ಕಬಾಲಿ ಚಿತ್ರದಲ್ಲಿ ರಜನಿಕಾಂತ್ (ಸಂಗ್ರಹ) 
ಸಿನಿಮಾ ಸುದ್ದಿ

ಕಬಾಲಿ ಮೇನಿಯಾ: ಏರ್ ಟೆಲ್ ಮೂಲಕ ರಜನಿಕಾಂತ್ ಗೆ ಸಂದೇಶ ಕಳುಹಿಸಲು ಅಭಿಮಾನಿಗಳಿಗೆ ಅವಕಾಶ

ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಏರ್ ಏಷಿಯಾ ವಿಮಾನ...

ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಏರ್ ಏಷಿಯಾ ವಿಮಾನ ಕಬಾಲಿ ಚಿತ್ರದ ಪೋಸ್ಟರ್ ನ್ನು ವಿಮಾನದಲ್ಲಿ ಅಂಟಿಸಿ ಅನಾವರಣಗೊಳಿಸಿತ್ತು. ಕಬಾಲಿ ಚಿತ್ರ ಬಿಡುಗಡೆ ದಿನ ಚೆನ್ನೈಗೆ ಪ್ರಯಾಣಿಕರಿಗೆ ರಿಯಾಯಿತಿಯಲ್ಲಿ ವಿಮಾನ ಹಾರಾಟವನ್ನೂ ನೀಡಲಿದೆ.
ಇದೀಗ ಭಾರ್ತಿ ಏರ್ ಟೆಲ್ ಕಂಪೆನಿ ಸರದಿ. ಚಿತ್ರ ನಿರ್ಮಾಪಕರ ಜೊತೆ ಸಹಭಾಗಿತ್ವ ಮಾಡಿಕೊಂಡಿರುವುದಾಗಿ ಅದು ಘೋಷಿಸಿಕೊಂಡಿದೆ. ಇದರ ಅಂಗವಾಗಿ ಗ್ರಾಹಕರಿಗೆ ವಿಶೇಷ ರಿಚಾರ್ಜ್ ಕೂಪನ್ ನ್ನು ನೀಡಲಿದೆ. ಅದರಲ್ಲಿ ಅನಿಯಮಿತ 2ಜಿ ಇಂಟರ್ನೆಟ್, ಕಬಾಲಿ ಹಲೋ ಟ್ಯೂನ್ ಮತ್ತು ಕಬಾಲಿ ಬ್ರಾಂಡೆಡ್ ಸಿಮ್ ಕಾರ್ಡ್ ಪ್ಯಾಕ್ ಸಿಗಲಿದೆ. ಇದನ್ನು ಬಳಸಿದವರು ವಿಶೇಷ ಸಂದೇಶ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಗೆ ನೇರವಾಗಿ ಶುಭಾಶಯ ತಿಳಿಸಬಹುದು.
ಗ್ರಾಹಕರಿಂದ ಬಂದ ಎಸ್ಎಂಎಸ್ ಗಳನ್ನು  ಪುಸ್ತಕವೊಂದರಲ್ಲಿ 
ಕ್ರೋಢೀಕರಿಸಿ ರಜನಿಕಾಂತ್ ಅವರಿಗೆ ನೆನಪಿನ ಕಾಣಿಕೆಯಾಗಿ ಏರ್ ಟೆಲ್ ಕಂಪೆನಿ ನೀಡಲಿದೆ. 
ಏರ್ ಟೆಲ್ ಕಂಪೆನಿ ಇದರ ಜೊತೆಗೆ 3ಡಿ ಹೊಲೊಗ್ರಾಫಿಕ್ ಕಬಾಲಿ ವ್ಯಾನ್ ನ್ನು ಬಿಡುಗಡೆ ಮಾಡಲಿದ್ದು, ಅದರಲ್ಲಿ ಸಿನಿಮಾದ ಟೀಸರ್ ಮತ್ತು ಕಲಾವಿದರು ಮಾತನಾಡಿದ ಬೈಟ್ ಗಳನ್ನು ಒಳಗೊಂಡ ವ್ಯಾನು ತಮಿಳು ನಾಡಿನಾದ್ಯಂತ ಸಂಚರಿಸಲಿದೆ. 
ಚಿತ್ರ ಬಿಡುಗಡೆಯಾಗುವ ಒಂದು ವಾರಕ್ಕೆ ಮುಂಚೆ 3ಡಿ ಹೊಲೊಗ್ರಾಫಿಕ್ ಕಬಾಲಿ ವ್ಯಾನ್ ತನ್ನ ಪ್ರಯಾಣ ಆರಂಭಿಸಲಿದ್ದು, ಒಂದು ತಿಂಗಳವರೆಗೆ ಸಾಗಲಿದೆ. ''ರಜನಿಗೆ ಶುಭಾಶಯ'' ಪ್ರಚಾರವನ್ನು ರಾಜ್ಯಾದ್ಯಂತ ಕಬಾಲಿ ಹೋರ್ಡಿಂಗ್ಸ್ ಗಳ ಮೂಲಕ ಮತ್ತು ರೇಡಿಯೋ ಕೇಂದ್ರಗಳಲ್ಲಿ ಮಾಡಲು ಭಾರ್ತಿ ಏರ್ ಟೆಲ್ ಕಂಪೆನಿ ಯೋಜನೆ ಹಾಕಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT