ನಟಿ ದೀಕ್ಷಾ ಸೇಥ್ 
ಸಿನಿಮಾ ಸುದ್ದಿ

ಕನ್ನಡ ಭಾಷೆಗೆ ನಾನು ಅನ್ಯಳೆಂಬ ಭಾವನೆಯೇ ಮೂಡಲಿಲ್ಲ: ಜಗ್ಗುದಾದಾ ನಟಿ

'ಜಗ್ಗುದಾದಾ' ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿರುವ ದಕ್ಷಿಣ ಭಾರತದ ನಟಿ ದೀಕ್ಷಾ ಸೇಥ್ ಅವರಿಗೆ ಇಲ್ಲಿನ ಭಾಷೆ ತೊಡಕು ಎನ್ನಿಸಲೇ ಇಲ್ಲವಂತೆ, ಬದಲಾಗಿ ಆತ್ಮವಿಶ್ವಾಸದಿಂದ

ಬೆಂಗಳೂರು: 'ಜಗ್ಗುದಾದಾ' ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿರುವ ದಕ್ಷಿಣ ಭಾರತದ ನಟಿ ದೀಕ್ಷಾ ಸೇಥ್ ಅವರಿಗೆ ಇಲ್ಲಿನ ಭಾಷೆ ತೊಡಕು ಎನ್ನಿಸಲೇ ಇಲ್ಲವಂತೆ, ಬದಲಾಗಿ ಆತ್ಮವಿಶ್ವಾಸದಿಂದ ನಟಿಸರುವ ಅವರು ತಮ್ಮ ಚೊಚ್ಚಲ ಕನ್ನಡ ಚಿತ್ರದ ಆಯ್ಕೆಯ ಬಗ್ಗೆ ಆನಂದದಿಂದಿದ್ದಾರೆ.

"'ಜಗ್ಗುದಾದಾ'ಗೂ ಮೊದಲು ನನಗೆ ಕನ್ನಡದಿಂದ ಸಾಕಷ್ಟು ಅವಕಾಶಗಳು ಒದಗಿ ಬಂದಿದ್ದವು. ಆದರೆ ಅವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಿನೆಮಾದಲ್ಲಿ ನನಗೆ ನಟಿಸಲು ಕೇಳಿಕೊಡಾಗ ಒಪ್ಪಿಕೊಂಡೆ. ಏಕೆಂದರೆ ಇದಕ್ಕೆ ಮಾಸ್ ವಿಷಯ ಇತ್ತು. ಅಲ್ಲದೆ 'ಜಗ್ಗುದಾದ' ಕೌಟುಂಬಿಕ ಕಥೆ ಮತ್ತು ಕುಟುಂಬ ಪೂರ್ತಿ ಸಿನೆಮಾ ನೋಡಿ ಆನಂದಿಸುವುದು ನನಗೆ ಇಷ್ಟ" ಎನ್ನುತ್ತಾರೆ ನಟಿ.

ನಟ ದರ್ಶನ್ ಜೊತೆಗೆ ಹೊಂದಾಣಿಕೆ ಅತಿ ಸುಲಭ ಎನ್ನುವ ನಟಿ ನಿರ್ಮಾಪಕ ಮತ್ತು ಚೊಚ್ಚಲ ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಬಗ್ಗೆಯೂ ಅಂತಹುದೇ ಅಭಿಪ್ರಾಯ ಹೊಂದಿದ್ದಾರೆ. "ಈ ಹಿಂದೆ ಸಂಕಲನಕಾರನಾಗಿದ್ದ ರಾಘವೇಂದ್ರ ಸಿನೆಮಾದ ಎಲ್ಲ ಆಯಾಮಗಳನ್ನು ಚೆನ್ನಾಗಿ ಅರಿತಿದ್ದಾರೆ, ಯಾವ ದೃಶ್ಯಗಳು ಸಿನೆಮಾಗೆ ಅವಶ್ಯಕ ಎಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಅವರು ಹೆಚ್ಚು ಸಮಯ ವ್ಯರ್ಥ ಮಾಡಲಿಲ್ಲ" ಎನ್ನುತ್ತಾರೆ ದೀಕ್ಷಾ.

"'ಜಗ್ಗುದಾದಾ' ಸೆಟ್ ನಲ್ಲಿ ನಾನು ಮೊದಲಿಗೆ ಹೊರಗಿನವಳಾಗಿದ್ದರೂ ನಂತರ ಎಲ್ಲರ ಸಹಕಾರದಿಂದ ನಾನೂ ಎಲ್ಲರಲ್ಲಿ ಒಬ್ಬಾಳಾಗಿದ್ದೆ" ಎನ್ನುತ್ತಾರೆ ನಟಿ.

'ಜಗ್ಗುದಾದ' ಜೊತೆಗೆ ಹಿಂದಿ ಸಿನೆಮಾವೊಂದರಲ್ಲಿ ನಟಿಸಿರುವ ನಟಿ ಅದರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. "'ಸಾಥ್ ಕದಮ್' ಎಂಬ ಸಿನೆಮಾದಲ್ಲಿ ನಟಿಸಿದ್ದೇನೆ. ಇದಕ್ಕೆ ಮೋಹಿತ್ ಷಾ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಮಿತ್ ಸಧ್ ನಾಯಕ ನಟ" ಎಂದು ವಿವರಿಸುತ್ತಾರೆ ದೀಕ್ಷಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT