ಕಬಾಲಿ ಚಿತ್ರದಲ್ಲಿ ರಜನಿಕಾಂತ್ (ಸಂಗ್ರಹ) 
ಸಿನಿಮಾ ಸುದ್ದಿ

ಕಬಾಲಿ ಮೇನಿಯಾ: ಏರ್ ಟೆಲ್ ಮೂಲಕ ರಜನಿಕಾಂತ್ ಗೆ ಸಂದೇಶ ಕಳುಹಿಸಲು ಅಭಿಮಾನಿಗಳಿಗೆ ಅವಕಾಶ

ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಏರ್ ಏಷಿಯಾ ವಿಮಾನ...

ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಏರ್ ಏಷಿಯಾ ವಿಮಾನ ಕಬಾಲಿ ಚಿತ್ರದ ಪೋಸ್ಟರ್ ನ್ನು ವಿಮಾನದಲ್ಲಿ ಅಂಟಿಸಿ ಅನಾವರಣಗೊಳಿಸಿತ್ತು. ಕಬಾಲಿ ಚಿತ್ರ ಬಿಡುಗಡೆ ದಿನ ಚೆನ್ನೈಗೆ ಪ್ರಯಾಣಿಕರಿಗೆ ರಿಯಾಯಿತಿಯಲ್ಲಿ ವಿಮಾನ ಹಾರಾಟವನ್ನೂ ನೀಡಲಿದೆ.
ಇದೀಗ ಭಾರ್ತಿ ಏರ್ ಟೆಲ್ ಕಂಪೆನಿ ಸರದಿ. ಚಿತ್ರ ನಿರ್ಮಾಪಕರ ಜೊತೆ ಸಹಭಾಗಿತ್ವ ಮಾಡಿಕೊಂಡಿರುವುದಾಗಿ ಅದು ಘೋಷಿಸಿಕೊಂಡಿದೆ. ಇದರ ಅಂಗವಾಗಿ ಗ್ರಾಹಕರಿಗೆ ವಿಶೇಷ ರಿಚಾರ್ಜ್ ಕೂಪನ್ ನ್ನು ನೀಡಲಿದೆ. ಅದರಲ್ಲಿ ಅನಿಯಮಿತ 2ಜಿ ಇಂಟರ್ನೆಟ್, ಕಬಾಲಿ ಹಲೋ ಟ್ಯೂನ್ ಮತ್ತು ಕಬಾಲಿ ಬ್ರಾಂಡೆಡ್ ಸಿಮ್ ಕಾರ್ಡ್ ಪ್ಯಾಕ್ ಸಿಗಲಿದೆ. ಇದನ್ನು ಬಳಸಿದವರು ವಿಶೇಷ ಸಂದೇಶ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಗೆ ನೇರವಾಗಿ ಶುಭಾಶಯ ತಿಳಿಸಬಹುದು.
ಗ್ರಾಹಕರಿಂದ ಬಂದ ಎಸ್ಎಂಎಸ್ ಗಳನ್ನು  ಪುಸ್ತಕವೊಂದರಲ್ಲಿ 
ಕ್ರೋಢೀಕರಿಸಿ ರಜನಿಕಾಂತ್ ಅವರಿಗೆ ನೆನಪಿನ ಕಾಣಿಕೆಯಾಗಿ ಏರ್ ಟೆಲ್ ಕಂಪೆನಿ ನೀಡಲಿದೆ. 
ಏರ್ ಟೆಲ್ ಕಂಪೆನಿ ಇದರ ಜೊತೆಗೆ 3ಡಿ ಹೊಲೊಗ್ರಾಫಿಕ್ ಕಬಾಲಿ ವ್ಯಾನ್ ನ್ನು ಬಿಡುಗಡೆ ಮಾಡಲಿದ್ದು, ಅದರಲ್ಲಿ ಸಿನಿಮಾದ ಟೀಸರ್ ಮತ್ತು ಕಲಾವಿದರು ಮಾತನಾಡಿದ ಬೈಟ್ ಗಳನ್ನು ಒಳಗೊಂಡ ವ್ಯಾನು ತಮಿಳು ನಾಡಿನಾದ್ಯಂತ ಸಂಚರಿಸಲಿದೆ. 
ಚಿತ್ರ ಬಿಡುಗಡೆಯಾಗುವ ಒಂದು ವಾರಕ್ಕೆ ಮುಂಚೆ 3ಡಿ ಹೊಲೊಗ್ರಾಫಿಕ್ ಕಬಾಲಿ ವ್ಯಾನ್ ತನ್ನ ಪ್ರಯಾಣ ಆರಂಭಿಸಲಿದ್ದು, ಒಂದು ತಿಂಗಳವರೆಗೆ ಸಾಗಲಿದೆ. ''ರಜನಿಗೆ ಶುಭಾಶಯ'' ಪ್ರಚಾರವನ್ನು ರಾಜ್ಯಾದ್ಯಂತ ಕಬಾಲಿ ಹೋರ್ಡಿಂಗ್ಸ್ ಗಳ ಮೂಲಕ ಮತ್ತು ರೇಡಿಯೋ ಕೇಂದ್ರಗಳಲ್ಲಿ ಮಾಡಲು ಭಾರ್ತಿ ಏರ್ ಟೆಲ್ ಕಂಪೆನಿ ಯೋಜನೆ ಹಾಕಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಾಯುಕ್ತ ದಾಳಿ: ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದು 18.2 ಕೋಟಿ ರೂ. ಅಕ್ರಮ ಆಸ್ತಿ!

ಕೇಂದ್ರದ ಆದೇಶವನ್ನೇ ಧಿಕ್ಕರಿಸಿದ ಕೇರಳ: IFFK ಯಲ್ಲಿ ನಿರ್ಬಂಧಿತ ಎಲ್ಲಾ ಚಲನಚಿತ್ರಗಳನ್ನು ಪ್ರದರ್ಶಿಸಲು ಆದೇಶ!

ಕಾಂಗ್ರೆಸ್ ಸಂಸದರಿಗೆ 'ವಿಪ್' ಜಾರಿ: ಮುಂದಿನ ಮೂರು ದಿನ ಲೋಕಸಭೆಯಲ್ಲಿ ಕಡ್ಡಾಯ ಹಾಜರಿಗೆ ಸೂಚನೆ

2047 ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ; ತಂತ್ರಜ್ಞಾನ, ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ: ರಾಷ್ಟ್ರಪತಿ ಮುರ್ಮು

Hijab ವಿವಾದ: 'ಅಪಾರ್ಥ ಬೇಡ.. ನಿತೀಶ್ ಕುಮಾರ್ ತಂದೆ ಸ್ವರೂಪ'; ಬಿಹಾರ ಮುಸ್ಲಿಂ ಸಚಿವ ಸ್ಪಷ್ಟನೆ

SCROLL FOR NEXT