ಞಾನಿ ಅಥವಾ ಗಗನಯಾತ್ರಿ ಆಗ ಬೇಕೆಂಬ ಬಯಕೆ ಹೊಂದಿದ್ದ ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳೆಗೆರೆ ಪುತ್ರಿ ಪರಿಣಿತ ಬೆಳಗೆರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ.
 
ಲೀಡರ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಪುತ್ರಿಯ ಪಾತ್ರವನ್ನು ಪರಿಣಿತ ನಿರ್ವಹಿಸಲಿದ್ದಾರೆ. ಅಂಡಮಾನ್ ಚಿತ್ರ ಬಳಿಕ ಮತ್ತೆ ತಂದೆ ಮಗಳ ಬಾಂಧವ್ಯದ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಬಹುಭಾಷಾ ನಟಿ ಕನ್ನಡತಿ ಪ್ರಣೀತ ಈ ಚಿತ್ರದ ನಾಯಕಿಯಾಗಿದ್ದಾರೆ.

ಸಹನಾ ಮೂರ್ತಿ ನಿರ್ದೇಶನದ ಈ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸುತ್ತಿದ್ದಾರೆ. ತಮ್ಮ ಮಗಳನ್ನು ಚಿತ್ರರಂಗಕ್ಕೆ ತರುವ ಉದ್ದೇಶ ಇರಲಿಲ್ಲ,  ಬಹಳ ಹಿಂದೆಯೇ ಆಕೆಗೆ ನಟಿಸಲು ಅವಕಾಶ ಬಂದಿದ್ದವು, ಆದರೆ ನಾವೇ ಬೇಡ ಎಂದು ಹಿಂದೆ ಸರಿದಿದ್ದೆವು. ಆದರೆ ಹಣೆ ಬರಹು  ಮತ್ತೆ ಆಕೆಯನ್ನು ಸಿನಿಮಾ ಕ್ಷೇತ್ರಕ್ಕೆ ಕರೆದೊಯ್ಯುತ್ತಿದೆ. ಆದ್ದರಿಂದ ಪರಿಣಿತಳನ್ನು ಸಿನಿಮಾದಿಂದ ದೂರ ಸರಿಸಲು ಇಷ್ಟವಿಲ್ಲ ಎಂದು ಪರಿಣಿತ ತಾಯಿ ಭಾವನಾ ಬೆಳೆಗೆರೆ ಹೇಳಿದ್ದಾರೆ.

ಕಾಶ್ಮೀರದಲ್ಲಿ ಶೂಟಿಂಗ್ ನಡೆಯುತ್ತದೆ ಎಂಬ ಕಾರಣದಿಂದ ಪರಿಣಿತ ಚಿತ್ರದಲ್ಲಿ ನಡಿಸಲು ಒಪ್ಪಿಕೊಂಡಿದ್ದಾಳೆ. ಆಫರ್ ಬಂದಾಗ ನಾವು ಈ ಸಂಬಂಧ ಆಕೆ ಜೊತೆ ಮಾತನಾಡಿದೆವು. ಶಿವಣ್ಣ ಜೊತೆ ಅಭಿನಯಿಸಲು ಪರಿಣಿತ ತುಂಬಾ ಎಕ್ಸೈಟ್ ಆದಳು. ಶಿವಣ್ಣ ಇರುವ ಕಾರಣ ನಾನು ಕೂಡ ಒಪ್ಪಿಕೊಂಡೆ ಎಂದು ಭಾವನಾ ತಿಳಿಸಿದ್ದಾರೆ.

ಪರಿಣಿತಗೆ ಪುಸ್ತಕದ ಮೇಲೆ ಪ್ರೀತಿ ಹೆಚ್ಚು, ಆಕೆ ಹಾಡು ನೃತ್ಯ ಎಲ್ಲಾ ಮಾಡುತ್ತಾಳೆ. 1ನೇ ತರಗತಿಯಲ್ಲಿ ಅಭ್ಯಾಸ  ಮಾಡುತ್ತಿರುವ ಪರಿಣಿತ ತುಂಬಾ ಬುದ್ದಿವಂತೆ, ಅವಳ ವಿದ್ಯಾಭ್ಯಾಸದ ಬಗ್ಗೆ ನಮಗೆ ಚಿಂತೆಯಿಲ್ಲ ಎಂದು ಭಾವನಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT