ನಟಿ ಶಾನ್ವಿ ಶ್ರೀವಾಸ್ತವ 
ಸಿನಿಮಾ ಸುದ್ದಿ

ಕನ್ನಡ ಚಿತ್ರೋದ್ಯಮದಲ್ಲಿ ಶಾನ್ವಿ ಶೈನಿಂಗ್!

ಈ ವರ್ಷ ಕನ್ನಡ ಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಮಿಂಚಿದ ನಟಿ ಶಾನ್ವಿ ಶ್ರೀವಾಸ್ತವ ಅವರೇ ಇರಬೇಕು. ಎರಡು ಹಿಟ್ ಚಿತ್ರಗಳು, ಹಲವು ಸ್ಟಾರ್ ನಂತರ ಜೊತೆಗೆ ಕೆಲಸ ಹೀಗೆ ಈ ವರ್ಷ ಶಾನ್ವಿ

ಬೆಂಗಳೂರು: ಈ ವರ್ಷ ಕನ್ನಡ ಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಮಿಂಚಿದ ನಟಿ ಶಾನ್ವಿ ಶ್ರೀವಾಸ್ತವ ಅವರೇ ಇರಬೇಕು. ಎರಡು ಹಿಟ್ ಚಿತ್ರಗಳು, ಹಲವು ಸ್ಟಾರ್ ನಂತರ ಜೊತೆಗೆ ಕೆಲಸ ಹೀಗೆ ಈ ವರ್ಷ ಶಾನ್ವಿ ಅವರಿಗೆ ಕಾರ್ಯನಿರತವಾಗಿತ್ತು.
ಕನ್ನಡ ಚಿತ್ರೋದ್ಯಮದ ನಿರ್ಮಾಪಕ-ನಿರ್ದೇಶಕರ ಕಣ್ಮಣಿಯಾಗಿ ರೂಪುಗೊಂಡಿರುವ ಶಾನ್ವಿ ಈ ವರ್ಷ ನಾಲ್ಕನೇ ಯೋಜನೆಗೆ ಸಹಿ ಹಾಕಲಿದ್ದಾರೆ. ಮೂಲಗಳ ಪ್ರಕಾರ ರಂಗಿತರಂಗ ನಿರ್ಮಾಪಕ ಎಚ್ ಕೆ ಪ್ರಕಾಶ್ ನಿರ್ಮಿಸುತ್ತಿರುವ ಸಚಿನ್ ಅವರ ಚೊಚ್ಚಲ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಎದುರು ಶಾನ್ವಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. 
'ಲವ್ಲಿ' ಎಂಬ ತೆಲುಗು ಸಿನೆಮಾದ ಮೂಲಕ ಶಾನ್ವಿ 2012 ರಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು. ಮೂರೂ ವರ್ಷಗಳಲ್ಲಿ ಅವರು ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟು ಏಳು ಚಿತ್ರಗಳ ಭಾಗವಾಗಿದ್ದಾರೆ. 2014 ರಲ್ಲಿ ಕನ್ನಡದ ಕಾಮಿಡಿ-ಹಾರರ್ ಚಿತ್ರ 'ಚಂದ್ರಲೇಖ'ದ ಮೂಲಕ ದೆವ್ವದ ಪಾತ್ರದಲ್ಲಿ ಕನ್ನಡ ಚಿತ್ರೋದ್ಯಮ ಪ್ರವೇಶಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಅವರ ಎರಡನೇ ಚಿತ್ರ ಯಶ್ ಎದುರು ನಟಿಸಿದ್ದ 'ಮಾಸ್ಟರ್ ಪೀಸ್' ಯಶಸ್ವಿ ಚಿತ್ರ ಎಂದೇ ಬಿಂಬಿಸಲಾಗಿತ್ತು. 
ಈಗ ಸದ್ಯಕ್ಕೆ 'ಕಂಠಿ' ಖ್ಯಾತಿಯ ಭರತ್ ನಿರ್ದೇಶಿಸುತ್ತಿರುವ 'ಸಾಹೇಬ' ಸಿನೆಮಾದಲ್ಲಿ ನಟ ರವಿಚಂದ್ರನ್ ಪುತ್ರ ಮನೋರಂಜನ್ ಅವರ ಎದುರು ನಟಿಸುತ್ತಿದ್ದಾರೆ. ಹಾಗೆಯೇ ಗಣೇಶ್ ನಟನೆಯ 'ಗಂಡು ಎಂದರೆ ಗಂಡು' ಸಿನಿಮಾದಲ್ಲಿಯೂ ಕೂಡ. ಇದು ತೆಲುಗಿನ ರಿಮೇಕ್ ಆಗಿದ್ದು, ರಮೇಶ್ ಅರವಿಂದ್ ನಿರ್ದೇಶನವಿದೆ. 
ಜಯಣ್ಣ ಕಂಬೈನ್ಸ್ ನ ಮತ್ತೊಂದು ಚಿತ್ರ ಶ್ರೀಮುರಳಿ ಅವರ 'ಮಫ್ತಿ'ಯಲ್ಲಿ ಕೂಡ ನಟಿಸಲಿದ್ದಾರೆ. ಆಗಸ್ಟ್ 18 ಕ್ಕೆ ಚಿತ್ರತಂಡವನ್ನು ಸೇರಲಿದ್ದಾರೆ ಎಂದು ತಿಳಿದುಬಂದಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT