ಬೆಂಗಳೂರು: ಸದ್ಯಕ್ಕೆ ಶಿವಕಾರ್ತಿಕೇಯನ್ ನಟನೆಯ 'ರಜನಿ ಮುರುಗನ್' ಸಿನೆಮಾದ ರಿಮೇಕ್ 'ರಾಜ್-ವಿಷ್ಣು' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಶರಣ್ ಮತ್ತೊಂದು ತಮಿಳು ಸಿನೆಮಾ 'ನಾನುಂ ರೌಡಿ ಧಾನ್' ರಿಮೇಕ್ ನಲ್ಲೂ ನಟಿಸಲಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ.
ಈ ಸಿನೆಮಾದ ರಿಮೇಕ್ ಹಕ್ಕುಗಳನ್ನು ಕೊಂಡಿರುವ ನಿರ್ಮಾಣ ಸಂಸ್ಥೆ ಶರಣ್ ಅವರನ್ನು ಮುಖ್ಯಪಾತ್ರದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ತೋರಿದೆ. ಅವರು ನಟನನ್ನು ಕೇಳಿಕೊಂಡಿದ್ದು ನಟ ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಈ ನಿರ್ಮಾಣ ಸಂಸ್ಥೆ ನಿರ್ದೇಶಕನ ಹುಡುಕಾಟದಲ್ಲಿದೆ.
ಮೂಲ 'ನಾನುಂ ರೌಡಿ ಧಾನ್' ಸಿನೆಮಾದ ನಿರ್ದೇಶಕ ವಿಜ್ಞೇಶ್ ಶಿವಂ ಮತ್ತು ವಂಡರ್ಬಾರ್ ಬ್ಯಾನರ್ ಅಡಿ ಇದನ್ನು ನಟ-ನಿರ್ಮಾಪಕ ಧನುಶ್ ನಿರ್ಮಿಸಿದ್ದರು. ವಿಜಯ್ ಸೇತುಪತಿ ಮತ್ತು ನಯನತಾರಾ ನಟಿಸಿದ್ದ ಈ ಸಿನೆಮಾ ಅಕ್ಟೊಬರ್ 2015 ರಲ್ಲಿ ಬಿಡುಗಡೆಯಾಗಿತ್ತು.
ಇನ್ನು ಅಧಿಕೃತ ಘೋಷಣೆ ಆಗಬೇಕಿರುವುದರಿಂದ 'ರಾಜ್-ವಿಷ್ಣು' ನಂತರ ಶರಣ್ ಅವರ ಮುಂದಿನ ಚಿತ್ರ ಇದಾಗಲಿದೆಯೇ ಎಂಬುದನ್ನು ಕಾಡು ನೋಡಬೇಕಿದೆ.
ಈಮಧ್ಯೆ ಶರಣ್ ಮತ್ತು ಮಯೂರಿ ನಟನೆಯ 'ನಟರಾಜ ಸರ್ವಿಸ್' ಸಿನೆಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ ನಟ. ಪುನೀತ್ ರಾಜಕುಮಾರ್ ಅರ್ಪಿಸಿ, ಎನ್ ಎಸ್ ರಾಜಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಸಿನೆಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos