'ಉಡ್ತಾ ಪಂಜಾಬ್' ಸಿನೆಮಾ ಪೋಸ್ಟರ್ 
ಸಿನಿಮಾ ಸುದ್ದಿ

ರಾಜಕೀಯ ಒತ್ತಡಕ್ಕೆ ಬಾಗಿದ ಸೆನ್ಸಾರ್ ಮಂಡಳಿ; 'ಉಡ್ತಾ ಪಂಜಾಬ್' ನಿಂದ ಪಂಜಾಬ್ ಹೊರಕ್ಕೆ!

'ಉಡ್ತಾ ಪಂಜಾಬ್' ನಿಂದ ಪಂಜಾಬ್ ಹೊರಬಿದ್ದರೆ ಹೇಗೆ? ರಾಜಕೀಯ ಒತ್ತಡಕ್ಕೆ ಮಣಿದಿರುವ ಸೆನ್ಸಾರ್ ಮಂಡಳಿ, ಶಾಹಿದ್ ಕಪೂರ್ ನಟನೆಯ ಈ ಸಿನೆಮಾದ ಕಥೆ ಪಂಜಾಬ್ ನಲ್ಲಿ ನಡೆಯುವುದು

ನವದೆಹಲಿ:  'ಉಡ್ತಾ ಪಂಜಾಬ್' ನಿಂದ ಪಂಜಾಬ್ ಹೊರಬಿದ್ದರೆ ಹೇಗೆ? ರಾಜಕೀಯ ಒತ್ತಡಕ್ಕೆ ಮಣಿದಿರುವ ಸೆನ್ಸಾರ್ ಮಂಡಳಿ, ಶಾಹಿದ್ ಕಪೂರ್ ನಟನೆಯ ಈ ಸಿನೆಮಾದ ಕಥೆ ಪಂಜಾಬ್ ನಲ್ಲಿ ನಡೆಯುವುದು ಬೇಡ ಎಂಬ ಅಭಿಪ್ರಾಯ ತಳೆದಿದೆ ಎನುತ್ತವೆ ಮೂಲಗಳು.

ಅಭಿಷೇಕ್ ಚೌಬೆ ನಿರ್ದೇಶನದ ಈ ಸಿನೆಮಾಗೆ ಪ್ರಮಾಣ ಪತ್ರ ನೀಡಲು ಈ ಹಿಂದೆ ಸೆನ್ಸಾರ್ ಮಂಡಳಿ ನಿರಾಕರಿಸಿದ್ದರಿಂದ ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಈಗ ಇನ್ನೂ ಕಠಿಣ ಸಲಹೆಗಳನ್ನು ನೀಡಿರುವ ಈ ಸಮಿತಿ, ಪ್ರಮಾಣ ಪತ್ರ ಬೇಕಾದರೆ, ಸಿನೆಮಾ ಕಥೆ ಪಂಜಾಬ್ ನಲ್ಲಿ ನಡೆದಿಲ್ಲ ಎಂಬುವಂತೆ ಬದಲಾವಣೆಗಳನ್ನು ಮಾಡಲು ಸೂಚಿಸದೆ.

ಪರಿಶೀಲನಾ ಸಮಿತಿಯ ಸಲಹೆಗಳು/ತಕರಾರುಗಳು ಈಗ ರಾಜಕೀಯ ಬಣ್ಣ ಪಡೆದಿವೆ. ಪಂಜಾಬ್ ಗಿಂತಲೂ ಯಾವುದಾದರೂ ಕಾಲ್ಪನಿಕ ಪ್ರದೇಶದಲ್ಲಿ ಕಥೆ ನಡೆಯುವಂತೆ ಸೂಚಿಸಲು ಹಲವಾರು ಕಟ್ ಗಳನ್ನು-ಬದಲಾವಣೆಗಳನ್ನು ಸೆನ್ಸಾರ್ ಮಂಡಳಿ ಸೂಚಿಸಿದೆ.

ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯ ಬಗೆಗಿನ ಈ ಚಿತ್ರ ಪಂಜಾಬ್ ಗೆ ಅವಮಾನ ಮಾಡಲಿದೆ ಎಂದು ಪರಿಶೀಲನಾ ಸಮಿತಿ ಅಭಿಪ್ರಾಯ ತಳೆದಿದೆ.

ಇದಕ್ಕೂ ಮುಂಚೆ ಪಂಜಾಬ್ ನ ಆಡಳಿತ ಪಕ್ಷ ಆಕಾಲಿ ದಳ ಈ ಸಿನೆಮಾಗೆ ಆಕ್ಷೇಪ ಎತ್ತಿತ್ತು. ಮುಂದಿನ ವರ್ಷ ಪಂಜಾಬ್ ಚುನಾವಣೆಗಳು ನಡೆಯುವುದರಿಂದ, ಸೆನ್ಸಾರ್ ಮಂಡಲಿ ಮೇಲೆ ರಾಜಕೀಯ ಪಕ್ಷಗಳು ರಾಜಕೀಯ ಪಕ್ಷಗಳು ಪ್ರಭಾವ ಬೀರಿವೆ ಎನ್ನಲಾಗಿದೆ.

ಶಾಹಿದ್ ಕಪೂರ್ ಅವರೊಂದಿಗೆ, ಆಲಿಯಾ ಭಟ್, ಕರೀನಾ ಕಪೂರ್ ಕೂಡ ನಟಿಸಿರುವ ಈ ಸಿನೆಮಾ ಜೂನ್ ೧೭ಕ್ಕೆ ಬಿಡುಗಡೆಯಾಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ